
ವರದಿ: ಷಬ್ಬೀರ್ ಅಹ್ಮದ್ ಕೋಲಾರ :ಹೊಸ ಖಾಸಗಿ ಶಾಲೆಗಳಿಗೆ ಅನುಮತಿ ನೀಡಬಾರದು ಹಾಗೂ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸಬೇಕು- ರೈತ ಸಂಘ ಕೋಲಾರ,15, ಹೊಸ ಖಾಸಗಿ ಶಾಲೆಗಳಿಗೆ ಅನುಮತಿ ನೀಡಬಾರದು ಹಾಗೂ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸಬೇಕು. ಮತ್ತು ಖಾಸಗಿ ಶಾಲೆಗಳ ಡೊಣೇಷನ್ ಹಾವಳಿಗೆ ಕಡಿವಾಣ ಹಾಕಿ ಬಟ್ಟೆ ಮತ್ತು ಪುಸ್ತಕದಿಂದ ಹಿಡಿದು ಶೂ ವರೆಗೂ ಪೋಷಕರ ಬಳಿ ಹಗಲು ದರೋಡೆ ಮಾಡುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಂಡು ಸರ್ಕಾರದ ಆರ್.ಟಿ.ಇ ಆದೇಶವನ್ನು ಎಲ್ಲಾ ಶಾಲೆಗಳಿಗೆ […]

ವರದಿ: ಶಬ್ಬೀರ್ ಅಹ್ಮದ್ ನಾಪತ್ತೆಯಾಗಿರುವ ಕೋಲಾರ ಜಿಲ್ಲಾ ಉಸ್ತುವಾರಿ ಮಂತ್ರಿ ಸಿ.ಬಿ.ಕೃಷ್ಣಬೈರೇಗೌಡನ್ನು ಹುಡುಕಿಕೊಡಲು ದೂರು ಕೋಲಾರ : ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಬಿ.ಕೃಷ್ಣಬೈರೇಗೌಡರು ಮೂರು ತಿಂಗಳಿನಿಂದ ಕಾಣೆಯಾಗಿದ್ದು, ಅವರನ್ನು ಹುಡುಕಿ ಕೊಡಬೇಕೆಂದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರೈತ ನಾಯಕ ಪ್ರೋ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ದೂರು ನೀಡಲಾಯಿತು. ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಮಾತನಾಡಿ ಕೋಲಾರ ಜಿಲ್ಲೆಯು ಸತತವಾಗಿ ಬರಗಾಲದಿಂದ ಕೂಡಿದ್ದು, ಕೋಲಾರ ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಬಂದ ಬಿರುಗಾಳಿ […]

ವರದಿ:ಶಬ್ಬೀರ್ ಅಹ್ಮದ್ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಕಕ್ಕೆ ಆಗ್ರಹ ಕೋಲಾರ-ಮೇ.10: ಸಾವಿರಾರು ಕೋಟಿ ವ್ಯವಹಾರ ನಡೆಯುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಪೊಲೀಸ್ ವರಿಷ್ಠಾಧಿಕಾರಿಗಳಾದ ರೋಹಿಣಿ ಕಟೋಚ್ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.. ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾದ ಕೋಲಾರ ಎ.ಪಿ.ಎಂ.ಸಿ. ರೈತರ ಒಡನಾಡಿ ಹಾಗೂ ಸಾವಿರಾರು ಕೋಟಿ ವ್ಯವಹಾರ […]

ವರದಿ:ಶಬ್ಬೀರ್ ಅಹ್ಮದ್ ಮಕ್ಕಳಲ್ಲಿ ಉತ್ತಮ ಆರೋಗ್ಯ, ಸಮಾಜಮುಖಿ ಮನಸ್ಥಿತಿಗೆ ಯೋಗ ಮತ್ತು ಕ್ರೀಡೆಗಳು ಹೆಚ್ಚು ಸಹಕಾರಿ-ವಿ.ಮುನಿರಾಜು ಕೋಲಾರ:- ಉತ್ತಮ ಆರೋಗ್ಯ ಮತ್ತು ಸಮಾಜಮುಖಿ ಕಾರ್ಯಕಗಳತ್ತ ಒಲವು ಹೆಚ್ಚಲು ಯೋಗ ಮತ್ತು ಕ್ರೀಡೆ ಹೆಚ್ಚು ಸಹಕಾರಿ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಅಭಿಪ್ರಾಯಪಟ್ಟರು. ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಗನ್ ಸ್ಪೋಟ್ಸ್ ಕ್ಲಬ್ ವತಿಯಿಂದ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಯೋಗ ತರಬೇತಿ ನೀಡಿ ಅವರು ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಪದ್ದತಿಯಲ್ಲಿನ […]

ವರದಿ:ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ: ಪುರಸಭೆ ಚುನಾವಣೆ ಗರಿಗೆದರಿದೆ. ವಾರ್ಡ್ ಗಳ ವಿಂಗಡಣೆ ಯಿಂದ ಕ್ಷೇತ್ರ ಕಳೆದುಕೊಂಡ ಕೆಲ ಹಾಲಿ ಸದಸ್ಯರು, ಆಕಾಂಕ್ಷಿಗಳು ಸೂಕ್ತ ವಾರ್ಡ್ಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಇದರ ನಡುವೆ ಪುರಸಭೆಗೆ ನೂತನವಾಗಿ ಸೇರ್ಪಡೆಗೊಂಡಶ್ರೀನಿವಾಸಪುರ: ಪುರಸಭೆ ಚುನಾವಣೆ ಗರಿಗೆದರಿದೆ. ಕೊಳ್ಳೂರು, ಬೈರಪ್ಪಲ್ಲಿ , ಉನಿಕಿಲಿ, ಎಚ್ ನಲ್ಲಪಲ್ಲಿ, ಗ್ರಾಮಗಳ ಮತದಾರರನ್ನು ಜೋಡಿಸಿ 23 ವಾರ್ಡ್ಗಳಲ್ಲಿ ಹಂಚಿಕೆ ಮಾಡಿದ್ದಾರೆ. ಕೆಲವೊಂದು ವಾರ್ಡ್ ಗಳಲ್ಲಿ ಒಂದೇ ಕುಟುಂಬ ವ್ಯಕ್ತಿಗಳನ್ನು ಎರಡು ವಾರ್ಡ್ ಗಳಿಗೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪಗಳು ಕೇಳಿಬಂದಿವೆ […]

ವರದಿ: ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ: ವಿಜೃಂಭಣೆಯ 105ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕನ್ನಡ ಸಾಹಿತ್ಯ ಭಾಷೆ ಯಾವುದೇ ಜಾತಿ ಮತ ಬೇಧವಿಲ್ಲದೆ ಇರುವಂತಹ ಸಾಹಿತ್ಯ ಕನ್ನಡ ನಾಡಿನ ಸಮಸ್ತ ಕನ್ನಡಿಗರಿಗೆ ನಾಡು ಮತ್ತು ಭಾಷೆ ಹೃದಯ ಮಿಡಿತವಾಗಿದೆಯೆಂದು ಐಐಬಿಎಂ ವಿಧ್ಯಾಸಂಸ್ಥೆಗಳ ಅಧ್ಯಕ್ಷೆ ಖುರ್ಷಿದ್ ಉನ್ನೀಸಾ ಹೇಳಿದರು. ಪಟ್ಟಣದ ಐಐಬಿಎಂ ಕಾಲೇಜು ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಲಾಗಿದ್ದ 105ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ನಾಡಿನ […]

ವರದಿ:ಶಬ್ಬೀರ್ ಅಹ್ಮದ್ ಕೋಲಾರ: ಕಾಡುಪ್ರಾಣಿಗಳು ಹಾವಳಿಗೆ ಶಾಶ್ವತ ಪರಿಹಾರ ಬೇಕು ರೈತ ಸಂಘ ಕೋಲಾರ,ಮೇ.04: ಕಾಡುಪ್ರಾಣಿಗಳು ಹಾವಳಿಗೆ ಶಾಶ್ವತ ಪರಿಹಾರ ಹುಡಕಬೇಕು ಹಾಗೂ ಬೆಳೆ ನಷ್ಟವಾಗಿರುವ ರೈತರ ಪ್ರತಿ ಎಕರೆಗೆ 5 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಅರಣ್ಯ ಇಲಾಖೆ ಮ್ಯಾನೇಜರ್ ಪುರುಷೋತ್ತಮ್ರವರಿಗೆ ಮನವಿ ನೀಡಿ ಅಗ್ರಹಿಸಲಾಯಿತು. ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಒಂದು ಕಡೆ ಬೀಕರವಾದ ಬರಗಾಲ ಮತ್ತೊಂದೆಡೆ ಆಲಿಕಲ್ಲು ಮಳೆ ಮತ್ತು ಬಿರುಗಾಳಿಗೆ ಬೆಳೆ ನಾಶವಾಗಿ ಸಂಕಷ್ಟದಲ್ಲಿರುವ ರೈತರಿಗೆ ಕಾಡು […]

ವರದಿ:ಶಬ್ಬೀರ್ ಅಹ್ಮದ್ ಕೋಲಾರ ಕೆನರಾ ಬ್ಯಾಂಕ್ ಸ್ವಉದ್ಯೋಗತರಬೇತಿ : ಅವಕಾಶಗಳನ್ನು ಹುಡುಕಿಕೊಂಡು ಆಶಾವಾದಿಗಳಾಗಿ ಕೋಲಾರ, ಮೇ.04 ಜೀವನದಲ್ಲಿ ಬರುವ ಕಷ್ಟಗಳಲ್ಲಿ ಅವಕಾಶಗಳನ್ನು ಹುಡುಕಿಕೊಂಡು ಆಶಾವಾದಿಗಳಾಗಿ ಸಾಗಬೇಕುಎಂದು ಅಪರಜಿಲ್ಲಾಧಿಕಾರಿ ಪುಷ್ಪಲತಾ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ನಗರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಸ್ವಉದ್ಯೋಗತರಬೇತಿ ಸಂಸ್ಥೆಯಲ್ಲಿ ಹೊಲಿಗೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಆವರು ಮಾತನಾಡಿದರು. ಕಷ್ಟಗಳಿಲ್ಲದ ಹೊರತಾz Àಜೀವನ ಯಾರಿಗೂ ಇಲ್ಲ. ಪ್ರತಿಯೊಬ್ಬರಿಗೂ ಒಂದೊಂದು ಸಮಸ್ಯೆ ಇದ್ದೆಇರುತ್ತದೆ. ವಿಧಗಳು ಬೇರೆ ಇರಬಹುದು, ಸಮಸ್ಯೆಯ ಬಗ್ಗೆ ಚಿಂತಿಸಿ […]

ವರದಿ: ಶಬ್ಬೀರ್ ಅಹ್ಮದ್ ಕೋಲಾರ – ರಾಜ್ಯಪಾಲರ ಆಳ್ವಿಕೆ ಜಾರಿಗೊಳಿಸಿ, ಪ್ರಜಾಪ್ರಭುತ್ವವವನ್ನು ಉಳಿಸಬೇಕೆಂದು ರೈತ ಸಂಘ ಮನವಿ ಕೋಲಾರ, ಮೇ.02: ರಾಜ್ಯದಲ್ಲಿ ತೀವ್ರವಾದ ಬರಗಾಲದ ಜೊತೆಗೆ ಆಲಿಕಲ್ಲು ಮಳೆಯಿಂದ ಸಂಪೂರ್ಣ ಬೆಳೆ ನಾಶವಾಗಿದ್ದರೂ ಅದರ ಕಡೆ ಗಮನಹರಿಸಬೇಕಾದ ಸಮಿಶ್ರ ಸರ್ಕಾರದ ಮುಖ್ಯ ಮಂತ್ರಿ ಮತ್ತು ಶಾಸಕರು ರೆಸಾರ್ಟ್ನಲ್ಲಿ ಮೋಜಿ ಮಸ್ತಿಯಲ್ಲಿ ತೊಡಗಿದ್ದು, ಜನಸಾಮಾನ್ಯರ ಸಮಸ್ಯೆಗಳನ್ನು ಮರೆತಿರುವ ಸರ್ಕಾರವನ್ನು ವಜಾಗೊಳಿಸಿ, ರಾಜ್ಯಪಾಲರ ಆಳ್ವಿಕೆ ಜಾರಿಗೊಳಿಸಿ, ಪ್ರಜಾಪ್ರಭುತ್ವವವನ್ನು ಉಳಿಸಬೇಕೆಂದು ಮೆಕ್ಕೆ ವೃತ್ತದಲ್ಲಿ ಸಮ್ಮೀಶ್ರ ಸರ್ಕಾರದ ಭೂತ ದಹನ ಮಾಡಿ ಉಪ […]