ಓಸ್ಕರ್ ಫೆರ್ನಾಂಡಿಸ್‌ ನಿಧನಕ್ಕೆ ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ ಸಂತಾಪ

JANANUDI.COM NETWORK


ಕೇಂದ್ರದ ಮಾಜಿ ಸಚಿವ ಹಿರಿಯ ಕಾಂಗ್ರೆಸ್‌ ನಾಯಕ ಓಸ್ಕರ್ ಫೆರ್ನಾಂಡಿಸ್‌ ಅವರ ನಿಧನಕ್ಕೆ ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ ಅತೀವ ಸಂತಾಪ ವ್ಯಕ್ತಪಡಿಸಿದೆ
ಆಸ್ಕರ್‌ ಫೆರ್ನಾಂಡಿಸ್‌ ನಿಧನಕ್ಕೆ ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ ಸಂತಾಪಶ್ರೀಸಾಮಾನ್ಯರ ಪ್ರಭಾವಿ ಸಂಘಟನೆಯಾಗಿರುವ ಕೆಥೊಲಿಕ್‌ ಸಭಾವನ್ನು ಈ ಹಿಂದಿನ ಮಂಗಳೂರು ಧರ್ಮಪ್ರಾಂತ್ಯ ವಿದ್ದ ವೇಳೆಯಲ್ಲಿ ಹುಟ್ಟುಹಾಕಿ ಅದರ ಸ್ಥಾಪಕ ಅಧ್ಯಕ್ಷರಾಗಿ ಸಂಘಟನೆಯ ಏಳಿಗೆಗಾಗಿ ಅವರು ವಹಿಸಿದ ನಾಯಕತ್ವ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾದುದು. ಅವರು ಸಂಘಟನೆಗೆ ಹಾಕಿದ ಭದ್ರ ಬುನಾದಿಯ ಫಲವಾಗಿ ಇಂದು ಕೆಥೊಲಿಕ್‌ ಸಭಾ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಮುದಾಯದ ಪ್ರಭಾವಿ ಸಂಘಟನೆಯಾಗಿ ಬೆಳೆದು ಬಂದಿದೆ.
ಸಂಘಟನೆಯೊಂದಿಗೆ ರಾಜಕೀಯ ರಂಗದಲ್ಲಿ ಕೂಡ ಅವರು ನೀಡಿದ ಮಾದರಿ ಸೇವೆಯನ್ನು ಇಂದು ಪ್ರತಿಯೊಬ್ಬರೂ ಕೂಡ ಪಕ್ಷಾತೀತವಾಗಿ ಕೊಂಡಾಡುತ್ತಿದ್ದಾರೆ. ಲೋಕಸಭಾ ಸದಸ್ಯರಾಗಿ ರಾಜ್ಯ ಸಭಾ ಸದಸ್ಯರಾಗಿ ಅವರು ದೇಶಕ್ಕೆ ಸಲ್ಲಿಸಿದ ಸೇವೆ ಅನನ್ಯವಾಗಿದ್ದು ಒರ್ವ ಸರಳ ಹಾಗೂ ಸಜ್ಜನ ನಾಯಕರಾಗಿ ತಮ್ಮ ಸೇವೆಯನ್ನು ಈ ದೇಶಕ್ಕೆ ನೀಡಿದ್ದಾರೆ. ಅವರ ನಿಧನ ಕೆಥೊಲಿಕ್‌ ಸಭಾ ಸಂಘಟನೆಗೆ ಹಾಗೂ ಇಡೀ ರಾಷ್ಟ್ರ ಬಹುದೊಡ್ಡ ನಷ್ಟವಾಗಿದ್ದು ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ. ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಸಂಘಟನೆಯ ಅಧ್ಯಕ್ಷರಾದ ಮೇರಿ ಡಿʼಸೋಜಾ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.