
ಶಂಕರನಾರಾಯಣ : ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕ್ರಿಯಾಶೀಲತೆ ಮತ್ತು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವ ಉದ್ದೇಶದಿಂದ ಶೈಕ್ಷಣಿಕ ವರ್ಷದ ದ್ವಿತೀಯ ಸೆಮಿಸ್ಟರ್ಅವಧಿಯಲ್ಲಿ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹುಡುಗ ಮತ್ತು ಹುಡುಗಿಯರಿಗೆ ನಾಲ್ಕು ತಂಡಗಳನ್ನಾಗಿ (ಎಮರಾಲ್ಡ್, ಸಪಾಯರ್, ರೂಬಿ ಮತ್ತು ಟೋಪಾಜ್ ) ರಚಿಸಿ ಅಕ್ಟೋಬರ್ ತಿಂಗಳ ಆರಂಭದಿಂದ ಡಿಸೆಂಬರ್ ಅಂತ್ಯದವರೆಗೆ ವಿವಿಧ ರೀತಿಯ ಒಳಾOಗಣ ಮತ್ತು ಹೊರಾಂಗಣ ಕ್ರೀಡೆ,ಸಾಂಸ್ಕೃತಿಕಸಹಪಠ್ಯಚಟುವಟಿಕೆ ಮತ್ತು ಶಿಸ್ತು ಇತ್ಯಾದಿ ವಿಭಾಗಗಳಲ್ಲಿ ತೋರಿದ ಸರ್ವಾ0ಗೀಣ ಪ್ರಗತಿಯನ್ನು ಪರಿಗಣಿಸಿ ನೀಡಲಾಗುವ ಪ್ರತಿಷ್ಠಿತ ವಿಕ್ಟರ ಅವಾರ್ಡ್ ಪ್ರಶಸ್ತಿಯನ್ನು […]

ಮಂಗಳೂರು; Rev. Fr. ಡೇನಿಯಲ್ ಡಿಸೋಜಾ, (ವಯಸ್ಸು 79) ಇಂದು ಡಿಸೆಂಬರ್ 27, 2024 ರಂದು ಸಂಜೆ 5.45 ಕ್ಕೆ ಮಂಗಳೂರಿನ ಮುಲ್ಲರ್ಸ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನಲ್ಲಿ ನಿಧನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇನೆ. ಅವರ ಅಂತ್ಯಕ್ರಿಯೆಯ ಹೆಚ್ಚಿನ ವಿವರಗಳನ್ನು ನಿಮಗೆ ನಂತರ ತಿಳಿಸಲಾಗುವುದು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೇ. – ಚಿಕ್ಕಮಗಳೂರಿನ ಧರ್ಮಾಧ್ಯಕ್ಷರು ಬಿಷಪ್ ಟಿ. ಅಂತೋನಿ ಸ್ವಾಮಿ

ಕುಂದಾಪುರ; ಪ್ರಥಮ ವರ್ಷಕ್ಕೆ ಸೇರ್ಪಡೆಯಾದ ಎಮ್ ಬಿ ಎ ಮತ್ತು ಏಮ್ ಸಿ ಎ ವಿದ್ಯಾರ್ಥಿಗಳಿಗೆ ಒಂದು ವಾರದ ಓರಿಯೆಂಟೇಷನ್ ಮತ್ತು ಇಂಡಕ್ಷನ್ ಕಾರ್ಯಕ್ರಮದ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಎಂ. ಬಿ. ಎ ವಿಭಾಗದ ಮುಖ್ಯಸ್ಥರಾದ ಡಾ. ಸುಚಿತ್ರ ಪೂಜಾರಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಸ್ವಾಗತ ಕೋರಿ ಪ್ರಸ್ತಾವಿಕ ನುಡಿಗಳನ್ನು ಆಡಿದರು. ಮುಖ್ಯ ಅತಥಿಗಳಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದ ಪ್ರಶಾಂತ್ ಕುಂದರ್ (ಮ್ಯಾನೇಜಿಂಗ್ ಪಾರ್ಟ್ನರ್ ಜನತಾ ಹೊಲ್ಡಿಂಗ್ಸ್ ) ನಾಯಕತ್ವ, ಮತ್ತು ವ್ಯವಹಾರದ ಹೊಸ […]

ಮಂಗಳೂರುಃ ಸೇಂಟ್ ಆಗ್ನೆಸ್ ಪಿಯು ಕಾಲೇಜು ತನ್ನ ಕ್ರಿಸ್ಮಸ್ ಕಾರ್ಯಕ್ರಮ “ಫೆಸ್ಟಿವ್ ಎಕೋಸ್” ಅನ್ನು ಡಿಸೆಂಬರ್ 23 ರಂದು ಆಚರಿಸಿತು. ಸಭಾಂಗಣದಲ್ಲಿ ಆಯೋಜಿಸಲಾದ ಈ ಸಂದರ್ಭದಲ್ಲಿ ಋತುಮಾನದ ಹೊಳಪಿನ ವರ್ಣಗಳು ಗೋಚರಿಸಿದವು ಮತ್ತು ಬಹಳ ಸಂತೋಷ ಮತ್ತು ಸಂತೋಷದಿಂದ ತುಂಬಿದ್ದವು. ಯೇಸುವನ್ನು ಈ ಜಗತ್ತಿಗೆ ಕಳುಹಿಸುವ ಮೂಲಕ ಜಗತ್ತನ್ನು ಪಾಪದಿಂದ ರಕ್ಷಿಸಲು ದೇವರು ಮೇರಿಯೊಂದಿಗೆ ಪಾಲುದಾರಿಕೆ ಮಾಡಿದ ಆಕರ್ಷಕ ಕೋಷ್ಟಕವು ಕೇಂದ್ರಬಿಂದುವಾಗಿತ್ತು. ಈ ಸಹಸ್ರಮಾನದಲ್ಲಿ, ಯುದ್ಧ, ಅರಾಜಕತೆ ಮತ್ತು ಅವ್ಯವಸ್ಥೆಯಿಂದ ಛಿದ್ರವಾಗಿರುವ ಜಗತ್ತನ್ನು ಉಳಿಸಲು ದೇವರು ಯುವಕರೊಂದಿಗೆ […]

ಉಡುಪಿ, ಡಿ.24: ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಜೆರಾಲ್ಡ್ ಲೋಬೊ ಕ್ರಿಸ್ಮಸ್ ಶುಭಾಶಯಗಳನ್ನು ಬಿಷಪ್ ಜೆರಾಲ್ಡ್ ಅವರು, ಮಾಧ್ಯಮಕ್ಕೆ 2024 ರ ಕ್ರಿಸ್ಮಸ್ ಸಂದೇಶವನ್ನು ಪತ್ರಿಕಾ ಪ್ರಕಟಣೆಯಲ್ಲಿ ಹಂಚಿಕೊಂಡಿದ್ದಾರೆ. ‘ನಮ್ಮ ಪ್ರಭು ಮತ್ತು ರಕ್ಷಕ ಯೇಸುಕ್ರಿಸ್ತರ ಜನ್ಮದಿನವನ್ನು ನಾವು ಆಚರಿಸುತ್ತಿರುವಾಗ, ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನನ್ನ ಆತ್ಮೀಯ ಶುಭಾಶಯಗಳನ್ನು ತಿಳಿಸುತ್ತೇನೆ. ಕ್ರಿಸ್ಮಸ್ ಸಂತೋಷ, ಶಾಂತಿ ಮತ್ತು ಭರವಸೆಯ ಸಮಯವಾಗಿದೆ, ಬೆಥ್ ಲೆಹೆಮ್ನಲ್ಲಿ ಯೇಸುವಿನ ವಿನಮ್ರ ಜನನದ ಮೂಲಕ ದೇವರು ನಮಗೆ ತೋರಿಸಿದ ನಂಬಲಾಗದ ಪ್ರೀತಿಯನ್ನು ನಾವು ನೆನಪಿಸಿಕೊಳ್ಳುವ ಸಮಯ’ ಎಂದು […]

ಕುಂದಾಪುರ : ದಿನಾಂಕ 24/12/2024 ಮಂಗಳವಾರದಂದು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲು ಕ್ರಿಸ್ಮಸ್ ಹಬ್ಬದ ಆಚರಣೆ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಅಧ್ಯಕ್ಷರು ಆಗಿರುವ ಪೂಜ್ಯನೀಯ ಫಾ. ಪೌವ್ಲ್ ರೇಗೋರವರು ಮಾತನಾಡಿ ನಮ್ಮಲ್ಲಿ ಸಹಕಾರ ಮತ್ತು ಸಹಬಾಳ್ವೆ ಇರಬೇಕು. ಸಮಾಜದಲ್ಲಿರುವ ದುರ್ಬಲರಿಗೆ ನಮ್ಮಲ್ಲಿ ಆಗುವಷ್ಟು ಸಹಾಯವನ್ನು ಮಾಡಬೇಕು ಎನ್ನುತ್ತಾ ಕ್ರಿಸ್ಮಸ್ ಸಂದೇಶದೊಂದಿಗೆ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ.ಯವರು ದೇವರು ಭೂಲೋಕದಲ್ಲಿ ಬರುವಾಗ ಸಕಲರಿಗೂ ಶಾಂತಿ […]

ಬಾರ್ಕೂರು; ರಾಷ್ಟ್ರೀಯ ಹಿರಿಯ ಪ್ರಾಥಮಿಕ ಶಾಲೆ, ಉದ್ದಲಗುಡ್ಡೆ ಹನೇಹಳ್ಳಿ- ಬಾರ್ಕೂರು, ಡಿಸೆಂಬರ್ 23, 2024 ರಂದು ತನ್ನ ಹೊಚ್ಚಹೊಸ ಬ್ಯಾಡ್ಮಿಂಟನ್ ಅಂಕಣದ ಉದ್ಘಾಟನೆಯೊಂದಿಗೆ ಒಂದು ಮಹತ್ವದ ಸಂದರ್ಭವನ್ನು ಗುರುತಿಸಿದೆ. ಲಯನ್ಸ್ ಕ್ಲಬ್ ಬಾರ್ಕೂರ್ ನೇತೃತ್ವದಲ್ಲಿ ಈ ಉಪಕ್ರಮವು ಕ್ರೀಡೆ ಮತ್ತು ಫಿಟ್ನೆಸ್ ಅನ್ನು ಬೆಳೆಸುವಲ್ಲಿ ಅವರ ಅಚಲ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ. ನೂತನ ಬ್ಯಾಡ್ಮಿಂಟನ್ ಅಂಕಣವನ್ನು ಲಯನ್ಸ್ ಕ್ಲಬ್ ನ ವಲಯ ಒಂದರ ಅಧ್ಯಕ್ಷ ಲಯನ್ ಪ್ರಕಾಶ್ ಶೆಟ್ಟಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ […]

ಬೀದರ್ ಹುಮನಾಬಾದಿನ ಸೈಂಟ್ ಮೇರಿ ಶಾಲೆಯಲ್ಲಿ ಡಿಸೆಂಬರ್ 23,2024 ಸೋಮವಾರ ಕ್ರಿಸ್ಮಸ್ ಹಬ್ಬ ಆಚರಿಸಲಾಯಿತು. ಮಕ್ಕಳು ಅನೇಕ ಹಾಡುಗಳಿಗೆ ಡ್ಯಾನ್ಸ್ ಮಾಡಿದರು ಹಾಗೂ ಯೇಸು ಕ್ರಿಸ್ತನ ಜನನದ ರೂಪಕವನ್ನು ಅರ್ಥ ಭರಿತವಾದ ಪ್ರದರ್ಶನ ಪಸ್ತೂತ ಪಡಿಸಿದರು.ರೆ. ಫಾದರ್ ಡೇವಿಡ್, ಅಧ್ಯಕ್ಷ ಸ್ಥಾನವನ್ನು ವಹಿಸಿದರು ಶಾಲೆ ವ್ಯವಸ್ಥಾಪಕರಾದ ರೆ. ಫಾದರ್ ಸಚಿನ್ ಕ್ರಿಸ್ಟಿ ರವರು ದಿವ್ಯ ಸಾಹಿತ್ಯವನ್ನು ವಹಿಸಿದರು. ವಿಶೇಷ ಆಹ್ವಾನಿತರಾಗಿ ಟೀಚರ್ ಸಂಗೀತ ರವರು ಭಾಗವಹಿಸಿದ್ದರು. ಪುಟಾಣಿ ಮಕ್ಕಳ ಕಾರ್ಯಕ್ರಮವನ್ನು ಕಣ್ತುಂಬಿಕೊಂಡಂತಹ ಪೋಷಕರು ಸಂತೋಷವನ್ನು ವ್ಯಕ್ತಪಡಿಸಿದರು. ಈ […]

ಕುಂದಾಪುರ : ಜಮಿಯತುಲ್ ಮುಸ್ಲಿಮೀನ್ ಕುಂದಾಪುರ ಹಾಗೂ ಕುಂದಾಪುರ ಗ್ರೂಪ್ ಚಾರಿಟೇಬಲ್ ಸೆಂಟರ್ ಇವರ ಸಹಯೋಗದಲ್ಲಿ ದಾನಿಗಳಿಂದ ನೆರವಿನಿಂದ ಸುಮಾರು 10ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಎರಡು ಮನೆಗಳನ್ನು ಬಡತನದಿಂದ ವಸತಿ ಸೌಕರ್ಯ ವಿಲ್ಲದೆ ದಯನೀಯ ಸ್ಥಿತಿಯಲ್ಲಿದ್ದ ಕುಂದಾಪುರ ಕಸಬಾ ಗುಡ್ಡೆ ನಿವಾಸಿಗಳಾದ ಮೈಮುನಾ ಹಾಗೂ ರಮಿಝ ಇವರಿಗೆ ಇಂದು ಸೋಮವಾರ( 23.12.24) ಹಸ್ತಾಂತರಿಸಲಾಯ್ತು. ಮೌಲನಾ ಶಾಹಿದ್ ಹುಸೇನ್ ಅವರ ಕಿರಾತ್ ಪಠಣದಿಂದ ಆರಂಭ ಗೊಂಡ ಸಭಾ ಕಾರ್ಯ ಕ್ರಮಕ್ಕೆ ಉದ್ಯಮಿ ಶೇಕ್ ಫರೀದ್ ಭಾಷಾ ಹಾಗೂ […]