ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಮಾರುವುದು ಅಪರಾಧ – ಡಾ|| ಚಾರಿಣಿ ಕೋಲಾರ: 18 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಕ್ಕಳು ತಂಬಾಕು ಮಾರಾಟ ಮಾಡುವುದು ಮತ್ತು ಮಕ್ಕಳಿಗೆ ತಂಬಾಕು ಮಾರುವುದು ಅಪರಾಧವಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ|| ಚಾರಿಣಿ ಅವರು ತಿಳಿಸಿದರು. ಇಂದು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ತಂಬಾಕು ನಿಯಂತ್ರಣ ಮತ್ತು ಕೋಟ್ಪಾ ಕಾಯ್ದೆಯ ಅನುಷ್ಠಾನದ ಕುರಿತು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. […]
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರ:ಪಟ್ಟಣದಲ್ಲಿ ನಿತ್ಯಧಾರ ಮಾತೆಯ ದೇವಾಲಯದ 6ನೇ ವಾರ್ಷಿಕೋತ್ಸವದ ಪ್ರಯುಕ್ತ ಮೇರಿ ಮಾತೆಯ ತೇರಿನ ವೈಭವ ಶ್ರೀನಿವಾಸಪುರ, ಪಟ್ಟಣದಲ್ಲಿ ನಿತ್ಯಧಾರ ಮಾತೆಯ ದೇವಾಲಯದ 6ನೇ ವಾರ್ಷಿಕೋತ್ಸವದ ಪ್ರಯುಕ್ತ ಮೇರಿ ಮಾತೆಯ ತೇರಿನ ಮೆರವಣಿಗೆಯನ್ನು ಕ್ರೀಶ್ಚಿಯನ್ ಸಮುದಾಯದವರು ಅತ್ಯಂತ ವೈಭವಪೂರಿತವಾಗಿ ಶ್ರದ್ಧಾ ಭಕ್ತಿಯಿಂದ ವಿಶೇಷವಾಗಿ ಮಹಿಳೆಯವರು ಮೇಣದ ಬತ್ತಿ ದೀಪಗಳೊಂದಿಗೆ ಮೆರವಣಿಗೆ ಮಾಡಿದರು. ಪಟ್ಟಣದ ರಾಜಾಜಿ ರಸ್ತೆ ಕೋಲಾರ ವೃತ್ತದಲ್ಲಿ ಮೇರಿ ಮಾತೆಯ ದೇವಾಲಯದಲ್ಲಿ 6ನೇ ವರ್ಷದ ವಾರ್ಷಿಕೋತ್ಸವವನ್ನು ಏರ್ಪಡಿಸಲಾಗಿದ್ದು ನಾಲ್ಕು ದಿನಗಳ […]
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರ:ಸದಾ ಬಾಗಿಲು ಮುಚ್ಚಿರುವ ಕೈಗಾರಿಕಾ ವಿಸ್ತರಣಾ ಅಧಿಕಾರಿಗಳು ಜನಪ್ರತಿನಿಧಿಗಳ ಕೈಗೊಂಬೆಯಾಗಿ ಸಾರ್ವಜನಿಕರಿಗೆ ಮಾಹಿತಿ ಇಲ್ಲದೇ ತಮಗೆ ಬೇಕಾದ ಫಲಾನುಭವಿಗಳಿಗೆ ಹೋಲಿಗೆಯಂತ್ರ ಇನ್ನಿತರೆ ಸಲಕರಣೆಗಳು ನೀಡಿರುವುದ ಕ್ಕೆ ಆಕ್ಷೇಪ ಶ್ರೀನಿವಾಸಪುರ, ಸದಾ ಬಾಗಿಲು ಮುಚ್ಚಿರುವ ಕೈಗಾರಿಕಾ ವಿಸ್ತರಣಾ ಅಧಿಕಾರಿಗಳ ಕಛೇರಿಯ ಅಧಿಕಾರಿಗಳು ಇಂದು ತರಾತುರಿಯಲ್ಲಿ ಜನಪ್ರತಿನಿಧಿಗಳ ಕೈಗೊಂಬೆಯಾಗಿ ಸಾರ್ವಜನಿಕರಿಗೆ ಮಾಹಿತಿ ಇಲ್ಲದೇ ತಮಗೆ ಬೇಕಾದ ಫಲಾನುಭವಿಗಳಿಗೆ ಹೋಲಿಗೆಯಂತ್ರ ಇನ್ನಿತರೆ ಸಲಕರಣೆಗಳು ನೀಡಿರುವುದು ವಿಸ್ತರಣಾ ಅಧಿಕಾರಿ ಪಕ್ಷಪಾತ ಧೋರಣೆ ಆಗಿದೆ ಎಂದು ಭೀಮಾ ಸೇನೆ […]
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರ:ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಿ ಶ್ರೀನಿವಾಸಪುರ, ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಿ ತಮ್ಮ ಜೀವನದ ಗುಣಮಟ್ಟವನ್ನು ಅಭಿವೃದ್ಧಿಪಡಿಕೊಳ್ಳಬೇಕೆಂದು ರಾಯಲ್ಪಾಡು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ ತಿಳಿಸಿದರು. ಪಟ್ಟಣದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೈಗಾರಿಕಾ ವಿಸ್ತರಣಾ ಅಧಿಕಾರಿಗಳ ಕಛೇರಿ ಆವರಣದಲ್ಲಿ ವಿಶೇಷ ಘಟಕ ಯೋಜನೆ ಮತ್ತು ಕರಕುಶಲ ಕಸಬುದಾರರಿಗೆ ಇಲಾಖೆಯಿಂದ ಬರುವ ಹೋಲಿಗೆಯಂತ್ರಗಳು, ಗಾರೇ, ಮರಕೆಲಸ, ಅಕ್ಕಸಾಲಿಗ, ದೋಬಿ, ಸವಿತ […]
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಕೋಲಾರ:- ಮುಸ್ಲಿಂ, ಕ್ರೈಸ್ತರ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಕೋಲಾರ:- ಮುಸ್ಲಿಂ, ಕ್ರೈಸ್ತರ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖವಿದ್ದಂತೆ, ಈ ಪಕ್ಷಗಳಿಂದ ಅಲ್ಪಸಂಖ್ಯಾತರಿಗೆ ಆಗಿರುವ ಅನುಕೂಲ ಶೂನ್ಯ ಎಂದು ವಿದ್ಯಾರ್ಥಿನಿ ಅಮೂಲ್ಯ ತಿಳಿಸಿದರು. ಸೋಮವಾರ ನಗರದ ಈದ್ಗಾ ಮೈದಾನದಲ್ಲಿ ಪೌರತ್ವ ಕಾಯ್ದೆ ಹೋರಾಟ ಸಮಿತಿಯಿಂದ ನಡೆದ ಎನ್ಆರ್ಸಿ, ಸಿಎಎ ವಿರೋಧಿಸಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ಬಿಜೆಪಿ […]
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರ: ಪ್ರವಾಸಕ್ಕೆ ತೆರಳುವ ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಅದವಿ ಪೂರ್ವ ಕಾಲೇಜು ಮೈದಾನದಲ್ಲಿ ಕರ್ನಾಟಕ ದರ್ಶನ ಯೋಜನೆಯಡಿ ವಿದ್ಯಾರ್ಥಿಗಳ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿ, ಜ್ಞಾನಾರ್ಜನೆಗೆ ಎರಡು ಮಾರ್ಗಗಳಿವೆ. ದೇಶ ಸುತ್ತುವುದು ಒಂದು ಮಾರ್ಗವಾದರೆ, ಕೋಶ ಓದುವುದು ಇನ್ನೊಂದು ಮಾರ್ಗ. 8ನೇ ತರಗತಿಯ 150 ಆಯ್ದ ವಿದ್ಯಾರ್ಥಿಗಳನ್ನು 3 ಬಸ್ಗಳಲ್ಲಿ ರಾಜ್ಯದ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಕಳಿಸಲಾಗುತ್ತಿದೆ. ಈ […]
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಕೋಲಾರ:ಜಿಲ್ಲೆಯಲ್ಲಿ 71 ನೇ ಗಣರಾಜ್ಯೋತ್ಸವ ಅದ್ದೂರಿ ಆಚರಣೆ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್ ಅವರಿಂದ ಧ್ವಜಾರೋಹಣ ಕೋಲಾರ: ಜಿಲ್ಲೆಯಲ್ಲಿ 71 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಾನ್ಯ ಅಬಕಾರಿ ಮತ್ತು ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಹೆಚ್. ನಾಗೇಶ್ ಧ್ವಜರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಇಂದು ನಗರದ ಸರ್.ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ 71 ನೇ ಗಣರಾಜ್ಯೋತ್ಸವ […]
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಸಹಕಾರಿ ಲ್ಯಾಬ್ ಸ್ಥಾಪನೆಗೆ ಎಂಡಿ ನೇತೃತ್ವದಲ್ಲಿ ಸಮಿತಿ ಅಧ್ಯಕ್ಷರಿಂದ ಅಟೆಂಡರ್ವರೆಗೆ ಠೇವಣಿ ಸಂಗ್ರಹದ ಗುರಿ – ಡಿಸಿಸಿ ಬ್ಯಾಂಕ್ ಮೊಬೈಲ್, ಮೂಕ್ರೋ ಎಟಿಎಂ ಸೇವೆ ಮಾರ್ಚ್ನಲ್ಲಿ ಕೋಲಾರ: ಮಾರ್ಚ್ 1 ರಂದು ಡಿಸಿಸಿ ಬ್ಯಾಂಕ್ನಿಂದ ಸಂಚಾರಿ ಮತ್ತು ಮೈಕ್ರೋ ಎಟಿಎಂ ಸೌಲಭ್ಯವನ್ನು ಉದ್ಘಾಟಿಸಲು ಇಲ್ಲಿನ ಸಹಕಾರಿ ಯೂನಿಯನ್ನಲ್ಲಿ ಶನಿವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ವಿಷಯ ಪ್ರಸ್ತಾಪ ಮಾಡಿದ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡರು, ಕೋಲಾರ ಡಿಸಿಸಿ […]
ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ ವಿದ್ಯಾರ್ಥಿಗಳ ಜೀವನಾಡಿಯಾಗಿರುವ ಶ್ರೀ ವೆಂಕಟೇಶ್ವರ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆಯ ಶ್ರಮ ಅಪಾರ-ಬಿ ವಿ ಗೋಪಿನಾಥ್ ಕೋಲಾರ : ಜಿಲ್ಲೆಯಲ್ಲಿ ಕಳೆದ 31 ವರ್ಷಗಳಿಂದ ಬೆರಳಚ್ಚು ಹಾಗೂ ಕಂಪ್ಯೂಟರ್ ತರಬೇತಿ ಯಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ತಯಾರು ಮಾಡಿ ರಾಜ್ಯದುದ್ದಕ್ಕೂ ಕೊಡುಗೆ ಯಾಗಿ ನೀಡಿ ಹಲವಾರು ವಿದ್ಯಾರ್ಥಿಗಳ ಜೀವನಾಡಿಯಾಗಿರುವ ಶ್ರೀ ವೆಂಕಟೇಶ್ವರ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆಯ ಶ್ರಮ ಅಪಾರವಾಗಿದೆ, ಈ ಒಂದು ಪ್ರಯತ್ನವನ್ನು ಮಾಡಿದ ಸುಧಾಕರ್ ಹಾಗೂ ರತ್ನ […]