
ಶ್ರೀನಿವಾಸಪುರ : ನರೇಗಾ ಯೋಜನೆಯು ಗ್ರಾಮಗಳ ಅಭಿವೃದ್ದಿಗೆ ಸಹಕಾರಿಯಾಗಿದ್ದು, ಗ್ರಾಮಗಳಲ್ಲಿನ ನಾಗರೀಕರು ಗ್ರಾಮಗಳ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಕೈಜೋಡಿಸಬೇಕು ಎಂದು ಜಿ.ಪಂ ಸಿಇಒ ಡಾ.ಪ್ರವೀನ್ಕುಮಾರ್ ಪಿ.ಬಾಗೇವಾಡಿ ಎಂದರು.ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಗೆ ಬುಧವಾರ ಬೇಟಿ ನೀಡಿ ದಾಖಲೆ ಪರಿಶೀಲಿಸಿ ಮಾತನಾಡಿದರು.ಗ್ರಾಮಸಭೆ, ವಾರ್ಡ್ಸಭೆಗಳಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ಗ್ರಾಮಗಳ ಸಮಸ್ಯೆಗಳನ್ನು ಚರ್ಚಿಸಿ ಆಯಾ ಗ್ರಾಮಗಳಿಗೆ ಸಂಬಂದಿಸಿದಂತೆ ಸಮಾಲೋಚಿಸಿ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ತುರ್ತಾಗಿ ಕೆಲಸ ಮಾಡಬೇಕು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಬೀದಿ ದೀಪಗಳು, ಹಾಗೆಯೇ […]

ಕುಂದಾಪುರ, ಜ.24; ನಗರ ಯೋಜನಾ ಪ್ರಾಧಿಕಾರ ಕುಂದಾಪುರ ಹಾಗೂ ಅಸೋಸಿಯೇಷನ್ ಆಫ್ ಕಂಸಲ್ಟಿಂಗ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಸಂಯೋಗದಲ್ಲಿ ನಡೆದ ಏಕ ವಿನ್ಯಾಸ ನಕ್ಷೆ ರಚನೆ ಕಾರ್ಯಕಾರ ನಗರ ಯೋಜನಾ ಪ್ರಾಧಿಕಾರ ಕಚೇರಿಯಲ್ಲಿ ನಡೆಯಿತು. ತ್ವರಿತ ಗತಿಯ ನಗರೀಕರಣ ಪ್ರಗತಿಯನ್ನು ಹೊಂದುತ್ತಿರುವ ಕುಂದಾಪುರ ಮತ್ತು ಬೈದೂರು ತಾಲೂಕಿಗೆ, ಸರಕಾರದ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ , ವಿದ್ಯುತ್ , ನೀರು ಪೂರೈಕೆಗೆ ಏಕ ವಿನ್ಯಾಸ ನಕ್ಷೆಯ ಪರಿಕಲ್ಪನೆ ಸಹಕಾರಿಯಾಗಲಿದೆ ಎಂದು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ನಗರ […]

ಕುಂದಾಪುರ; ಜ.24; ಕುಂದಾಪುರ; ರೋಜರಿ ಮಾತಾ ಚರ್ಚಿನಲ್ಲಿ ವಲಯ ಮಟ್ಟದ ಕ್ರೈಸ್ತ ಐಕ್ಯತ ಪ್ರಾರ್ಥನಾ ಕೂಟ ಜನವರಿ 23 ರಂದು ನಡೆಯಿತು. ಈ ಪ್ರಾರ್ಥನ ಕೂಟದಲ್ಲಿ, ರೋಮನ್ ಕ್ಯಾಥೊಲಿಕ್, ಸಿ.ಎಸ್. ಐ. ಮಲಬಾರ್ ವಿಧಿ, ಹೀಗೆ ವಿವಿಧ ಪಂಗಡದ ಕ್ರೈಸ್ತರೆಲ್ಲರು ಸೇರಿ ಈ ಪ್ರಾರ್ಥನ ಕೂಟ ನೆಡೆಸಲಾಯಿತು ಇದರ ಮುಂದಾಳತ್ವವನ್ನು ಉಡುಪಿ ಧರ್ಮಪ್ರಾಂತ್ಯದ ಹಿರಿಯ ಚರ್ಚ್ ಆದ ರೋಜರಿ ಮಾತಾ ಚರ್ಚಿನ, ಹಾಗೇ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ।ವಂ।ಪೌಲ್ ರೇಗೊ ವಹಿಸಿದ್ದು ಬೈಬಲ್ ಪವಿತ್ರ […]

ಕುಂದಾಪುರ; ಕೆ. ಡಿ. ಫ್ 2025 ಕಪ್.ಕಿರಣ್, ಸ್ ಡ್ರಾಗನ್ ಫೀಸ್ಟ್ ಮಾರ್ಷಲ್ ಆರ್ಟ್ಸ್ ಆಫ್ ಇಂಡಿಯಾ ಆಯೋಜಿತ, ಈಸ್ಟ್ ವೆಸ್ಟ್ ಸ್ಪೋರ್ಟ್ಸ್ ಕ್ಲಬ್ ಅಂಡ್ ರೆಸಾರ್ಟ್ ಕುಂದಾಪುರ ಇಲ್ಲಿ ಜನವರಿ 19 ರಂದು ನೆಡೆದ ಕರಾಟೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಇಂಟರ್ ಡೊಜೊ ಕರಾಟೆ -ಕೆ. ಡಿ. ಎಫ್ ಕಪ್ -2025 ಚಾಂಪಿಯನ್ಶಿಪ್ ನಲ್ಲಿ ಅನ್ವೇಶ್ ಎ ಮೊಗವೀರ ದ್ವಿತೀಯ ಸ್ಥಾನ ಪಡೆದಿದ್ದಾನೆ.ಈತ ಕಿರಿ ಮಂಜೇಶ್ವರ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇಲ್ಲಿ 6ನೇ ತರಗತಿಯಲ್ಲಿ […]

ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಕೋಲಾರ ಜಿಲ್ಲಾ ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ಚಿಕ್ಕಬಳ್ಳಾಪುರ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಮಂಚಬೆಲೆ ಶ್ರೀನಿವಾಸ್, ಹೊಸಕೋಟೆ ಜಗನ್ನಾಥ್ ಮತ್ತಿತರರು ಭೇಟಿ ಮಾಡಿ, ಸಂಕ್ರಾಂತಿ ಶುಭಾಷಯ ತಿಳಿಸಿ, ಅಥ್ಲೇಟಿಕ್ಸ್ ಅಸೋಸಿಯೇಷನ್ ಚಟುವಟಿಕೆಗಳ ಕುರಿತು ಗಮನ ಸೆಳೆದರು.

ಬೆಳಗಾವಿ, ಜ.೨೧; ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧೀವೇಶನದ ಶತಮಾನೋತ್ಸವದ ಸವಿನೆನಪಿಗಾಗಿ ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಮಹಾತ್ಮಾ ಗಾಂಧೀಜಿಯವರ ಬೃಹತ್ ಪುತ್ಥಳಿಯನ್ನು ಚರಕ ತಿರುಗಿಸುವ ಮೂಲಕ ಇಂದು ಅನಾವರಣಗೊಳಿಸಿದರು. ಪುತ್ಥಳಿ ಅನಾವರಣಗೊಳಿಸಿ ಸಭೆ ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಗಾಂಧೀಜಿಯವರ ಪುತ್ಥಳಿಯ ಸ್ಥಾಪನೆಯಿಂದ ಈ ಭಾಗಕ್ಕೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಗೌರವ ತಂದಿದೆ’ ಎಂದು […]

ಕೋಲಾರ:- ಜಗತ್ತಿನಲ್ಲಿಯೇ ಸ್ವಾಭಿಮಾನ, ಆತ್ಮಗೌರವ ಹಾಗೂ ಗೌರವಯುತ ಬದುಕಿಗಾಗಿ ಜರುಗಿದ ಏಕೈಕ ಸಮರ ಕೊರೆಂಗಾವ್ ಯುದ್ಧವಾಗಿದೆ ಎಂದು ಬೆಂಗಳೂರು ವಿವಿ ಉಪನ್ಯಾಸಕ ಡಾ.ಸುರೇಶ್ಗೌತಮ್ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಭಾರತೀಯ ಬಹುಜನ ಸೇವಾ ಸಮಿತಿವತಿಯಿಂದ ಹಮ್ಮಿಕೊಂಡಿದ್ದ ಭೀಮಾಕೊರೆಂಗಾವ್ ವಿಜಯೋತ್ಸವ ಹಾಗೂ ಸಾವಿತ್ರಿ ಬಾಪುಲೆ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡುತ್ತಿದ್ದರು.ಅಂಬೇಡ್ಕರ್ ಅವರು ವಿದೇಶಿ ಗ್ರಂಥಾಲಯದಲ್ಲಿ ಅಧ್ಯಯನಶೀಲರಾಗಿದ್ದ ಸಂದರ್ಭದಲ್ಲಿ ಕೊರೆಂಗಾವ್ ಯುದ್ಧದ ಇತಿಹಾಸ ಅವರ ಕಣ್ಣಿಗೆ ಬಿದ್ದು, ಆನಂತರ ಅವರು ಪುಣೆ ಸಮೀಪ ಇರುವ ಕೊರೆಂಗಾವ್ ಸ್ಮಾರಕ ಹುಡುಕಿ […]

ಬೆಂದೂರು;ಸೇಂಟ್ ಸೆಬಾಸ್ಟಿಯನ್ ಚರ್ಚ್ ತನ್ನ ಪ್ಯಾರಿಷ್ ದಿನವನ್ನು ಜನವರಿ 19 ರಂದು ಸೇಂಟ್ ಸೆಬಾಸ್ಟಿಯನ್ ಅವರ ಹಬ್ಬದೊಂದಿಗೆ ಆಚರಿಸಿತು. PPC ಸದಸ್ಯರು, ಪ್ರಾಯೋಜಕರು ಮತ್ತು ಫಲಾನುಭವಿಗಳಿಗೆ ಮೇಣದಬತ್ತಿಗಳನ್ನು ವಿತರಿಸುವುದರೊಂದಿಗೆ ಆಚರಣೆಯು ಪ್ರಾರಂಭವಾಯಿತು, ಇದು ಪ್ಯಾರಿಷ್ ಸಮುದಾಯಕ್ಕೆ ಅವರ ಕೊಡುಗೆಗಳು ಮತ್ತು ಬೆಂಬಲವನ್ನು ಸಂಕೇತಿಸುತ್ತದೆ. ದೇರೆಬೈಲ್ ಚರ್ಚಿನ ಧರ್ಮಗುರು ಜೋಸೆಫ್ ಮಾರ್ಟಿಸ್ ಹಬ್ಬದ ಬಲಿದಾನದ ಆರ್ಚಕರಾಗಿದ್ದರು. ಅವರ ಜೊತೆಯಲ್ಲಿ,ಸೆಬಾಸ್ಟಿಯನ್ ಚರ್ಚಿನ ಧರ್ಮಗುರು ವಂ। ವಾಲ್ಟರ್ ಡಿಸೋಜಾ. ಇವರೊಂದಿಗೆ ಸಹಾಯಕ ಧರ್ಮಗುರುಗಳಾದ ವಂ। ಲಾರೆನ್ಸ್ ಕುಟಿನ್ಹಾ, ವಂ।ವಿವೇಕ್ ಪಿಂಟೋ, ವಂ। […]

ಮಂಗಳೂರಿನ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜ.17ರಂದು ಮಂಗಳೂರಿನ ಉಳ್ಳಾಲ ಬಳಿಯ ಕೋಟೆಕಾರು ಬ್ಯಾಂಕ್ ನ ಚಿನ್ನಾಭರಣ, ನಗದು ಹಣವನ್ನು ದರೋಡೆಕೋರರು ದೋಚಿ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಬ್ಯಾಂಕ್ ದರೋಡೆ ಬಳಿಕ ಆರೋಪಿಗಳು ತಮಿಳುನಾಡಿನ ತಿರುವನ್ವೇಲಿಗೆ ತೆರಳಿ ತಲೆಮರೆಸಿಕೊಂಡಿದ್ದರು. ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 2 ಗೋಣಿಚೀಲ, ತಲ್ವಾರ್, 2 ಪಿಸ್ತೂಲ್ ಜಪ್ತಿ ಮಾಡಲಾಗಿದೆ ಎಂದು […]