
ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮಿಪುರ ಕ್ರಾಸ್ ನಲ್ಲಿರುವ ಮಿನರ್ವ ಶಾಲೆಯ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಜಲಾನಯನ ಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮವನ್ನು ಸಹಾಯ ಕೃಷಿ ನಿರ್ದೇಶಕರು ಕೆ.ಸಿ.ಮಂಜುನಾಥ್ ನೆಲವಂಕಿ ಗ್ರಾ.ಪಂ ಅಧ್ಯಕ್ಷರಾದ ರಾಧಮ್ಮ ರಘುನಾಥರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮ ಕುರಿತು ಸಹಾಯ ಕೃಷಿ ನಿರ್ದೇಶಕ ಕೆ.ಸಿ.ಮಂಜುನಾಥ್ ಮಾತನಾಡಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮಣ್ಣು ರಕ್ಷಣೆ, ನೀರು ರಕ್ಷಣೆ ಮಾಡುವ ಕುರಿತು ರೈತರಿಗೆ ಹಾಗೂ ಸಾರ್ವಜನಿಕರಿಗೆ […]

ಶ್ರೀನಿವಾಸಪುರದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಗುರುವಾರ ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಶ್ರೀನಿವಾಸಪುರ: ಗ್ರಾಮ ಆಡಳಿತಾಧಿಕರಿಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಸಾಂಘಿಕ ಪ್ರಯತ್ನ ನಡೆಸಬೇಕು. ಸರ್ಕಾರದ ಮೇಲೆ ಒತ್ತಡ ತಂದು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ತಾಲ್ಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಎನ್.ಶಂಕರ್ ಹೇಳಿದರು.ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಗುರುವಾರ ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸರ್ಕಾರ ಈ ಹಿಂದೆ […]

ಬಂಗಾರಪೇಟೆ: ಫೆ-6, ಸಹಕಾರ ಬ್ಯಾಂಕ್ಗಳಿಗೆ ನರ್ಬಾಡ್ನಿಂದ ನೀಡುತ್ತಿದ್ದ ಕೃಷಿ ಸಾಲವನ್ನು ಸ್ಥಗಿತಗೊಳಿಸಿರುವ ಆದೇಶವನ್ನು ವಾಪಸ್ಸು ಪಡೆದು ಕೂಲಿಕಾರ್ಮಿಕರಿಗೆ ನರೇಗಾದಲ್ಲಿ 365 ದಿನ ಕೆಲಸ ನೀಡಬೇಕು. ಹಾಗೂ ಖಾಸಗಿ ಮೈಕ್ರೋ ಪೈನಾನ್ಸ್ ಹಾವಳಿಗೆ ಪ್ರಭಲವಾದ ಕಾನೂನು ಜಾರಿ ಮಾಡಬೇಕೆಂದು ರೈತ ಸಂಘದಿಂದ ತಹಶೀಲ್ದಾರ ಸುಜಾತ ರವರಮುಖಾಂತರ ಮಾನ್ಯ ಪ್ರಧಾನ ಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ಆರೋಗ್ಯ, ಶಿಕ್ಷಣ, ದುಡಿಯುವ ಕೈಗೆ ಉದ್ಯೋಗವನ್ನು ನೀಡುವ ಕಾನೂನು ಜಾರಿಯಾಗಲೀ, ಉಚಿತವಾಗಿ ನೀಡುವ ಯಾವುದೇ ಗ್ಯಾರೆಂಟಿಗಳನ್ನು ನೀಡದಂತೆ ಕಾನೂನು ರಚನೆ ಮಾಡುವ ಜೊತೆಗೆ ಅನ್ನಭಾಗ್ಯ […]

ಬೆಂಗಳೂರು, ಫೆಬ್ರವರಿ 5, 2025, ಕರ್ನಾಟಕ ಪ್ರಾದೇಶಿಕ ಮೂಲಭೂತ ಚರ್ಚ್ ಸಮುದಾಯಗಳು (BECs) ಪರಿಶೀಲನಾ ಸಭೆಯನ್ನು ಬೆಂಗಳೂರಿನ ಸುಬೋಧನ ಪ್ರಾದೇಶಿಕ ಪ್ಯಾಸ್ಟರಲ್ ಸೆಂಟರ್ನಲ್ಲಿ ನಡೆಸಲಾಯಿತು, ಡಯೋಸಿಸನ್ BEC ಕಾರ್ಯದರ್ಶಿಗಳನ್ನು ಅವರ ಚಟುವಟಿಕೆಗಳ ಸಮಗ್ರ ವಿಮರ್ಶೆಗಾಗಿ ಒಟ್ಟುಗೂಡಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಮಂಗಳೂರಿನ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾಲ್ ಸಲ್ಡಾನ್ಹಾ ವಹಿಸಿದ್ದರು ಮತ್ತು ಪ್ರಾದೇಶಿಕ ಕಾರ್ಯದರ್ಶಿ ಫಾದರ್ ಮ್ಯಾಕ್ಸಿಮ್ ಡಯಾಸ್ ನಿರ್ವಹಿಸಿದರು. ಸಭೆಯು ಪ್ರದೇಶದಾದ್ಯಂತ BECs ನ ಪ್ರಗತಿಯನ್ನು ಮೌಲ್ಯಮಾಪನ ಮಾಡುವತ್ತ ಗಮನಹರಿಸಿತು. ಡಯೋಸಿಸನ್ BEC ಕಾರ್ಯದರ್ಶಿಗಳು […]

ಮಂಗಳೂರಿನ ಯುವ ಗಾಯಕಿ ನಮ್ಮೆಲ್ಲರ ಮೆಚ್ಚಿನ ರಿಷಲ್ ಮೆಲ್ಬಾ ಕ್ರಾಸ್ತ 26/01/2025 ರಂದು ಬೆಂಗಳೂರಿನ ಗೋಪಾಲನ್ ಮಾಲ್ ಇವರು ಆಯೋಜಿ ಸಿದ ಸೂಪರ್ ಸಿಂಗರ್ 5ರ ವಿಜೇತೆಯಾಗಿ ಹೊರ ಹೊಮ್ಮಿದಾರೆ. ಪ್ರಶಸ್ತಿ ಪತ್ರ ಒಂದು ಲಕ್ಷ ನಗದು ಬಹುಮಾನ ಹಾಗೂ ಇನ್ನಿತರ ಪುರಸ್ಕಾರಗಳೊಂದಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ Zee ಕನ್ನಡ ಜ್ಯೂರಿಗಳ ಹಾಗೂ ಸಂಗೀತ ದಿಗ್ಗಜರ ಸಮ್ಮುಖದಲ್ಲಿ ಸನ್ಮಾನಿಸಪಟ್ಟಿದಾಳೆ ಮಂಗಳೂರಿನ ಪ್ರಖ್ಯಾತ ಗಾಯಕ ರೋನಿ ಕ್ರಾಸ್ತ ಈವರ ಮಗಳಾದ ರಿಷಲ್ರವರು ಪ್ರಸ್ತುತ St Aloysius ಕಾಲೇಜು […]

ಚಲಿಸುತ್ತಿದ್ದ ರೈಲಿನಲ್ಲಿ ಗರ್ಭಿಣಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ರೈಲಿನಿಂದ ಹೊರಗಸೆದಿರುವ ಅಮಾನುಷ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಮಹಿಳೆ ಕೊಯಮತ್ತೂರಿನಿಂದ ಆಂಧ್ರಪ್ರದೇಶ ಚಿತ್ತೂರಿಗೆ ಪ್ರಯಾಣಿಸುತ್ತಿದ್ದಳು. ಆಕೆ ನಾಲ್ಕು ತಿಂಗಳ ಗರ್ಭಿಣಿ ಆಗಿದ್ದು, ಶುಕ್ರವಾರ ಮುಂಜಾನೆ ರೈಲು ತಿರುಪತ್ತೂರು ಜಿಲ್ಲೆಯ ಜೋಲಾರ್ಪೇಟೆ ಬಳಿ ಚಲಿಸುತ್ತಿರುವಾಗ ಮಹಿಳೆ ಶೌಚಾಲಯಕ್ಕೆಂದು ಎದ್ದು ಹೋಗಿದ್ದಾಳೆ ಆಗ ಇಬ್ಬರು ಪುರುಷರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಸದ್ಯ ಮಹಿಳೆಯನ್ನು , ಚಿಕಿತ್ಸೆಗಾಗಿ ವೆಲ್ಲೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, […]

ಲೇಖನ ; ಪಿ. ಆರ್ಚಿಬಾಲ್ಡ್ ಪುರ್ಟಾಡೊ ಉಡುಪಿ ಡಯಾಸಿಸ್ ತನ್ನ ಪ್ರೀತಿಯ ಮೊದಲ ಬಿಷಪ್, ರೆವರೆಂಡ್ ರೆವರೆಂಡ್ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ತಮ್ಮ ನಂಬಿಕೆ ಮತ್ತು ಸೇವೆಯ ಗಮನಾರ್ಹ ಪ್ರಯಾಣದಲ್ಲಿ ಎರಡು ಮಹತ್ವದ ಮೈಲಿಗಲ್ಲುಗಳನ್ನು ಆಚರಿಸುತ್ತಾರೆ ಎಂದು ಸಂತೋಷಪಡುತ್ತದೆ. ಅವರ 75 ನೇ ಪ್ಲಾಟಿನಂ ಹುಟ್ಟುಹಬ್ಬದ ಈ ಸಂತೋಷದಾಯಕ ಸಂದರ್ಭದಲ್ಲಿ, ಉಡುಪಿ ಮತ್ತು ಅದರಾಚೆಗಿನ ನಿಷ್ಠಾವಂತರು ಅವರ ಸಮರ್ಪಿತ ಪಾದ್ರಿ ನಾಯಕತ್ವಕ್ಕಾಗಿ ತಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಈ ಭವ್ಯ ಆಚರಣೆಗೆ ಹೆಚ್ಚುವರಿಯಾಗಿ, ಅವರು […]

ಶ್ರೀನಿವಾಸಪುರ : ಬುಧವಾರ ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಮಾತನಾಡಿ ಸ್ಥಳೀಯರ ದೂರಿನ್ವಯ ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲಿಸಿ , ಈ ಸ್ಥಳವು ಕಂದಾಯ ಇಲಾಖೆ ಸಂಬಂದಪಟ್ಟಿದ್ದು, ಸ್ಥಳದ ಸಮಸ್ಯೆಯ ಬಗ್ಗೆ ತಹಶೀಲ್ದಾರ್ ರವರಿಗೆ ಮಾಹಿತಿ ನೀಡಲಾಗುವುದು.ಸಮಸ್ಯೆಯನ್ನು ತಹಶೀಲ್ದಾರ್ ನೇತೃತ್ವದಲ್ಲಿ ಪರಿಹಾರ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.ಪಟ್ಟಣದ ಈಚಲಕುಂಟೆ ಕೆರೆಯಂಗಳದಲ್ಲಿ ಕೃಷಿ ಇಲಾಖೆ ಪಕ್ಕದಲ್ಲಿ ಸಾರ್ವಜನಿಕರು ಓಡಾಡುವ ರಸ್ತೆಗೆ ಅಡ್ಡಲಾಗಿ ಕೆಲ ಪ್ರಭಾವಿಗಳು ಕಾರು ನಿಲ್ಲಿಸಿಕೊಳ್ಳಲು ಶೆಡ್ ನಿರ್ಮಿಸಿಕೊಂಡು ಓಡಾಡಲು ಕಷ್ಟರಕರವಾಗಿದೆ ಎಂದು ಸ್ಥಳೀಯ ಅಕ್ಕ , […]

ಮುಳಬಾಗಿಲು, ಫೆ-5, ರಾಷ್ಟ್ರೀಯ, ರಾಜ್ಯ ಹಾಗೂ ಗ್ರಾಮೀಣ ರಸ್ತೆಗಳಲ್ಲಿ ಹುರಳಿ, ರಾಗಿ, ಒಕ್ಕಣಿ ಮಾಡುವುದರಿಂದ ಆಗುವ ಅನಾಹುತಗಳ ಬಗ್ಗೆ ರೈತರಲ್ಲಿ ಕರ ಪತ್ರದ ಮುಖಾಂತರ ಜಾಗೃತಿ ಮೂಡಿಸಿ, ಆಗುವ ಅನಾಹುತಗಳನ್ನು ತಪ್ಪಿಸಬೇಕೆಂದು ರೈತ ಸಂಘದಿಂದ ಲೋಕೋಪಯೋಗಿ ಇಲಾಖೆ ಮುಂದೆ ಹುರಳಿ ಸಮೇತ ಹೋರಾಟ ಮಾಡಿ, ಮನವಿ ನೀಡಿ, ಒತ್ತಾಯಿಸಲಾಯಿತು.ಕೋಟ್ಯಾಂತರ ರೂಪಾಯಿ ಅನುದಾನಗಳಲ್ಲಿ ಅಭಿವೃದ್ದಿ ಪಡಿಸಿರುವ ರಸ್ತೆಗಳಲ್ಲಿ ಮಾಡುತ್ತಿರುವ ಹುರಳಿ, ರಾಗಿ, ಒಕ್ಕಣಿಯಿಂದ ಆಗುತ್ತಿರುವ ಅನಾಹುತಗಳಿಗೆ ಜವಾಬ್ದಾರಿ ಯಾರು?. ಕೃಷಿ ಅಧಿಕಾರಿಗಳ ಬೇಜವಾಬ್ದಾರಿಯೇ ಇಲ್ಲವೆ, ಕಣ್ಮರೆಯಾಗಿರುವ ಹಳ್ಳಿಗಳಲ್ಲಿನ ಕಣಗಳ […]