
ಕುಂದಾಪುರ, ಮಾ.24; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ 2025 ಜುಬಿಲಿ ವರ್ಷದ ಕಾರ್ಯಕ್ರಮದ ಅಂಗವಾಗಿ ಕುಟುಂಬ ಆಯೋಗದ ಮುಂದಾಳತ್ವದಲ್ಲಿ ಮಾ. 23 ರಂದು ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಯಿತು. ‘ಕುಟುಂಬಕ್ಕೆ ತಂದೆ ಆಧಾರ ಸ್ಥಂಭವಾಗಿದ್ದಾನೆ. ಮಮತೆ, ಪ್ರೀತಿ ಸದ್ಗುಣದ ಜೊತೆ ಮಕ್ಕಳನ್ನು ಬೆಳಸಬೇಕು, ಸಂತ ಜೋಸೆಫನು ಹೇಗೆ ಆದರ್ಶ ತಂದೆಯಾಗಿದ್ದನೋ, ಹಾಗೆ ಅಪ್ಪಂದಿರು, ಮಕ್ಕಳಿಗೆ ಆದರ್ಶ ತಂದೆಯಾಗಿರಬೇಕು” ಎಂದು ಆಚರಣೆಯ ಪ್ರಯುಕ್ತ ಪವಿತ್ರ ಬಲಿದಾನವನ್ನು ಅರ್ಪಿಸಿ ಧರ್ಮಗುರು ಅ।ವಂ।ಪೌಲ್ ರೇಗೊ ಸಂದೇಶ ನೀಡಿದರು. ಬಲಿದಾನದ ಪ್ರಾರ್ಥನಾ ವಿಧಿಯನ್ನು ಚರ್ಚಿನ […]

ಕುಂದಾಪುರ ಮಾ.13: ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಬಹಳ ಹೆಸರುವಾಸಿಯಾದ, ಅತ್ಯಂತ ಹೆಚ್ಚು ಹಿಂಬಾಲಿಕರಿರುವ ಫಾ|ಫ್ರಾಂಕ್ಲಿನ್ ಡಿಸೋಜಾ ಇವರ ಪಂಗಡದಿಂದ ಮೂರು ದಿನಗಳ ಅಧ್ಯಾತ್ಮಿಕ (ಮಾ.10, 11 ಮತ್ತು 12 ರಂದು) ಧ್ಯಾನ ಕೂಟ ನಡೆಯಿತು. ಮೊದಲನೇ ದಿವಸವೇ ಈ ಧ್ಯಾನಕೂಟಕ್ಕೆ ಅತ್ಯಧಿಕ ಜನ ಹಾಜರಾಗಿದ್ದರು, ಕೌಟುಂಬಿಕ ಜೀವನ ಮತ್ತು ನಮ್ಮ ಜೀವನದಲ್ಲಿ ಪಾಪಗಳು ಹೇಗೆ ಹುಟ್ಟುತ್ತವೆ, ತಪ್ಪು ಮಾಡಿದವರನ್ನು ಕ್ಷಮಿಸುವುದರ ಬಗ್ಗೆ ತಿಳುವಳಿಕೆ ಪಾಪ ನಿವೇದಿಕೆಯ ಮಹತ್ವ, ಮೇರಿ ಮಾತೆಯ ಮಹತ್ವ, ಪ್ರೀತಿ, […]

ಕುಂದಾಪುರ,ಮಾ.10:ಕುಂದಾಪುರ ರೋಜರಿ ಚರ್ಚಿನ ಕೆಥೊಲಿಕ್ ಸ್ತ್ರೀ ಸಂಘಟನೆಯ ಮುಂದಾಳತ್ವದಲ್ಲಿ ಸ್ವಸಹಾಯ ಗುಂಪುಗಳ ಜೊತೆ ಭಾನುವಾರ ಮಾ.09 ರಂದು ಚರ್ಚ್ ಸಭಾಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳಾ ದಿನಾಚರಣೆಯ ಪ್ರಯುಕ್ತ ಮೊದಲಿಗೆ ಹೋಲಿ ರೋಜರಿ ಚರ್ಚಿನಲ್ಲಿ ಪ್ರಧಾನ ಧರ್ಮಗುರುಗಳಾದ ಸ್ತ್ರೀ ಸಂಘನೇಯ ಅಧ್ಯಾತ್ಮಿಕ ನಿರ್ದೇಶಕ ಅ| ವಂ|ಪೌಲ್ ರೇಗೊ ಪವಿತ್ರ ಬಲಿದಾನವನ್ನು ಅರ್ಪಿಸಿ ‘ಸ್ತ್ರೀ ಮನೆಯ, ಕುಟುಂಬದ, ಸಮಾಜದ ಅಲಂಕಾರ, ಮಹಿಳೆಗೆ ಶಿಕ್ಷಣ ಪಡೆದಲ್ಲಿ ದೇಶ ಸಬಲೀಕರಣ ಗೊಳ್ಳುತ್ತದೆ ಎಂಬ ಮಾಜಿ ಪ್ರಧಾನಿ ನೆಹರುರವರ ಮಾತುಗಳನ್ನು ನೆನೆಸಿಕೊಂಡರು. […]

ಕುಂದಾಪುರ ಫೆ.24 : ಕುಂದಾಪುರ ಹೋಲಿ ರೋಜರಿ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ ಫೆ. 23 ರಂದು ನಡೆಯಿತು. ಚರ್ಚಿನ ಅ।ವಂ। ಧರ್ಮಗುರು ಪಾವ್ಲ್ ರೇಗೊ ನೀತಿ ಶಿಕ್ಷಣ ಪಡೆಯುವ ಮಕ್ಕಳು ಹಾಗೂ ಶಿಕ್ಷಕರು ಪ್ರಾರ್ಥನ ವಿಧಿಯೊಂದಿಗೆ ಪವಿತ್ರ ಬಲಿದಾನವನ್ನು ಅರ್ಪಿಸಿ “ನೀತಿ ಶಿಕ್ಷಣ ಪಡೆಯುವ ಮೂಲಕ ಮಕ್ಕಳು ಮುಂದೆ ನೀತಿವಂತರಾಗಿ ಬಾಳಬಹುದು. ನೀತಿ ಶಿಕ್ಷಣ ಬಹು ಅಮೂಲ್ಯವಾಗಿದೆ, ನೀತಿ ಶಿಕ್ಷಣ ನೀಡುವ ಶಿಕ್ಷರ ಸೇವೆ ಗಮನರ್ಹವಾಗಿದೆ, ಅವರಿಗೆ ವಾರಕ್ಕೊಂದು ದಿನ ಸಿಗುವ ವಿಶ್ರಾಮ ದಿನವನ್ನು ಕ್ರೈಸ್ತ […]

ಕುಂದಾಪುರ, ಫೆ.12;ಸ್ಥಳೀಯ ರೋಜರಿ ಮಾತಾ ಚರ್ಚಿನಲ್ಲಿ ಸುವಾರ್ತ ಪ್ರಸಾರ ಆಯೋಗದವರ ಮುಂದಾಳತ್ವದಲ್ಲಿ ಫೆ.9 ರಂದು ಮಿಷನರಿ ಮೇಳದ ಮಕ್ಕಳ ಜುಬಲಿ ಉತ್ಸವ ನೆಡೆಯಿತು. ಮಕ್ಕಳು ಸಕ್ರೀಯವಾಗಿ ಬಲಿಪೂಜೆಯಲ್ಲಿ ಪಾಲ್ಗೊಂಡು ಅರ್ಥಪೂರ್ಣವಾಗಿ ನೆರವೇರಿಸಿದರು. ತದನಂತರ ದೇವಾಲಯದ ಸಭಾಂಗಣದಲ್ಲಿ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರಾರ್ಥನಾ ವಿಧಿಯನ್ನು ಸಂತ ಜೋಸೆಫರ ಕಾನ್ವೆಂಟಿನ ವಂದನೀಯ ಸುಪ್ರಿಯಾ ಎ.ಸಿ. ಅವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಕುಂದಾಪುರ ಚರ್ಚಿನ ಪ್ರಧಾನ ಧರ್ಮ ಗುರುಗಳಾದ ಅತೀ ವಂದನಿಯ ಗುರು ಪೌಲ್ ರೇಗೋರವರು – […]

ಕುಂದಾಪುರ, ಫೆ.12: ಫೆಬ್ರವರಿ 11 ರಂದು ಲೂರ್ದ ಮಾತೆಯ ಹಬ್ಬವನ್ನು ಬಲಿದಾನ ಮತ್ತು ಜಪಮಾಲೆಯ ಪ್ರಾರ್ಥನೆಯ ಮೂಲಕ ಆಚರಿಸಲಾಯಿತು. ಚರ್ಚಿನ ಧರ್ಮಗುರು ಅ|ವಂ|ಪೌಲ್ ರೇಗೊ ಇವರು ಪವಿತ್ರ ಬಲಿದಾನವನ್ನು ಅರ್ಪಿಸಿ ‘ಇಂದು ಪ್ರಪಂಚಾದ್ಯಂತ ಲೂರ್ದ್ ಮಾತೆಯ ಹಬ್ಬವನ್ನು ಆಚರಿಸುತ್ತಾರೆ. ಅಂತೆಯೆ ಯೇಸು ಕ್ರಿಸ್ತರ 2025 ನೇ ವರ್ಷದ ಜಯಂತಿ ಪ್ರಯುಕ್ತ ಪ್ರಪಂಚಾದ್ಯಂತಹ ಅನಾರೋಗ್ಯರ ಜಜಯಂತಿಯನ್ನು ಆಚರಿಸುತ್ತಾರೆ, ಫ್ರಾನ್ಸ್ ದೇಶದ ಲೌರ್ಡೆಸ್ ಎಂಬಲ್ಲಿ“ಬರ್ನಾಡೇಟ್ ಸೌಬಿರಸ್ ಎಂಬ 14 ವರ್ಷದ ಹೆಣ್ಣು ಮಗಳಿಗೆ 1858 ರಲ್ಲಿ, ಮೇರಿ ಮಾತೆ 18 […]

ಕುಂದಾಪುರ,ಫೆ.2; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಯೇಸು ಕ್ರಿಸ್ತರ 2025 ನೇ ಜಯಂತೋತ್ಸವ ಪ್ರಯುಕ್ತ ಧಾರ್ಮಿಕ ಸಹೋದರ ಸಹೋದರಿಯರ ಜಯಂತೋತ್ಸವ ಆಚರಣೆ ನಡೆಯಿತು. ರೋಜರಿ ಮಾತಾ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಪವಿತ್ರ ಬಲಿದಾನವನ್ನು ಧಾರ್ಮಿಕ ಸಹೋದರಿ ಮತ್ತು ಭಕ್ತಾಧಿಗಳ ಜೊತೆ ಅರ್ಪಿಸಿದರು. ಈ ಸಂದರ್ಭದಲ್ಲಿ ಅ।ವಂ।ಪೌಲ್ ರೇಗೊ ಧಾರ್ಮಿಕ ಸಹೋದರರಿಯರಿಗೆ ಪುಷ್ಪ ನೀಡಿ ಗೌರವಿಸಿ ಅವರು ನೀಡುವ ಸೇವೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ವಂ।ಭಗಿನಿ ಸುಪ್ರಿಯಾ ಮತ್ತು ಎಂಟು […]

ಕುಂದಾಪುರ, ಜ.12: 334 ವರ್ಷಗಳ ಹಿಂದೆ ಪ್ರಪ್ರಥಮವಾಗಿ ಭಾರತೀಯ ಕೊಂಕಣಿ ಭಾಷಿಕ ಧರ್ಮಗುರುರುಗಳಾದ ಸಂತ ಜೋಸೆಫ್ ವಾಜರಿಗೆ ಮುಖ್ಯಗುರುಗಳಾಗಿ ಭಡ್ತಿ ನೀಡಿ ಕಳುಹಿಸಿದ್ದು ವಲಯ ಪ್ರಧಾನ ಇಗರ್ಜಿಯಾದ ಕುಂದಾಪುರ ಪವಿತ್ರ ರೋಜರಿ ಮಾತಾ ಇಗರ್ಜಿಗೆ. ಅವರ ಜೊತೆಯಲ್ಲಿ ಇನ್ನೂ ಮೂರು ಧರ್ಮಗುರುಗಳು ಬಂದಿದ್ದು, ಅವರ ಸಹಕಾರದೊಂದಿಗೆ, ಪ್ರಧಾನ ಧರ್ಮಗುರುಗಳಾಗಿ ಕೆನರಾದಾಂತ್ಯ ಸುತ್ತುತ್ತಾ ಯೇಸು ಕ್ರಿಸ್ತರ ಬೋಧನೆ ಮಾಡಿದವರು, ಕುಂದಾಪುರದ ಇಗರ್ಜಿಯಲ್ಲಿ ಸೇವೆ ನೀಡುತಿರುವಾಗ ಧ್ಯಾನ ಮಗ್ನರಾಗಿರುವಾಗ ಗೋಡೆಯ ಮೇಲೆ ಎತ್ತರದಲ್ಲಿ ನೇತಾಡುತ್ತಿರುವ ಏಸು ಕ್ರಿಸ್ತರ ಶಿಲುಭೆಯ ಮಟ್ಟಕ್ಕೆ […]

ಕುಂದಾಪುರ, ಜ.1.: ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ 2024 ರ ಸಂಜೆ ಹೊಸ ವರ್ಷದ ಪ್ರಯುಕ್ತ ಕುಂದಾಪುರ ಚರ್ಚಿನಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿ ಹೊಸ ವರ್ಷವನ್ನು ಆಚರಿಸಲಾಯಿತು.. ಬಲಿದಾನದ ನೇತ್ರತ್ವವನ್ನು ವಹಿಸಿಕೊಂಡ ಮೂಲತಹ ಕುಂದಾಪುರದವರಾದ, ತ್ರಾಸಿ ಡಾನ್ ಬಾಸ್ಕೊ ಸಂಸ್ಥೆಯ ಯಾಜಕರಾದ ವಂ।ರೋಶನ್ ಡಿಸೋಜಾ “ನಾವು ಹೊಸ ವರ್ಷಕ್ಕೆ ಕಾಲಿಡುತ್ತಂತೆ ನಮಗೆ ಮೇರಿ ಮಾತೆ ನಾನು ನಿಮ್ಮ ಜೊತೆಯಲ್ಲಿ ಇದ್ದೆನೆಂದು ಅಭಯ ನೀಡುತ್ತಾಳೆ, ಮೇರಿ ಮಾತೆ ಪರೋಪಕಾರಿಯಾಗಿದ್ದಾಳೆ, ನಾವು ಕೂಡ ಇತರರಿಗೆ ಪರೋಪಕಾರಿಯಾಗಬೇಕು. ನಾವು ಕಷ್ಟದಲ್ಲಿರುವರ […]