ಕೇಂದ್ರ ಸರ್ಕಾರವು ಹಣವಂತರಿಗೆ ಒಂದು ನೀತಿ , ಬಡವರಿಗೆ ಒಂದು ನೀತಿಯನ್ನು ಅನುಸರಿಸುತ್ತಿದೆ : ಜಿ.ಸಿ. ಬಯ್ಯಾರೆಡ್ಡಿ

ಶ್ರೀನಿವಾಸಪುರ : ಕೇಂದ್ರ ಸರ್ಕಾರವು ಹಣವಂತರಿಗೆ ಒಂದು ನೀತಿ , ಬಡವರಿಗೆ ಒಂದು ನೀತಿಯನ್ನು ಅನುಸರಿಸುತ್ತಿದ್ದು, ಇದರಿಂದಾಗಿ ಜನಸಾಮಾನ್ಯರು ಕೇಂದ್ರ ಸರ್ಕಾರದ ದ್ವಂದ ನೀತಿಗಳಿಂದ ತತ್ತರಿಸುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ವ್ಯಕ್ತಡಿಸಿದರು.
ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ರೈತ ಸಂಘದ ಜಿಲ್ಲಾ ಸಮ್ಮೇಳನದ ನಿರ್ಣಯಗಳ ಬಿಡುಗಡೆಗಾಗಿ ನಡೆದ ಪತ್ರಿಕಾಗೋಷ್ಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರಕ್ಕೆ ರೈತ ಬಗ್ಗೆ ಕಾಳಜಿ ಇಲ್ಲ. ಅದೋನಿ ಆದಾಯ ವರ್ಷಕ್ಕೆ 11ಲಕ್ಷ ಕೋಟಿ, ಅಂಬಾನಿ ಆದಾಯ ವರ್ಷಕ್ಕೆ 9ಲಕ್ಷ ಕೋಟಿ . ಬ್ಯಾಂಕುಗಳ ಮೂಲಕ ಇವರುಗಳು ಕೋಟಿ , ಕೋಟಿಗಳಷ್ಟು ಸಾಲ ಪಡೆಯುತ್ತಾರೆ . ಕೋಟಿಗಟ್ಟಲೇ ಸಾಲ ಪಡೆದವರ ಸಾಲ ಮನ್ನಾ ಮಾಡಿಸಿ, ಕೇಂದ್ರ ಸರ್ಕಾರವು ಅವರನ್ನ ವಿದೇಶಕ್ಕೂ ಕಳುಹಿಸುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.
ಆದರೆ ನಮ್ಮ ರೈತರು ಅಲ್ಪಸ್ವಲ್ಪ ಸಾಲ ಪಡೆದ ಹಣವನ್ನು ಮನ್ನ ಮಾಡದೆ, ಮನೆ ಮುಂದೆ ತಮಟೆ ಭಾರಿಸುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು? ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳ ಬಗ್ಗೆ ಹಾಗೂ ರೈತರ ಬೇಡಿಕೆ ಈಡೇರಲು, ರೈತ ಚಳುವಳಿಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದರು.
ಈ ಸಭೆಯಲ್ಲಿ ಕಾರ್ಪೊರೇಟ್ ಮತ್ತು ಬಂಡವಾಳಗಾರರ ಪರವಾಗಿರುವ ರಾಜ್ಯ ಸರ್ಕಾರದ ಭೂಸುಧಾರಣಾ ಕಾಯ್ದೆಗಳ ಮತ್ತು ರೈತ ವಿರೋಧಿ ಕೃಷಿ ಕಾಯ್ದೆಗಳ ವಾಪಸ್ಸಿಗಾಗಿ ಒತ್ತಾಯಿಸಿ ನಿರ್ಣಯ, ಮಾವು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ನಿರ್ಣಯವನ್ನು ಪ್ರಾಂತ ರೈತ ಸಂಘವು ಕೈಗೊಂಡಲಾಯಿತು ಎಂದು ಮಾಹಿತಿ ನೀಡಿದರು .
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ್ ಮಾತನಾಡಿ ಉಳುವವನಿಗೆ ಭೂಮಿ ಕಾಯ್ದೆ ಅಡಿಯಲ್ಲಿ ರೈತರಿಗೆ ಭೂಮಿ ನೀಡುವ ವ್ಯವಸ್ಥೆ ಆಗಬೇಕು. ಖಾಸಿಗಿ ಕಂಪನಿಗಳು ಈ ದೇಶದ ಕೃಷಿಯನ್ನು ಭೂಮಿಯನ್ನು ಲೂಟಿ ಹೊಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 3.40 ಲಕ್ಷ ಜನ ರೈತರಿದ್ದು, 2ಲಕ್ಷ ಜನ ರೈತರು ಮಾತ್ರ ವ್ಯವಸಾಯ ಮಾಡುತ್ತಿದ್ದು, ಸರ್ಕಾರದಿಂದ ಬರುವ ಸೌಲಭ್ಯಗಳು ಸಮಪರ್ಕವಾಗಿ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೆ.ಪಿ.ಆರ್.ಎಸ್ ಜಿಲ್ಲಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ, ರೈತ ಮುಖಂಡ ಬಿ.ವಿ.ಶಿವಾರೆಡ್ಡಿ, ಡಾ|| ವೆಂಕಟಾಚಲ, ಎಸ್.ಸಿ. ಮುರಳಿನಾಥ್, ಎಂ.ಎಸ್. ಕೋಟೇಶ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಪಾತಕೋಟೆ ನವೀನ್ ಕುಮಾರ್ ಇದ್ದರು.