
ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ ಕೋಲಾರ : – ಕೋವಿಡ್ ವಾರಿಯರ್ ಆಗಿ ಜೀವದ ಹಂಗು ತೊರೆದು ದುಡಿದವರನ್ನು ಸ್ಮರಿಸುವ ಅಗತ್ಯವಿದೆ , ಅವರ ಸೇವೆಯನ್ನು ಮರೆಯಲಾಗದು ಎಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಅಭಿಪ್ರಾಯಪಟ್ಟರು . ನಗರದಲ್ಲಿ ಪ್ರಂಟ್ ಲೈನ್ನಲ್ಲಿ ಕೆಲಸ ಮಾಡಿರುವ ಪತ್ರಕರ್ತರು ಸೇರಿದಂತೆ ತಾಲ್ಲೂಕಿನ ೧೮ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ , ನಗರದ ಎಲ್ಲಾ ಪೊಲೀಸ್ ಠಾಣೆಗಳ ಸಿಬ್ಬಂದಿಗೆ ತಂಪು ಪಾನೀಯಾ ಹಾಗೂ ಎನ್ -೯೫ ಮಾಸ್ಟ್ಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು […]

JANANUDI.COM NETWORK ದಿವಂಗತ ಓಸ್ಕರ್ ಫೆರ್ನಾಂಡಿಸರ ಆತ್ಮಕ್ಕೆ ಬಲಿದಾನಗಳು ಮತ್ತು ಅಂತಿಮ ಸಂಸ್ಕಾರದ ಬಗ್ಗೆ ಅವರ ಮಗಳು ಓಶಾನಿ ಅವರಿಂದ ವಿವರಣೆ ಕೆ.ಪಿ.ಸಿ.ಸಿ. ಅಧ್ಯಕ್ಷರಿಗೆ ವಿವರಣೆಯನ್ನು ನೀಡಿದ್ದಾರೆ. ಮತ್ತು ಕಾರ್ಯಕ್ರಮಗಳನ್ನು ವಿವರಿಸಿದ್ದಾರೆ. ಅದರ ಪ್ರಕಾರ ಅಂತಿಮ ಸಂಸ್ಕಾರ ಬೆಂಗಳೂರಿನಲ್ಲಿ ನಡೆಯುವುದು. ಕಾರ್ಯಕ್ರಮದ ವಿವರಗಳು ಕೆಳಗೆ ತೋರಿಸಿದಂತೆ ಇವೆ.

JANANUDI.COM NETWORK ಕರಾವಳಿ ಕರ್ನಾಟಕದ ಅತ್ಯಂತ ಗೌರವಾನ್ವಿತ ರಾಜಕಾರಣಿ, ಜನಾನುರಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶ್ರೀಯುತ ಓಸ್ಕರ್ ಫೆರ್ನಾಂಡಿಸ್ರವರು ಅಸ್ತಂಗತರಾದ ಸುದ್ಧಿಯು ನಮ್ಮನ್ನು ಅತೀವ ದುಃಖಿತರನ್ನಾಗಿಸಿದೆ. ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವಾಗ, ಅವರ ಕುಟುಂಬದ ಸದಸ್ಯರಿಗೆ ಈ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿ ಅವರನ್ನು ಹೃತ್ಪೂರ್ವಕವಾಗಿ ಸಂತೈಸುತ್ತೇವೆ.ಉಡುಪಿಯ ದೇಶಭಕ್ತ ಫೆರ್ನಾಂಡಿಸ್ ಕುಟುಂಬದಲ್ಲಿ ಜನಿಸಿ, ಸಮುದಾಯದ ನಾಯಕನಾಗಿ, ಉಡುಪಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ 1980 ರಿಂದ 1996 ರವರೆಗೆ […]
JANANUDI.COM NETWORK ಹೊಸದಿಲ್ಲಿ: ಭಾರತ ಹಾಗೂ ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್ನ ದಿ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ಪ್ರಾರಂಭವಾಗಬೇಕಿದ್ದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ ಇದನ್ನು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಅಕಾಡೆಮಿ ಸ್ಪಷ್ಟಪಡಿಸಿದೆ.ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯ ಕೊನೆಯ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ಇಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.ಈಗಾಗಲೇ ಭಾರತ ತಂಡದ ಸಹಾಯಕ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, […]

ವರದಿ : ಮಝರ್, ಕುಂದಾಪುರ ಕುಂದಾಪುರ : ಕರ್ನಾಟಕ ರಾಜ್ಯ ಪರಿಶೋಧಕರ ಸಂಘದ 48ನೇ ವಾರ್ಷಿಕ ಮಹಾಸಭೆಯಲ್ಲಿ 2021- 2022 ಸಾಲಿಗೆ ನಡೆದ ಚುನಾವಣೆಯಲ್ಲಿ ರಾಜ್ಯಾಧಕ್ಷರಾಗಿ ಅಂಪಾರು ಚಂದನ್ ಕುಮಾರ್ ಹೆಗ್ಡೆ (ಸಿ.ಎ. ) ಅವರು ಆಯ್ಕೆಯಾಗಿದ್ದಾರೆ. ಮೂಲತ ಕಾರ್ಕಳ ಕಣಜಾರು ಗ್ರಾಮದ ಪಟೇಲರ ಮನೆಯವರಾದ ಇವರು ಉಡುಪಿ ಜಿಲ್ಲಾ ಭಾರತೀಯ ಲೆಕ್ಕ ಪರಿಶೋಧಕ ಸಂಘದ ಸದಸ್ಯರಾಗಿರುತ್ತಾರೆ.ಸಂಘದ ಕಾರ್ಯದರ್ಶಿಯಾಗಿ ಸುಜಾತಾ ಜಿ.,ಉಪಾಧ್ಯಕ್ಷರಾಗಿ ಪ್ರಮೋದ್ ಶ್ರೀ ಹರಿ, ಜಂಟಿ ಕಾರ್ಯದರ್ಶಿಯಾಗಿ ಶಿವ ಪ್ರಕಾಶ್ ವಿರಕ್ತ ಮಠ್, ಖಜಾಂಚಿಯಾಗಿ ವಿಜಯಕುಮಾರ್ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ ತಾಲ್ಲೂಕಿನ ಯಳಚಿಪುರದ ಹಾಲು ಡೇರಿ ಬಾಬು ಎಂಬುವವರ ಮನೆಯಲ್ಲಿ ಆಡೊಂದು ನಾಲ್ಕು ಮರಿಗಳನ್ನು ಹಾಕಿದ್ದು, ಎಲ್ಲಾ ಮರಿಗಳು ಆರೋಗ್ಯಕರವಾಗಿವೆ ಎಂದು ಗ್ರಾಮದವರೇ ಆದ ವೃತ್ತಿಶಿಕ್ಷಣ ವಿಷಯ ಪರಿವೀಕ್ಷಕ ಬಿ.ವೆಂಕಟೇಶಪ್ಪ ತಿಳಿಸಿದ್ದು, ಇದೊಂದು ಅಪರೂಪದ ವಿಷಯ ಎಂದು ತಿಳಿಸಿದ್ದಾರೆ.

JANANUDI.COM NETWORK ಬೆಂಗಳೂರು: ಪ್ರಸ್ತೂತ 2021-22 ಅಕಾ/ದೆಮಿಕ್ ವರ್ಷದ ದಸರಾ ರಜೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಘೋಶಿಸಿದೆ. ಕರ್ನಾಟಕದ ಎಲ್ಲಾ ಶಾಲೆಗಳ 1ನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಆಕ್ಟೋಬರ್ 10 ರಿಂದ 20 ರವರೆಗೆ ದಸರಾ ರಜೆ ಇದೆಯೆಂದು ಆದೇಶ ಹೊರಡಿಸಲಾಗಿದೆ.ಮುಂದಿನ ವರ್ಷ ಮೇ ತಿಂಗಳ 1ನೇ ತಾರೀಖಿನಿಂದ 28ನೇ ತಾರೀಖಿನವರೆಗೆ ಬೇಸಿಗೆ ರಜೆಯೂ ಇರಲಿದೆ ಎಂದು ತಿಳಿಸಿದೆ.ಆಕ್ಟೋಬರ್ 10 ರಿಂದ 20 ರವರೆಗೆ ಒಟ್ಟು 10 ದಿನಗಳ ಕಾಲ ರಾಜ್ಯದ ಶಾಲಾ ಮಕ್ಕಳಿಗೆ ದಸರಾ […]

JANANUDI.COM NETWORK ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧೆಡೆ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಮುಂದಿನ 4 ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ರಾಜ್ಯಾದ್ಯಂತ ಮುಂದಿನ ನಾಲ್ಕು ದಿನ ವ್ಯಾಪಕ ಮಳೆ; ಕರಾವಳಿ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಕರಾವಳಿ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಂದು ಕರ್ನಾಟಕದ ಕರಾವಳಿ ತೀರದಲ್ಲಿ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ […]

JANANUDI.COM NETWORK ಗಂಗೊಳ್ಳಿ ಸೆ :6 ಅಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಅಧೀನದ ಸ್ಟೆಲ್ಲಾ ಮಾರಿಸ್ ಸಮೂಹ ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆಯಯನ್ನು ಸಂಭ್ರಮದಿಂದ ಆಚರಿಸಲಾಯಿತು.ಭ.ಜ್ಯೋತಿ ಪ್ರಿಯಾ ಸ್ವಾಗತಿಸಿದರು,ಆದರ್ಶ್ ಶಿಕ್ಷಕ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ರವರ ಜೀವನ ಮತ್ತು ಸಾಧನೆಗಳನ್ನು ವಿಡಿಯೋ ತುಣುಕನ್ನು ಪ್ರದರ್ಶಿಸಲಾಯಿತು. ಜಂಟಿ ಕಾರ್ಯದರ್ಶಿ ಭ. ಜ್ಯೋತಿ ಸಂದೇಶಗಳನ್ನು ತಿಳಿಸಿದರು. ಶಿಕ್ಷಕರಿಗೆ ವಿವಿಧ ವಿನೋದ ಆಟಗಳನ್ನು ಆಡಿಸಲಾಯಿತು.ಕೊನೆಯಲ್ಲಿ ಸಹಭೋಜನವನ್ನು ಏರ್ಪಡಿಸಲಾಯಿತು. ಮುಖ್ಯೋಪಾಧ್ಯಾಯಿನಿರಾ ದ ಭ. ಕ್ರೆಸೆನ್ಸ್, ಭ. ಡೋರಿನ್ ಉಪಸ್ಥಿತರಿದ್ದರು. ಗಣೇಶ ಹೆಬ್ಬಾರ್ ವಂದಿಸಿದರು.