
JANANUDI.COM NETWORK ಕುಂದಾಪುರ್, ಸೆ.29: ಕುಂದಾಪುರ್ ಸಹಾಯಕ್ ಯಾಜಕ್ ಮಾ| ಬಾಪ್ ವಿಜಯ್ ಜೊಯ್ಸನ್ ಡಿಸೋಜಾನ್ ಜಲ್ಮಾ ದಿವಸ್ ಆಜ್ ಫಿರ್ಗಜ್ ಲೊಕಾಂ ಸವೆಂ ಆನಿ ಆಯ್ಚ್ಯಾ ದಿಸಾ ಜಲ್ಮಾಲ್ಯಾ ಫಿರ್ಗಜ್ಗಾರಂ ಸವೆಂ ಸಾದ್ಯಾ ರೀತಿನ್ ಆಚರಣ್ ಕೆಲೊ. ಸಕಾಳಿ ಅರ್ಗಾಂ ಬಲಿದಾನ್ ಭೆಟಯ್ಲ್ಯಾ ಉಪ್ರಾಂತ್ ಫಿರ್ಗಜ್ ಸಭಾಸಾಲಾಂತ್ ಕೇಕ್ ಕಾತರ್ನ್ ಆಚರಣ್ ಜಲ್ಮಾ ದೀಸ್ ಕೆಲೊ. ವಿಗಾರ್ ಮಾ|ಬಸ್ಟ್ಯಾನಿ ತಾವ್ರೊನ್ ಕಾರ್ಯೆ ಚಲಯ್ಲೆಂ. ಬಾಪ್ ವಿಜಯ್ ಜೊಯ್ಸನ್ ಡಿಸೋಜಾಕ್ ಲಾಂಭ್ ಆವ್ಕ್ ಬಳ ಭಲಾಯ್ಕಿ ಮಾಗೊನ್, […]

JANANUDI.COM NETWORK ಕೋಟ: ಉಡುಪಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ವಿದ್ಯಾರ್ಥಿ ಮತ್ತು ಪಾಲಕ ಮನೆಗಳಿಂದ ಹಳೆಯ ಪುಸ್ತಕ ಸಂಗ್ರಹಿಸಿ ಶಾಲಾ ಮತ್ತು ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ನೀಡುವ ಅಕ್ಷರ ಜೋಳಿಗೆ ಕಾರ್ಯಕ್ರಮಕ್ಕೆ ಶನಿವಾರ ಕೋಡಿಯಲ್ಲಿ ಚಾಲನೆ ನೀಡಲಾಯಿತು.ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಎನ್.ಹೆಚ್ ನಾಗೂರ್ ಅವರು ಕೋಡಿ ಹಾಜಿ.ಕೆ.ಮೊಹಿದೀನ್ ಬ್ಯಾರಿ ಅನುದಾನಿತ ಪ್ರೌಢಶಾಲೆಯಲ್ಲಿ ಶಾಲಾ ಬ್ಯಾಂಡ್ನ್ನು ಬಾರಿಸುವುದರ ಮೂಲಕ ಅಕ್ಷರ ಜೋಳಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕುಂದಾಪುರ ಕ್ಷೇತ್ರ […]

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ : – ಸಂಪೂರ್ಣ ಗಣಕೀಕರಣದ ಮೂಲಕ ಕೋಲಾರ , ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ಪ್ಯಾಕ್ಗಳ ದೈನಂದಿನ ವಹಿವಾಟು ನ .೧ ರಿಂದ ಆರಂಭಗೊಳ್ಳಲಿದ್ದು , ಒಂದೇ ಬಾರಿಗೆ ಕೇಂದ್ರ ಕಚೇರಿಯಲ್ಲೇ ಮಾಹಿತಿ ಲಭ್ಯವಾಗುವ ಮೂಲಕ ದೇಶದ ಸಹಕಾರ ರಂಗದ ಇತಿಹಾಸದಲ್ಲೇ ಹೊಸ ಪ್ರಯೋಗದೊಂದಿಗೆ ಕ್ರಾಂತಿಕಾರಿ ಹೆಚ್ಚ ಇಡಲು ಡಿಸಿಸಿ ಬ್ಯಾಂಕ್ ಸಜ್ಜಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು . ಭಾನುವಾರ ಬೆಳಗ್ಗೆ ನಡದ ಅವಿಭಜಿತ ಜಿಲ್ಲೆಯ ಪತ್ತಿನ ಸಹಕಾರ […]

JANANUDI.COM NETWORK ಕೋಟ: ಉಡುಪಿ ಜಿಲ್ಲಾ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಪೂರ್ವಭಾವಿ ಸಭೆ ಶನಿವಾರ ಬ್ರಹ್ಮಾವರ ರೋಟರಿ ಭವನದಲ್ಲಿ ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಶೋಕ್ ಕುಮಾರ್ ಶೆಟ್ಟಿ ಮಟಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಅನುದಾನಿತ ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಬಳಿಕಜಿಲ್ಲಾ ಹಾಗೂ ತಾಲ್ಲೂಕುವಾರು ಅಧ್ಯಕ್ಷರುಗಳನ್ನು ನೇಮಿಸಲಾಯಿತು. ಜಿಲ್ಲಾ ಅಧ್ಯಕ್ಷರಾಗಿ ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಶೋಕ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ಕೋಡಿ ಹಾಜಿ ಮೈದಿನ್ ಅನುದಾನಿತ ಪ್ರೌಢಶಾಲೆಯ […]

JANANUDI.COM NETWORK ಕುಂದಾಪುರ, ಸೆ.26 ಇತ್ತೀಚೆಗೆ ಅಗಲಿದ ,ಕೇಂದ್ರ ಸರಕಾರದ ಮಾಜಿ ಸಚಿವರು,ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾ೦ಡಿಸ್ ರವರಿಗೆ, ಶ್ರದ್ಧಾಂಜಲಿ ಕಾರ್ಯಕ್ರಮ ದಿನಾಂಕ 26 -9-2021 ಆದಿತ್ಯವಾರ ರಂದು, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ , ಆರ್.ಎನ್. ಶೆಟ್ಟಿ ಕಲ್ಯಾಣ ಭವನದಲ್ಲಿ ಜರುಗಿತು. ಮಾಜಿ ವಿಧಾನ ಪರಿಶತ್ತಿನ ಸ್ಪೀಕರ್ ಪ್ರತಾಪ್ ಚಂದ್ರ ಶೆಟ್ಟಿ ಪುಷ್ಪಾರ್ಚಣೆ ಮಾಡುವ ಮೂಲಕ ಆಸ್ಕರ್ ಫೆರ್ನಾ೦ಡಿಸ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಶ್ರದ್ದಾಂಜಲಿ ಅರ್ಪಿಸುತ್ತಾ ” ಸಂಸತ್ತಿನಲ್ಲಿ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಮುಖ್ಯಮಂತ್ರಿಗಳ ಅಮೃತ ಮಹೋತ್ಸವ ಕಾರ್ಯಕ್ರಮದಡಿ ಜಿಲ್ಲೆಯ 41 ಗ್ರಾಮಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡಿದ್ದು , ಈ ಪಂಚಾಯಿತಿಗಳನ್ನು ಸರ್ವತೋಮುಖ ಅಭಿವೃದ್ಧಿ ಮಾಡಲಾಗುವುದು ಎಂದು ತೋಟಗಾರಿಕೆ ಮತ್ತು ಯೋಜನೆ , ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ಅವರು ತಿಳಿಸಿದರು . ಇಂದು 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಹಾಗೂ ನೆಹರು ಯುವ […]
ವರದಿ : ಶಬ್ಬೀರ್ ಅಹ್ಮದ್ ,ಶ್ರೀನಿವಾಸಪುರ ಶ್ರೀನಿವಾಸಪುರ,ನಮ್ಮ ದೇಶವನ್ನು ಅಣಬೆ ತಿನ್ನುವ ಪ್ರಧಾನ ಮಂತ್ರಿ ಈ ದೇಶವನ್ನು ಆಳುತ್ತಿರುವುದು ದುರದೃಷ್ಟಕರ. ಸ್ವಾತಂತ್ರ ಬಂದು 75 ವರ್ಷಗಳು ಕಳೆದರೂ ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಕಂದಾಚಾರ ಕೌರ್ಯಗಳು ಕಣ್ಣು ಮುಂದೆ ಕುಣಿಯುತ್ತಿದ್ದರೂ ಆಳುವ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಆರೋಪಿಸಿದರು.ತಾಲೂಕಿನ ತಾಡಿಗೋಳ್ ಕ್ರಾಸ್ ನಲ್ಲಿ ವಿದ್ಯಾರ್ಥಿನೀಯರ ಮೇಲೆ ನಡೆದಿರುವ ದೌಜನ್ಯವನ್ನು ಖಂಡಿಸಿ […]

ವರದಿ : ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ-ಸೆ-20, ನರೇಗಾ ಕಾಮಗಾರಿಯನ್ನು ದುಡಿಯುವ ಕೈಗೆ ಕೆಲಸ ಕೊಡದೆ ಜೆಸಿಬಿ ಮೂಲಕ ವಿವಿಧ ಕಾಮಗಾರಿಗಳನ್ನು ಮಾಡುತ್ತಿರುವವರ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿ ಪಂಚಾಯಿತಿಗಳಲ್ಲಿನ ಭ್ರಷ್ಟಾಚಾರತೆ ತನಿಖೆ ಮಾಡಲು ಸೂಕ್ತ ಅಧಿಕಾರಿಗಳಿಂದ ತನಿಖೆ ಮಾಡಬೇಕೆಂದು ರೈತ ಸಂಘದಿಂದ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಮುಂದೆ ಜೆ.ಸಿ.ಬಿ ಸಮೇತ ಹೋರಾಟ ಮಾಡಿ, ಉಪ ಕಾರ್ಯದರ್ಶಿಗಳಾದ ಸಂಜೀವಪ್ಪರವರಿಗೆ ಮನವಿ ನೀಡಿ, ಆಗ್ರಹಿಸಲಾಯಿತು.ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷಗಳು ಕಳೆದರೂ ಹಳ್ಳಿಗಳ ಅಭಿವೃದ್ಧಿ ಮರುಚಿಕೆಯಾಗಿದೆ. ಕೇಂದ್ರ […]

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರ: ತಾಡಿಗೋಳ್ ಕ್ರಾಸ್ನಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆದಿರುವ ದೌರ್ಜನ್ಯವನ್ನು ಖಂಡಿಸಿ ಇದೆ ತಿಂಗಳು 20 ರಂದು ತಾಡಿಗೋಳ್ ಗ್ರಾಮದಿಂದ ಕಾಲ್ನಡಿಗೆ ಜಾಥಾ ಹಾಗೂ ಬಹಿರಂಗ ಸಭೆಯನ್ನು ತಾಲ್ಲೂಕು ಕಛೇರಿಯ ಮುಂದೆ ಹಮ್ಮಿಕೊಂಡಿದ್ದೇವೆಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡರಾದ ಎನ್. ಮುನಿಸ್ವಾಮಿ ತಿಳಿಸಿದರು.ಪಟ್ಟಣದ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಏರ್ಪಡಿಸಿ ಮಾತನಾಡಿದ ಮುನಿಸ್ವಾಮಿ ಇದೇ ತಿಂಗಳು 20 ರಂದು ಸೋಮವಾರ 9 ಗಂಟೆಗೆ ತಾಡಿಗೋಳ್ ಗ್ರಾಮದಿಂದ ಕಾಲ್ನಡಿಗೆ ಜಾಥಾವನ್ನು ಎಲ್ಲಾ ದಲಿತ ಸಂಘಟನೆಗಳ ಒಕ್ಕೂಟದಿಂದ ಈ ಕಾರ್ಯಕ್ರಮವನ್ನು […]