
JANANUDI.COM NETWORK ಬೆಂಗಳೂರು : ಶಾಪಿಂಗ್ಗೆ ಬಂದಿದ್ದ ಯುವ ಜೋಡಿಯೊಂದು ಕಾಂಪ್ಲೆಕ್ಸ್ನಿಂದ ಬಿದ್ದು ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಬ್ರಿಗೇಡ್ ರಸ್ತೆಯಲ್ಲಿ ನಡೆದಿದೆ.ಮೃತಪಟ್ಟ ವಿದ್ಯಾರ್ಥಿನಿಯನ್ನು ಲಿಯಾ (18) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿ ಕ್ರಿಸ್ ಪೀಟರ್ ಗಂಭೀರ ಗಾಯಗೊಂಡಿದ್ದಾನೆ.ಸೆಂಟ್ ಜೋಸೆಫ್ ಕಾಲೇಜ್ನಲ್ಲಿ ದ್ವಿತೀಯ ವರ್ಷದ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಾಗಿರುವ ಇಬ್ಬರೂ ಇವತ್ತು ಶಾಪಿಂಗ್ಗೆ ಬಂದಿದ್ದರು. ಈ ವೇಳೆ ಕಾಲು ಜಾರಿ ಕಟ್ಟಡದ ಎರಡನೇ ಮಹಡಿಯಿಂದ ಯುವತಿ ಬಿದ್ದಿದ್ದಾಳೆ. ಯುವತಿ ಹಿಡಿದುಕೊಳ್ಳಲು ಹೋಗಿ ಯುವಕ […]

JANANUDI.COM NETWORK ಕುಂದಾಪುರದ ಪ್ರತಿಷ್ಠಿತ ಸಂತ ಜೋಸೆಫರ ಅನುದಾನಿತ ಪ್ರೌಢ ಶಾಲೆಯಲ್ಲಿ ಒಟ್ಟು 28 ವಿದ್ಯಾರ್ಥಿಗಳು ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 26 ವಿದ್ಯಾರ್ಥಿಗಳು ಪಾಸಾಗುವುದರ ಮೂಲಕ ಶೇಕಡ 92.85 ಫಲಿತಾಂಶ ದಾಖಲಾಗಿದೆ. ಆದಿತ್ಯ ಬಿಲ್ಲವ (591) , ಸಹನಾ.ಎನ್.ಪುತ್ರನ್ (591) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ರಶ್ಮಿ (588) ದ್ವಿತೀಯ ಸ್ಥಾನ , ಪ್ರಗತಿ (584) ಅಂಕಗಳನ್ನು ಪಡೆದು ತ್ರತೀಯ ಸ್ಥಾನ ಪಡೆದಿರುತ್ತಾರೆ. ಕುಮಾರಿ ರಶ್ಮಿ ಹಿಂದಿ ಹಾಗೂ ಸಮಾಜ […]

JANANUDI.COM NETWORK ಕುಂದಾಪುರ, ಮೇ. 20: ಇಂದು ಬೆಳಿಗ್ಗೆ ಯುವ ಮೇರಿಡಿಯನ್ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಕೆ.ಪಿ.ಸಿ.ಸಿ ಅಧ್ಯಕ್ಷ ಶ್ರೀ ಡಿ.ಕೆ ಶಿವಕುಮಾರ್ ರವರು ಡಿಜಿಟಲ್ ಸದಸ್ಯತ್ವ, ಪ್ರತಿ ಬೂತ್ ನಲ್ಲಿ ಹೆಚ್ಚಿನ ನೊಂದಣಿಯನ್ನು ನೊಂದಾಯಿಸಿ ಬೂತ್ ಸಮಿತಿಯನ್ನು ರಚಿಸಬೇಕಾಗಿ ಕರೆಯನ್ನು ನೀಡಿದರು. ಆಡಳಿತದಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳಿಂದ ಜನ ಸಾಮಾನ್ಯರು ಬೆಸತ್ತಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವುದು ಖಚಿತವೆಂದರು. […]

JANANUDI.COM NETWORK ಬೆ೦ಗಳೂರು:ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಮೇ 27 ರಿ೦ದ ಜೂನ್ 4 ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇ೦ದು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾ೦ಶ ಘೋಷಣೆ ನಂತರಈ ವಿಷಯ ಸ್ಮಷ್ಠಪಡಿಸಿದ್ದಾರೆ. ಎ೦ದಿನ೦ತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಮಾರೆ ಫಲಿತಾಂಶದಲ್ಲಿ ಈ ಬಾರಿ ವಿದ್ಯಾರ್ಥಿಗಳುಗಣನೀಯ ಸಾಧನೆ ಮಾಡಿದ್ದಾರೆ. ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳ ಶೈಕ್ಷಣಿಕಇತಿಹಾಸದಲ್ಲಿ ಈ ಬಾರಿ ಅತ್ಯುತ್ತಮ […]

JANANUDI.COM NETWORK ಬೆ೦ಗಳೂರು :ಮಹತ್ವದ ಎಸ್ಸೆಸ್ಸೆಲ್ಸಿ ಫಲಿತಾ೦ಶ ಪ್ರಕಟಗೊಂಡಿದೆ. ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳು ಎಂದಿನಂತೆ ಎ ಗ್ರೇಡ್ದಲ್ಲಿ ಸಾಧನೆ ಮರೆದಿವೆ.ರಾಜ್ಯದಲ್ಲಿ ಈ ಸಲ ಒಟ್ಟು 7,30,881 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 85.53 ಒಟ್ಮಾರೆ ಫಲಿತಾಂಶವಾಗಿದೆ. ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಕಳೆದ ಹತ್ತು ವರ್ಷದಲ್ಲೇ ದಾಖಲೆ ಫಲಿತಾ೦ಶ ಈ ಬಾರಿ ಆಗಿದೆ ಎ೦ದು ಸಚಿವ ನಾಗೇಶ್ ಸೃಷ್ಠಪಡಿಸಿದರು.ಈ ಬಾರಿ ಯಾವುದೇ ಜಿಲ್ಲೆಗಳಿಗೆ ರೇಂಕ್ ಘೋಷಣೆ ಮಾಡಿಲ್ಲ. ಬೆ೦ಗಳೂರು ಸೌತ್ ಹಾಗೂ ಯಾದಗಿರಿ ಜಿಲ್ಲೆಗಳು ಬಿ.ಗ್ರೇಡ್ ನಲ್ಲಿ ಕಾಣಿಸಿಕೊ೦ಡಿದ್ದು ಉಳಿದ ಮೂವತ್ತರಡು […]

JANANUDI.COM NETWORK ಬೆಂಗಳೂರು: ಮೇ.16ರಿಂದ ಶಾಲಾ-ಕಾಲೇಜುಗಳು ರಾಜ್ಯಾಧ್ಯಂತ ಆರಂಭಗೊಂಡಿದ್ದು, ಇದರ ಬೆನ್ನಲ್ಲೇ ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ, ಪಿಯು ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಬೇಕೆಂದು ಪಿಯು ಬೋರ್ಡ್ ಆದೇಶಿಸಿದೆ.ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಆಯಾ ಕಾಲೇಜು ಅಭಿವೃದ್ಧಿ ಸಮಿತಿಯು ನಿರ್ಧರಿಸಿರುವಂತ ಸಮವಸ್ತ್ರಗಳನ್ನು ಧರಿಸತಕ್ಕದ್ದು. ಆಡಳಿತ ಮಂಡಳಿಗಳು, ಸಿಡಿಸಿ ಸಮವಸ್ತ್ರವನ್ನು ನಿಗದಿಪಡಿಸದೇ ಇದ್ದಲ್ಲಿ, ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರದಂತೆ ಇರುವ ಉಡುಪುಗಳನ್ನು ಧರಿಸುವಂತೆ ತಿಳಿಸಿದೆ.ಇದಷ್ಟೇ ಅಲ್ಲದೇ […]

JANANUDI.COM NETWORK ಬೆ೦ಗಳೂರು: ನಾಳೆ ಮಧ್ಯಾಹ್ನ 12.30ಕ್ಕೆ ಎಸ್ ಎಸ್ ಎಲ್ ಸಿ ಫಲಿತಾ೦ಶ ಪ್ರಕಟಿಸಲಾಗುತ್ತದೆ. ಮಧ್ಯಾಹ್ನ 1 ಗ೦ಟೆ ಬಳಿಕ ಇಲಾಖೆಯ ವೆಬ್ಸೈಟ್ನಲ್ಲಿ, https://karresults.nic.in ಫಲಿತಾ೦ಶ ಲಭ್ಯವಾಗಲಿದೆ. ನೋಂದಾಯಿಸಿಕೊ೦ಡಿರುವ ವಿದ್ಯಾರ್ಥಿಗಳಫೋನ್ ನ೦ಬರ್ಗಳಿಗೆ ಎಸ್ ಎ೦ ಎಸ್ ಮೂಲಕ ಫಲಿತಾ೦ಶ ಕಳುಹಿಸಲಾಗುತ್ತದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷ ಮ೦ಡಳಿ ಈ ಕುರಿತು ಮಾಹಿತಿ ಬಿಡುಗಡೆ ಮಾಡಿದೆ. ಮೇ.19ರ೦ದು ಮಧ್ಯಾಹ್ನ 12.30ಕ್ಕೆ ಎಸ್ ಎಸ್ ಎಲ್ ಸಿ ಫಲಿತಾ೦ಶವನ್ನುಮಲ್ಲೇಶ್ದರ೦ನಲ್ಲಿರುವಂತ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮ೦ಡಳಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ […]

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ,ಮೇ.17:ನಗರದ ಪರ್ತಕರ್ತರ ಭವನದಲ್ಲಿ ಪತ್ರಕರ್ತರ ಜ್ಞಾನವೃದ್ಧಿಗಾಗಿ ಗ್ರಂಥಾಲಯ ವ್ಯವಸ್ಥೆ ಮಾಡಲು ಸಂಘದ ಅಧ್ಯಕ್ಷ ಬಿ.ವಿ ಗೋಪಿನಾಥ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.ಇದರ ಭಾಗವಾಗಿ ಸಂಘದ ಕಚೇರಿಯ ಮೊದಲ ಮಹಡಿಯಲ್ಲಿ ಎಲ್ಲಾ ಕನ್ನಡ ರಾಜ್ಯಮಟ್ಟದ ದಿನಪತ್ರಿಕೆಗಳು ಹಾಗೂ ಜಿಲ್ಲೆಯ ಸ್ಥಳೀಯ ಪತ್ರಿಕೆಗಳನ್ನು ದೊರಕಿಸಲು ನಿರ್ಧರಿಸಲಾಗಿದೆ.ಸಾರ್ವಜನಿಕರಲ್ಲಿ ಕನ್ನಡ ಪತ್ರಿಕೆಗಳು ಕೊಂಡು ಓದುವಂತೆ ಪ್ರೇರೇಪಿಸುವ ಸಲುವಾಗಿ ಸಂಘಕ್ಕೆ ಸರಬರಾಜಾಗುವ ಎಲ್ಲಾ ದಿನಪತ್ರಿಕೆಗಳಿಗೆ ಮಾಸಿಕ ಚಂದಾವನ್ನು ಪಾವತಿಸುವ ಮೂಲಕ ಸಾರ್ವಜನಿಕರು ಸಹ ಕನ್ನಡ ದಿನಪತ್ರಿಕೆಗಳನ್ನು ಕೊಂಡು […]

JANANUDI.COM NETWORK ಬೆಂಗಳೂರು: ಅರಬ್ಬೀ ಸಮುದ್ರದಿಂದ ಪಶ್ಚಿಮ ಕರಾವಳಿಗೆ ತೇವಾಂಶ ತುಂಬಿದ ಗಾಳಿಯು ವೇಗವಾಗಿ ಬೀಸುತ್ತಿರುವುದು ಹಾಗೂ ಲಕ್ಷದ್ವೀಪದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಪರಿಣಾಮ ರಾಜ್ಯದಲ್ಲಿ ಮುಂದಿನ 4 ರಿಂದ 5 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು, ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.ಅರಬ್ಬೀ ಸಮುದ್ರದಿಂದ 1.5 ಕಿಮೀ ಎತ್ತರದಲ್ಲಿ ಪಶ್ಚಿಮ ಕರಾವಳಿ ಪ್ರದೇಶಕ್ಕೆ ತೇವಾಂಶ ತುಂಬಿದ ಗಾಳಿಯು ವೇಗವಾಗಿ ಬೀಸುತ್ತಿರುವ ಕಾರಣ ಕೇರಳ ಮತ್ತು ಕರ್ನಾಟಕದಲ್ಲಿ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.ರಾಜ್ಯದಲ್ಲಿ ಮುಂದಿನ 4ರಿಂದ5 ದಿನಗಳ […]