![](https://jananudi.com/wp-content/uploads/2023/09/5-Mazer-1.jpg)
![](https://jananudi.com/wp-content/uploads/2023/09/00-aaa-Rohan-City-1-1.jpg)
![](https://jananudi.com/wp-content/uploads/2023/09/1-44.jpg)
ಕುಂದಾಪುರ :ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹು ಸಲ್ಲಮ್ ಅವರ ಜನ್ಮದಿನಾಚಾರಣೆಯ ಅಂಗವಾಗಿ ಕುಂದಾಪುರ ಜಾಮಿಯಾ ಮಸೀದಿ ಹಾಗೂ ಮುಸ್ಲಿಂ ವೆಲ್ ಫೇರ್ ಆಶ್ರಯದಲ್ಲಿ ಸ್ವಲಾತ್ ಪಠಣ ದೊಂದಿಗೆ ನಗರದಲ್ಲಿ ಸಂಭ್ರಮದ ಜುಲುಸ್
( ಮೆರವಣಿಗೆ) ನಡೆಯಿತು. ಅಸಂಖ್ಯಾತ ಮುಸ್ಲಿಂ ಬಾಂಧವರ ಪಾಲ್ಗೊಂಡಿದ್ದ ಈ ಜುಲುಸ್ ಬೆಳಿಗ್ಗೆ ಕುಂದಾಪುರ ಜಾಮಿಯಾ ಮಸೀದಿಯಿಂದ ಆರಂಭಗೊಂಡು ಪ್ರಮುಖ ಬೀದಿಗಳಿಂದ ಶಾಸ್ತ್ರಿ ಸರ್ಕಲ್ ತನಕ ಸಾಗಿ ಕುಂದಾಪುರ ಸಯ್ಯದ್ ವಲಿಯುಲ್ಲಾ ದರ್ಗಾದ ಬಳಿ ಸಮಾಪನ ಗೊಂಡಿತು. ಮೆರವಣಿಗೆಯಲ್ಲಿ ಪ್ರವಾದಿಯವರ ಉದ್ಘೋಷಗಳನ್ನು ಪ್ರಚುರ ಪಡಿಸಲಾಯಿತು.
ಈ ಸಂದರ್ಭದಲ್ಲಿ ಖತೀಬರಾದ ಮೌಲಾನ ತಬ್ರೆಜ್ ಆಲಂ ,ಜಾಮಿಯಾ ಮಸೀದಿ ಅಧ್ಯಕ್ಷರಾದ ವಸೀಮ್ ಭಾಷಾ, ಕಾರ್ಯದರ್ಶಿ ತಬ್ರೇಜ್ ಜೂಕಾಕೊ, ಮುಸ್ಲಿಂ ವೆಲ್ ಫೇರ್ ಅಧ್ಯಕ್ಷರಾದ ನವಾಜ್ ಅಬ್ದುಲ್ ಮಜೀದ್ ಸಹಿತ ಸಮಾಜ ಧುರೀಣರು ಉಪಸ್ಥಿತರಿದ್ದರು.
ದಿನಾಚರಣೆಯ ಅಂಗವಾಗಿ ಸರ್ವಧರ್ಮಿಯರಿಗೂ ಸಿಹಿ ತಿಂಡಿ,ಲಘು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.
![](https://jananudi.com/wp-content/uploads/2023/09/68ac3617-7a9f-4725-8cc2-9c1fa03b0b00.jpg)
![](https://jananudi.com/wp-content/uploads/2023/09/b60a5c7b-af49-4ff7-930e-05c0110270ac.jpg)
![](https://jananudi.com/wp-content/uploads/2023/09/c2a42feb-2fea-4b54-a8ad-f5d9962df412.jpg)
![](https://jananudi.com/wp-content/uploads/2023/09/c5150639-5d80-4485-827f-88f62f0cdec6.jpg)