
JANANUDI.COM NETWORK ಬೆಳಗಾವಿ; ಬೆಳಗಾವಿ ಪೋಲೀಸರು ಇಂದು ಮಹತ್ವದ ದಾಳಿ ಮಾಡುವ ಮೂಲಕ ಅಪಾರ ಪ್ರಮಾಣದ ಆಫೀಮು ವಶಪಡಿಸಿಕೊಂಡಿದ್ದಾರೆ ಬೆಳಗಾವಿ ಡಿಸಿಪಿ ವಿಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ ಬೆಳಗಾವಿಯಲ್ಲಿ ನಿರಂತರವಾಗಿ ಮಟಕಾ ಜೂಜಾಟ,ಮತ್ತು ಗಾಂಜಾ ಮಾರಾಟದ ಅಡ್ಡೆಗಳ ಮೇಲೆ ದಾಳಿ ನಡೆಯುತ್ತಿದೆ. ಗಾಂಜಾ,ಮಟಕಾ,ಜೂಜಾಟದ ವಿರುದ್ಧ ಸಮರವನ್ನೇ ಸಾರಿರುವ ಬೆಳಗಾವಿ ಪೋಲೀಸರು ಇಂದುಇವತ್ತು ಸೈಬರ್ ಕ್ರೈಂ ವಿಭಾಗದ ಪೋಲೀಸರು ದಾಳಿ ಮಾಡಿ ಒಂದು ಕೆ.ಜಿಗೂ ಹೆಚ್ಚು ಆಫೀಮು ಜಪ್ತು ಮಾಡಿದ್ದು ಇದರ ಮೌಲ್ಯ ಅಂದಾಜು ಇಪ್ಪತ್ತು ಲಕ್ಷಕ್ಕೂ ಹೆಚ್ಚಾಗುತ್ತದೆ.ಈ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಐಎನ್ಎ ರಾಮರಾವ್ ಸುಭಾಷ್ ಚಂದ್ರಬೋಸ್ರ ಶಿಷ್ಯರಾಗಿ ಅಪ್ರತಿಮ ದೇಶಪ್ರೇಮಿ ಹಾಗೂ ಸೇವಾದಳದ ನಿಷ್ಠಾವಂತ ಕಾರ್ಯಕರ್ತರಾಗಿದ್ದರೆಂದು ಭಾರತ ರೆಡ್ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಹಾಗೂ ಭಾರತ ಸೇವಾದಳ ಜಿಲ್ಲಾ ಸಮಿತಿ ಸದಸ್ಯ ವಿ.ಪಿ.ಸೋಮಶೇಖರ್ ಹೇಳಿದರು.ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿರುವ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಐಎನ್ಎ ರಾಮರಾವ್ರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಶಿಸ್ತಿಮ ಪ್ರತಿರೂಪವಾಗಿದ್ದ ರಾಮರಾವ್ ಹದಿನೇಳು ವರ್ಷಗಳ ಹಿಂದೆ ಕೋಲಾರ ನಗರಕ್ಕೆ ಆಗಮಿಸಿ ಸೇವಾದಳ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ಚೆನ್ನೈನಲ್ಲಿ […]

JANANUDI.COM NETWORK ಕೋಟ,ಫೆ.16: ಪಾಸ್ಟ್ಯಾಗ್ ಗಡ್ಡಾಯಗೊಳಿಸಿದ ಕೇಂದ್ರ ಸರಕಾರದ ಆದೇಶದಂತೆ ಇಂದು ಬೆಳಗ್ಗಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿರು ಸಾಸ್ತಾನದಲ್ಲಿರುವ ಟೋಲ್ ಗೇಟ್ ನಲ್ಲಿ ಸ್ಥಳಿಯರಿಗೂ ಶುಲ್ಕ ವಿಧಿಸುತ್ತಿರುವುದನ್ನು ವಿರೋಧಿಸಿ ಹೆದ್ದಾರಿ ಹೋರಾಟ ಸಮಿತಿಯ ನೇತ್ರದವದಲ್ಲಿ ಸ್ಥಳಿಯರು ಪ್ರತಿಭಟನೆ ನಡೆಸಿದರು

ಹೊಸ ದೆಹಲಿಯ ಭಾರತೀಯರ ಲೆಕ್ಕ ಪರಿಶೋಧಕ ಸಂಸ್ಥೆ ನಡೆಸಿದ ಸಿ ಎ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ರಜನಿ ನಾವಡ ಉತ್ತೀರ್ಣರಾಗಿದ್ದಾರೆ.ಕುಂದಾಪುರದ ಯಜ್ಞ ಪಿ. ಮಯ್ಯ ಅವರಲ್ಲಿ ಆರ್ಟಿಕಲ್ ಶಿಪ್ ತರಬೇತಿ ಪಡೆದಿರುವ ಇವರು ಕುಂದಾಪುರದ ರಮೇಶ್ ನಾವಡ ಮತ್ತು ಜಯಂತಿ ನಾವಡ ಇವರ ಪುತ್ರಿಯಾಗಿರುತ್ತಾರೆ .

JANANUDI.COM NETWORK ಕುಂದಾಪುರ, ಫೆ. 1: ಕುಂದಾಪುರದ ಜನಪ್ರಿಯ ಸುದ್ದಿ ಸಂಸ್ಥೆ ಮೊತ್ತ ಮೊದಲು ಎಂಬತ್ತೆ ಪುಟ್ಟ ಮಕ್ಕಳಿಗಾಗಿ ಬಾಲ ಏಸುವಿನಂತೆ ವಸ್ತ್ರ ಭೂಷಣ ದರಿಸಿ “ಮುದ್ದು ಏಸು”ವಿನಂತೆ ಕಾಣುವ ರಾಜ್ಯ ಮಟ್ಟದ 2020- 21 ನೆ ಸಾಲಿನಲ್ಲಿ ಫೋಟೊ ಸ್ಫರ್ಧೆಯನ್ನು ಸಾರ್ವಜನಿಕರಿಗೆ ಏರ್ಪಡಿಸಿತ್ತು. ಈ ಸ್ಫರ್ಧೆಯ ವಿಜೇತರಿಗೆ ನಗದು ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸುವ ಕಾರ್ಯಕ್ರಮ ಜನವರಿ 31ರಂದು ಭಾನುವಾರ ಚರ್ಚ್ ವೆರಾಂಡದಲ್ಲಿ ನಡೆಯಿತು. ಕುಂದಾಪುರ ವಲಯ ಪ್ರಧಾನರಾದ ಹಾಗೂ ಕುಂದಾಪುರ ಚರ್ಚಿನ ಪ್ರಧಾನ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ,ಜ.29: ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ವಾಣಿಜ್ಯ ವಾಹನ ಚಾಲಕರಿಗಾಗಿ ಜಿಲ್ಲೆಯಾದ್ಯಂತ ಪುನಶ್ಚೇತನ ಕಾರ್ಯಾಗಾರ ಆಯೋಜಿಸಬೇಕೆಂದು ಕರ್ನಾಟಕ ಅಸಂಘಟಿತ ಕಾರ್ಮಿಕ ಪರಿಷತ್ ಅಧ್ಯಕ್ಷ ಕೆ.ವಿ.ಸುರೇಶ್ಕುಮಾರ್ ಹೇಳಿದರು.ನಗರದ ಆರ್ಟಿಒ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.ಕಾರ್ಯಾಗಾರದಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಕುರಿತು ಚಾಲಕರಲ್ಲಿ ಅರಿವು ಮೂಡಿಸುವುದರ ಜೊತೆಗೆ, ಕೇಂದ್ರ ಸರಕಾರದ ಸಾಮಾಜಿಕ ಭದ್ರತಾ ಮಂಡಳಿಯ ಪ್ರಯೋಜನಗಳ ಕುರಿತಂತೆ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಉಪವಾಸ ಇರೋನಿಗೆ ಊಟ ಬೇಡ, ಊರಿಗೆ ಶಾಲೆ ಬೇಡ ಕೇವಲ ರಾಮಮಂದಿರ ಕಟ್ಟಿದರೆ ಸಾಕು ಎನ್ನುವಂತೋರಿಗೆ ಈ ದೇಶ ಆಳಲು ಬಿಟ್ಟಿದ್ದೇವೆ, ರೈತರು, ಸೈನಿಕರು ಗೌರವದಿಂದ ಬದುಕಲು ಅವಕಾಶ ನೀಡದಿರೋದು ಒಂದು ದೇಶವೇ ಎಂದು ಶಾಸಕ ಕೆ.ಆರ್.ರಮೇಶ್ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.ತಾಲ್ಲೂಕಿನ ಸುಗಟೂರು ಸೊಸೈಟಿ ಆಶ್ರಯದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಿಂದ ರೈತರಿಗೆ 1.97 ಕೋಟಿ ರೂ ಶೂನ್ಯ ಬಡ್ಡಿಯ ಕೆಸಿಸಿ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.ದೆಹಲಿ ರೈತರ ಹೋರಾಟದ ಕುರಿತು ಮಾತನಾಡಿದ […]

ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ :ಕೋಟೇಶ್ವರ ಸಮೀಪದ ಪುಟ್ಟ ಗ್ರಾಮ ನೇರಂಬಳ್ಳಿ ವಿಶ್ವ ಮಟ್ಟದಲ್ಲಿ ಗುರುತಿಸುವಂತಾಗಲು ಕಾರಣ ಆಹಾರ – ಆತಿಥ್ಯ ಉದ್ಯಮದಲ್ಲಿ ಅಲ್ಲಿನವರ ಸಾಧನೆ. ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ನೇರಂಬಳ್ಳಿಯವರ ಹೋಟೆಲ್ ಸಮೂಹದ ಜಾಲ ಹರಡಿದೆ. ಇದರಲ್ಲಿ ದೊಡ್ಡ ಹೆಸರು ನೇರಂಬಳ್ಳಿ ನಾರಾಯಣ ರಾಯರದು. ಯಶಸ್ವೀ ಉದ್ಯಮಿ ಮಾತ್ರವಲ್ಲದೆ ಅವರು ಹೆಸರಿಗೆ ತಕ್ಕಂತೆ ದೇಣಿಗೆ, ಸಹಾಯ ಒದಗಿಸುವುದರಲ್ಲೂ ನಾರಾಯಣನೇ. ಹುಟ್ಟೂರು ಮಾತ್ರವಲ್ಲದೆ ಬೆಂಗಳೂರು ಹಾಗೂ ವಿವಿಧೆಡೆಗಳ ಸಂಘ – ಸಂಸ್ಥೆಗಳು, ದೇವಾಲಯಗಳು, ಕಷ್ಟದಲ್ಲಿರುವವರಿಗೆ ಸಹಾಯ […]

ಕುಂದಾಪುರ, ಜ.22: ಕುಂದಾಪುರದ ಜನಪ್ರಿಯ ಸುದ್ದಿ ಸಂಸ್ಥೆ 2020- 21 ನೆ ಸಾಲಿನಲ್ಲಿ ಮೊತ್ತ ಮೊದಲು ಎಂಬತ್ತೆ ಪುಟ್ಟ ಮಕ್ಕಳಿಗಾಗಿ ಬಾಲ ಏಸುವಿನಂತೆ ವಸ್ತ್ರ ಭೂಷಣ ದರಿಸಿ “ಮುದ್ದು ಏಸು”ವಿನಂತೆ ಕಾಣುವ ಫೋಟೊ ಸ್ಫರ್ಧೆಯನ್ನು ಸಾರ್ವಜನಿಕರಿಗೆ ಏರ್ಪಡಿಸಿದ್ದೆವು.ಈ ಸ್ಫರ್ಧೆಯಲ್ಲಿ ಹೆತ್ತವರು ಆಸಕ್ತಿಯಿಂದ ತಮ್ಮ ಮಕ್ಕಳನ್ನು ಸಿದ್ದ ಪಡಿಸಿ ಫೋಟೊಗಳನ್ನು ಕಳುಹಿಸಿ ಕೊಟ್ಟಿರುತ್ತಾರೆ, ಹೆಚ್ಚಾಗಿ ತಾಯಂದಿರು ತುಂಬ ಆಸ್ಥೆ ವಹಿಸಿದ್ದಾರೆ. ಸ್ಫರ್ಧೆ ಆರಂಭಿಸಿದಾಗಿನಿಂದಲೇ ತಾಯಂದಿರು ಫಲಿತಾಂಶ ಯಾವಾಗ ಅಂತ ಕೇಳುತ್ತಲೇ ಇದ್ದರು. ಇಂತಹ ಸ್ಫರ್ಧೆ ಪ್ರಥಮ ಸಲವಾದ್ದರಿಂದ ಕೆಲವರಿಗೆ […]