
ವಿದ್ಯುತ್ ಸಮಸ್ಯೆಗೆ ಕುಸುಮ್ ಯೋಜನೆ ಪರಿಹಾರ: ಇಂಧನ ಸಚಿವ ಕೆ.ಜೆ. ಜಾರ್ಜ್ ಕುಸುಮ್ ಬಿ ಯೋಜನೆಯಡಿ ಸೌರ ಪಂಪ್ ಸೆಟ್ ಅಳವಡಿಸಿಕೊಳ್ಳುವಂತೆ ರೈತರಿಗೆ ಕರೆ – ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದೆ: ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಕೋಲಾರ : ವಿದ್ಯುತ್ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ರಾಜ್ಯದಲ್ಲಿ ಕುಸುಮ್ ಬಿ ಮತ್ತು ಕುಸುಮ್ ಸಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಕೋಲಾರದಂತಹ ಜಿಲ್ಲೆಗಳಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಜಿಲ್ಲಾ ಪಂಚಾಯಿತಿ […]

HUMNABAD: Saint Mary English Medium School, Humnabad recently hosted a Fancy Dress competition for its pre-primary students to encourage creativity and build confidence. Children from different classes participated, presenting a range of imaginative costumes from fairytale characters to historical figures. The competition was judged on creativity, presentation, and costume relevance, with teachers cheering for the […]

30/08/2024 ರಂದು ವಿದ್ಯಾ ಜ್ಯೋತಿ ಶಾಲೆ ಹುಲಸೂರಿನಲ್ಲಿ ಯುವ ವಿದ್ಯಾರ್ಥಿ ಸಂಚಲನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯಣಿಯಾದ ಸಿಸ್ಟರ್ ಮೇಬಲ್ ರವರು ಎಲ್ಲರನ್ನು ಸ್ವಾಗತಿಸಿದರು ಈ ಒಂದು ಸಂಚಲನದ ಸಚೇತಕಿಯಾದ ಸಿಸ್ಟರ್ ಜೋಸ್ ಪಿನ್ ರವರು ಕಾರ್ಯಕ್ರಮದ ಬಗ್ಗೆ ವಿವರಿಸಿದ್ದರು ಯುವ ವಿದ್ಯಾರ್ಥಿ ಸಂಚಲನಾದ ನಿರ್ದೇಶಕರಾದ ಫಾದರ್ ಸಚಿನ್ ಕ್ರಿಸ್ಟಿ ರವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಒಟ್ಟು 99 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಒಂದು ತರಬೇತಿಯಲ್ಲಿ ಅನೇಕ ಕಾರ್ಯ ಚಟುವಟಿಕೆಗಳನ್ನು ಹಾಗೂ ಯುವ ವಿದ್ಯಾರ್ಥಿ ಸಂಚಲನದ […]

ಕುಂದಾಪುರ, ಆ.30 (30-8-2024) : ಉಡುಪಿ ಧರ್ಮಪ್ರಾಂತ್ಯದಲ್ಲೆ ಹಿರಿಯ ಇಗರ್ಜಿಯಾದ 454 ವರ್ಷದ ಇತಿಹಾಸ ಇರುವ ಹೋಲಿ ರೋಜರಿ ಚರ್ಚಿನಲ್ಲಿ ತೆನೆ ಹಬ್ಬ ಮೇರಿ ಮಾತೆಯ ಹುಟ್ಟು ಹಬ್ಬದ ಪ್ರಯುಕ್ತ (ಸೆ.8) ತಯಾರಿಗಾಗಿ 9 ದಿನಗಳ ನೊವೆನಾ ಇಂದು ಅಗೋಸ್ತ್ 30 ರಂದು ಆರಂಭವಾಯಿತು. ಇಗರ್ಜಿಯ ಧರ್ಮಗುರು ಅ|ವಂ|ಪಾವ್ಲ್ ರೇಗೊ ಪವಿತ್ರ ಬಲಿದಾನ ಅರ್ಪಿಸಿದ ತರುವಾಯ ನೊವೆನಾ ಪ್ರಾರ್ಥನೆಗೆ ಚಾಲನೆ ನೀಡಿದರು ಮಕ್ಕಳು ಮತ್ತು ದೊಡ್ಡವರು ಭಕ್ತಿ ಗಾಯನದೊಂದಿಗೆ ಹೂ ಗಳನ್ನು ಬಾಲ ಮೇರಿ ಮಾತೆಗೆ ಅರ್ಪಿಸಿದರು.

ಬೆಂಗಳೂರು: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ರೈತರು ಸಾಗುವಳಿ ಮಾಡುತ್ತಿರುವ ಅರಣ್ಯ ಒತ್ತುವರಿ (Encroachment) ತೆರವುಗೊಳಿಸದಂತೆ ವಿಧಾನ ಪರಿಷತ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ. ಈ ಸಂಬಂಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರವಾಣಿ ಕರೆ ಮಾಡಿ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಕೇರಳ ಹಾಗೂ ಕಾರವಾರದಲ್ಲಿ ಭೂಮಿ ಕುಸಿತದ ಬಳಿಕ ರಾಜ್ಯ ಸರಕಾರ 2015ರಿಂದ ಈಚೆಗೆ ಆಗಿರುವ ಅರಣ್ಯ ಭೂಮಿ ಒತ್ತುವರಿ ತೆರವು ಮಾಡುವ ಕ್ರಮ ಸರಿಯಾಗಿದೆ. ಆದರೆ ಹೊಟ್ಟೆ ಪಾಡಿಗಾಗಿ ಸಾಗುವಳಿ ಮಾಡಿಕೊಂಡಿರುವ ರೈತರ ಭೂಮಿ ತೆರವು ಮಾಡಬಾರದು.ಎಂದು […]

ಗುಲ್ಬರ್ಗ : ಗುಲ್ಬರ್ಗ ಧರ್ಮ ಕ್ಷೇತ್ರದ ಬಸವಕಲ್ಯಾಣ ವಲಯದ ಮುಚ್ಚಳಂಬ ಧರ್ಮ ಕೇಂದ್ರದಲ್ಲಿ 25/8/2024 ರಂದು ವಲಯದ ಎಲ್ಲ ಯುವ ಜನರಿಗೆ ಯುವ ಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸುಮಾರು 50 ಯುವ ಜನರು ಭಾಗವಹಿಸಿದ್ದರು, ಏಕತೆ ಮತ್ತು ವೈವಿಧ್ಯತೆಯಲ್ಲಿ ನಮ್ಮ ಸಮಾನತೆಯನ್ನು ಕಾಣುವುದು ಎಂಬ ಧ್ಯೇಯ ವಾಕ್ಯದಡಿಯಲ್ಲಿ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಪ್ರಾರ್ಥನೆಯ ಮೂಲಕ ಪ್ರಾರಂಭಿಸಿ ಮುಚ್ಚಳಾಂಬ ಕೇಂದ್ರದವರು ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಅಧ್ಯಕ್ಷ ಸ್ಥಾನವನ್ನು ವಹಿಸಿದಂತ ಫಾದರ್ ಸ್ಟಾನಿ ಮುಚ್ಚಳಂಬ […]

ಹರಿಹರ ಬೆಸಿಲಿಕಾ ಇತಿಹಾಸ ಅನೇಕ ಚರ್ಚುಗಳು ಮತ್ತು ಬೆಸಿಲಿಕಾಗಳು ತಮ್ಮ ಇತಿಹಾಸದಲ್ಲಿ ಕೆಲವು ಹಂತದಲ್ಲಿ ಸಂಭವಿಸಿದ ಅಸಾಧಾರಣ ಘಟನೆಯ ಹಿನ್ನೆಲೆಯಲ್ಲಿ ಸ್ಥಾಪಿಸಲ್ಪಟ್ಟವು. ಅವರ್ ಲೇಡಿ ಆಫ್ ಹೆಲ್ತ್ ಬೆಸಿಲಿಕಾ ಹೆಚ್ಚು ವ್ಯಾಪಕವಾಗಿ ತಿಳಿದಿರುವಂತೆ ಹರಿಹರ ಚರ್ಚ್ ಈ ನಿಯಮಕ್ಕೆ ಹೊರತಾಗಿಲ್ಲ. ಇದರ ಕಥೆಯು 1800 ರ ದಶಕದ ಆರಂಭದಲ್ಲಿ ಅದರ ದಡದಲ್ಲಿ ಸ್ನಾನ ಮಾಡುತ್ತಿದ್ದ ಬ್ರಾಹ್ಮಣನು ಆಕಸ್ಮಿಕವಾಗಿ ಊದಿಕೊಂಡ ತುಂಗಭದ್ರಾ ನದಿಗೆ ಬಿದ್ದಾಗ ಪ್ರಾರಂಭವಾಗುತ್ತದೆ. ಸ್ಥಳೀಯ ಸಂಪ್ರದಾಯದ ಪ್ರಕಾರ, ಅವರು ಅವರ್ ಲೇಡಿ ಆಫ್ ಹೆಲ್ತ್ನ ತೇಲುವ […]

ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಸೆಂಟ್ ಜೋಸೆಫ್ ಸಿಬಿಎಸ್ಇ ಶಾಲೆಯಲ್ಲಿ ಭವಿಷ್ಯದ ನವೀಕರಣ ಎಂಬ ಘೋಷವಾಕ್ಯದಡಿಯಲ್ಲಿ ದಿನಾಂಕ. 24.08.2024 ರಂದು ವಿಜ್ಞಾನ ಮತ್ತು. ಕಲಾ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ನಡೆಸಲಾಯಿತು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಮನೋಜ್ಞಾನವನ್ನು ಹೆಚ್ಚಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆಮುಖ್ಯ ಅತಿಥಿಗಳಾಗಿ ಕುಶಾಗ್ರಮತಿ ಅನಲಾಟಿಕ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಓ ಅದ ಡಾ. ಅನಂತ್ ಆರ್. ಕೊಪ್ಪರ್ ರವರು ಆಗಮಿಸಿದ್ದರು. ಕಾರ್ಯಕ್ರಮದ ಕುರಿತಾಗಿ ಮಾತನಾಡಿದ ಮುಖ್ಯ ಅತಿಥಿಗಳು ಹವಾಮಾನ ವೈಪರಿತ್ಯ ಮತ್ತು […]

ಶ್ರೀನಿವಾಸಪುರ : ಶ್ರೀನಿವಾಸಪುರ ಪುರಸಭೆಗೆ ಒಟ್ಟು 23 ಸದಸ್ಯರಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆದ ಚುನಾವಣೆಯಲ್ಲಿ ಬಿ.ಆರ್.ಬಾಸ್ಕರ್ ಬಿನ್ ರಾಮಚಂದ್ರಯ್ಯ ರವರು ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಎಂದು ಪುರಸಭೆ ನೂತನ ಅಧ್ಯಕ್ಷರ ಅತ್ತೆ ಚಂದ್ರಕಳಾ ಶ್ರೀನಿವಾಸ್ ಮಾಹಿತಿ ನೀಡಿದರು.ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾ ಬಡವಾಣೆಯ ಸ್ವಗೃಹದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.ನೀಲಾವತಿಯವರ ಮತವನ್ನು ಕಾಂಗ್ರೇಸ್ ಪಾರ್ಟಿಯ ಪರವಾಗಿ ಪಡೆಯದೇ ಇರಲು ಕಾಂಗ್ರೇಸ್ ಪಾರ್ಟಿಯ ಎಲ್ಲಾ ಮುಖಂಡರು ಮತ್ತು ಅಭ್ಯರ್ಥಿಯಾಗಿದ್ದ ಬಿ.ಆರ್ ಬಾಸ್ಕರ್ ರವರು ಮೊದಲೇ ನಿರ್ಧರಿಸಿದ್ದರು. ಈ […]