ಕೋವಿಡ್ ಸೋಂಕಿತನೊಬ್ಬ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಭರ್ತಿ –ಆದರೆ ಆತನ ಶವ ಮಾತ್ರ ಚರಂಡಿಯಲ್ಲಿ ಪತ್ತೆ !

JANANUDI.COM NETWORK

ಮೈಸೂರು:ಮೇ. ಕೊರೋನಾ ಮಹಾಮಾರಿ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು,ಜನರು ನರಳಿನರಳಿ ಸಾಯುತಿದ್ದಾರೆ, ಇದೀಗ ಮೈಸೂರು ಚಾಮರಾಜ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಅಸಹಯಕರ ಘಟ್ನೆನಡೆದಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಹಲವಾರು ಜೀವಗಳು ಲೆಕ್ಕೆ ಇಲ್ಲದಷ್ಟು ಬಲಿಯಾಗುತ್ತಿರುವಾಗ,  ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಘಟನೆ ನಡೆದಿದ್ದು, ಮೋರಿಯಲ್ಲಿ ಕೊರೊನಾ ಸೋಂಕಿತನ ಶವ ಪತ್ತೆಯಾಗಿದ್ದು ಅಘಾತಕಾರಿ ಪ್ರಕರಣವಾಗಿದೆ. ಜಿಲ್ಲಾಸ್ಪತ್ರೆ ಸಿಬ್ಬಂದಿಗಳ ಇಂತಹ ಬೇಜವಾಬ್ಧಾರಿ ಕಾರ್ಯಕ್ಕೆ ಜನರು ಹಿಡಿಶಾಪ ಹಾಕುತ್ತಾ ಇದ್ದಾರೆ.

   ಕೋವಿಡ್  ಸೊಂಕಿನಿಂದ ಬಳಲುತ್ತಿದ್ದ ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಸುರೇಶ್ ಎಂಬುವವರನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.ಆಸ್ಪತ್ರೆಯ ಬಿಜವಾಬ್ದಾರಿಯಲ್ಲಿ ಸುರೇಶ್ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ, ಆದರೆ ಜಿಲ್ಲಾಸ್ಪತ್ರೆ ಸುರೇಶ್ ನಾಪತ್ತೆಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆದೆ. ಆದರೆ ಆತನು ಸತ್ತು ಶವಗಾಗಿ ಇಂದು ರಸ್ತೆ ಪಕ್ಕದ ಮೋರಿಯಲ್ಲಿ ಪತ್ತೆಯಾಗಿದೆ.

    ಮೋರಿಯಲ್ಲಿ ಶವ ಪತ್ತೆಯಾದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಅನಾಥ ಶವವೆಂದು ಶವಾಗಾರಕ್ಕೆ ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ.