ಚೈತನ್ಯ ವಿಶೇಷ ಶಾಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಲಯನ್ಸ್ ಕ್ಲಬಿನ ಜಂಟಿ ಆಶ್ರಯದಲ್ಲಿ ಆಚರಣೆ

ಕುಂದಾಪುರ: ಚೈತನ್ಯ ವಿಶೇಷ ಶಾಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಲಯನ್ಸ್ ಕ್ಲಬಿನ ಜಂಟಿ ಆಶ್ರಯದಲ್ಲಿ ಆಚರಿಸಲಾಯಿತು. ಕ್ಲಬಿನ ಹಿರಿಯ ಸದಸ್ಯ ಲ.ಬಿ. ನಾರಾಯಣ ಶೆಟ್ಟಿಯವರು ಧ್ವಜಾರೋಹಣವನ್ನು ಮಾಡಿದರು. ಕ್ಲಬಿನ ಅಧ್ಯಕ್ಷ ನವೀನ ಕುಮಾರ ಶೆಟ್ಟಿ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ನೀಡಿದರು. ಲಯನ್ ಚಂದ್ರಶೇಖರ ಕಲ್ಪತರು ದಂಪತಿಗಳು ರೂ. 25,000 ಮೌಲ್ಯದ ಸಮವಸ್ತ್ರವನ್ನು ಶಾಲೆಯ ಮಕ್ಕಳಿಗೆ ವಿತರಿಸಿದರು. ಲ. ರಾಜೀವ ಕೋಟ್ಯಾನ್ ಸಿಹಿತಿಂಡಿ ವಿತರಿಸಿದರು. ಕ್ಲಬಿನ ಕೋಶಾಧಿಕಾರಿ ಲ. ಶಂಕರ ಶೆಟ್ಟಿ, ವೇಣುಗೋಪಾಲ ಶೆಟ್ಟಿ, ಸುರೇಂದ್ರ ಶೆಟ್ಟಿ, ಸಂತೋಷ ಕುಮಾರ ಶೆಟ್ಟಿ, ಅಮರನಾಥ ಶೆಟ್ಟಿ , ಪಿಡಿಜಿ ಪ್ರಕಾಶ ಸೋನ್ಸ್, ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಶೋಭಾ ಸೋನ್ಸ್, ಕಾರ್ಯದರ್ಶಿ ಶ್ರೀಮತಿ ಸುಜಾತಾ ನಕ್ಕತ್ತಾಯ, ಸದಸ್ಯರಾದ ಶ್ರೀಮತಿ ವತ್ಸಲಾ ಶೆಟ್ಟಿ, ಶ್ರೀಮತಿ ಅನುರಾಧ ಯು. ಭಟ್ ಹಾಗೂ ಶ್ರೀಮತಿ ಜಯಶ್ರೀಯವರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.