
ರಚನೆ:- ಬಿ.ಆರ್.ರವೀಂದ್ರ ವಕೀಲರು ಮತ್ತು ಸಾಹಿತಿಗಳು ಕೋಲಾರ. ಕೈವಾರ ತಾತಯ್ಯನವರು ತಮ್ಮ ನಾದ ಬ್ರಹ್ರ್ಮಾನಂದ -ನಾರೇಯಣ ಶತಕದಲ್ಲಿ ಈ ರೀತಿ ಹೇಳುತ್ತಾರೆ, ಚಾಪಲ್ಯ ಮತಮುಲೋ – ಚೇರಿನ ವಾರೆಲ್ಲಅವಿವೇಕುಲಯಿನಾರು – ಆತ್ಮ ಮರಚಿಅಟುವಂಟಿ ದುರ್ಮತಮು -ಆದಿ ಎಂದು ಲೇದುರಾನಾದ ಬ್ರಹ್ರ್ಮಾನಂದ -ನಾರೇಯಣ ಕವಿ ಅಂದರೆ ಇಂದ್ರೀಯ ಸುಖ ಭೋಗವನ್ನು ಬಯಸುವವನು ಚಪಲಚಿತ್ತನಾಗಿ, ಅಜ್ಞಾನದ ಅಂಧಕಾರದಲ್ಲಿ ಮುಳುಗಿ, ತಮ್ಮ ಜನ್ಮದ ರಹಸ್ಯವನ್ನೇ ಮರೆಯುತ್ತಾನೆ, ತನ್ನೊಳಗೆ ಅಮಿತವಾದ ಜ್ಞಾನವಿದ್ದರೂ ಸಹ ಅರಿವಿಲ್ಲದೆ ಆತ ಅವಿವೇಕಿಯಾಗುತ್ತಾನೆ, ಯಾರು ಈ ಇಂದ್ರಿಯ ಸುಖ […]

ಕೋಲಾರ : ಕೋಲಾರದಲ್ಲಿ ನೋಂದಾಯಿಸಿದ 15,000 ಆಟೋಗಳಿದ್ದು, ಪ್ರತಿಯೊಬ್ಬ ಆಟೋ ಚಾಲಕರು ತಾವೂ ಮತ ಹಾಕಿ ತಮ್ಮ ಪ್ರಯಾಣಿಕರಿಗೂ ಮತ ಹಾಕುವಂತೆ ಪ್ರೇರೆಪಿಸಬೇಕೆಂದು ಜಿಲ್ಲಾ ಪಂಚಾಯತಿ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಪದ್ಮಬಸವಂತಪ್ಪ ಅವರು ತಿಳಿಸಿದರು. ಜಿಲ್ಲಾ ಸ್ವೀಪ್ ಸಮಿತಿಯಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ “ಮಜ್ಜಿಗೆ ಕುಡಿಯಿರಿ ಮತದಾನ ಮಾಡಿರಿ” ಎಂಬ ವಿನೂತನ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬಿಸಿಲು-ಮಜ್ಜಿಗೆ- ಮತದಾನ ಇವುಗಳನ್ನು ಕಡ್ಡಾಯವಾಗಿ ಅನುಭವಿಸಿ ಮತದಾನ ಮಾಡಿ ಎಂದರು. ಚುನಾವಣೆ ಸಂದರ್ಭದಲ್ಲಿ ಆಟೋ […]

ಕೋಲಾರ,ಏ.15: ನಗರದ ಬ್ರೂಸ್ಲಿ ಕರಾಟೆ ಶಾಲೆಯ ವಿದ್ಯಾರ್ಥಿ ಸಿಯಾನ್ ಜಾನ್ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುತ್ತಾಳೆ.ನಗರದ ಸೆಂಟ್ ಆನ್ಸ್ ಶಾಲೆಯಲ್ಲಿ 3ನೇ ತರಗತಿಯಲ್ಲಿ ಅಭ್ಯಸಿಸುತ್ತಿರುವ ಸಿಯಾನ್ ಜಾನ್ ತಂದೆ ಆದರ್ಶ ರೇವಂತ್, ತಾಯಿ ಲೆನೆಟ್ ಅವರ ಸುಪುತ್ರಿಯಾಗಿದ್ದಾರೆ.ಇವರು ಈಗಾಗಲೇ ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಪದಕಗಳನ್ನು ಗಳಿಸಿರುತ್ತಾರೆ. ನಗರದ ಪ್ರತಿಷ್ಟಿತ ಭ್ರೂಸ್ಲಿ ಕರಾಟೆ ಶಾಲೆಯ ಸಂಸ್ಥಾಪಕ ಹಾಗೂ ಚಲನಚಿತ್ರ ನಟ ತರಬೇತುದಾರರಾದ ಕರಾಟೆ ಶ್ರೀನಿವಾಸರ ಬಳಿ ತರಬೇತಿ ಪಡೆಯುತ್ತಿದ್ದಾರೆ.ಮುಂದಿನ ತಿಂಗಳು ಮಲೇಷ್ಯಾದಲ್ಲಿ ನಡಯಲಿರುವ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾಳೆ.

ಶ್ರೀನಿವಾಸಪುರ : ಸಮಾಜವನ್ನು ತಿದ್ದಲು ಹಾಗೂ ಸಮಾಜಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕೇವಲ ಸರ್ಕಾರವನ್ನೇ ಅವಲಂಭಿಸುವುದನ್ನು ಬಿಟ್ಟು ಸಮಾಜಕ್ಕೆ ಬೇಕಾದದುನ್ನ ಸಂಘ, ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹೇಳಿದರು.ಪುರಸಭೆ ಕಛೇರಿಯಲ್ಲಿ ಶನಿವಾರ ಶ್ರೀನಿವಾಸಪುರ ನೇತಾಜಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಪಟ್ಟಣದ ಪುರಸಭೆ ಕಛೇರಿಯಲ್ಲಿ ಶುದ್ದ ಕುಡಿಯುವ ನೀರಿನ ಮಡಿಕೆ ಘಟಕವನ್ನು ಉದ್ಗಾಟಿಸಿ ಮಾತನಾಡಿದರು.ಪಟ್ಟಣ ವ್ಯಾಪ್ತಿಯಲ್ಲಿನ ಸಾರ್ವಜನಿಕ ಆಸ್ಪತ್ರೆ ಆವರಣ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ , ಹಾಗು ಅಧಿಕ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ […]

ಶ್ರೀನಿವಾಸಪುರದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಪರ ಭಾನುವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಹಾಗೂ ಸಚಿವ ಡಾ. ಸುಧಾಕರ್ ಉದ್ಘಾಟಿಸಿದರು. ಕೋಮುವಾದಿಗಳು ಹಾಗೂ ಸಂವಿಧಾನ ವಿರೋಧಿಗಳು ಎಲ್ಲಿಯವರೆಗೆ ಇರುತ್ತಾರೊ, ಅಲ್ಲಿಯವರೆಗೆ ನಾನು ಸಾರ್ವಜನಿಕ ಜೀವನದಿಂದ ದೂರ ಹೋಗುವುದಿಲ್ಲ ಎಂದು ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಘೋಷಿಸಿದರು. ಪಟ್ಟಣದ ಮಾವಿನ ಕಾಯಿ ಮಂಡಿಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಪರ ಭಾನುವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ […]

ಕೋಲಾರ:- ಅಂಬೇಡ್ಕರ್ ದೇಶಕ್ಕೆ ನೀಡಿದ ಅತ್ಯುನ್ನತ ಸಂವಿಧಾನವನ್ನು ಬಳಸಿಕೊಂಡು ಭಾರತ ದೇಶವನ್ನು ವಿಶ್ವದ ಬಲಿಷ್ಠ ರಾಷ್ಟ್ರವನ್ನಾಗಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಪ್ರಜೆಗಳ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಹೇಳಿದರು.ನಗರದ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಅಂಬೇಡ್ಕರ್ 133 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.ಅಂಬೇಡ್ಕರ್ ಅವರ ಸಮವಿಧಾನವು ಸಮಾನತೆ, ಸಹೋದರತೆ, ಸೌಹಾರ್ದತೆ ಹಾಗೂ ಸಾಮಾಜಿಕ ನ್ಯಾಯ ಎಂಬ ನಾಲ್ಕು ಪ್ರಮುಖ ಅಂಶಗಳ ಮೇಲೆ ನಿಂತಿದೆ, ಸಂವಿಧಾನದ ಈ […]

ಕುಂದಾಪುರ (ಎ. 14) : ಇಂದಿನ ಮಕ್ಕಳಿಗೆ ವಿದ್ಯೆಯ ಜೊತೆಗೆ ವ್ಯವಹಾರ ಜ್ಞಾನ ಅತಿ ಮುಖ್ಯ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಬೇಕಾದರೆ ಮಕ್ಕಳಿಗೆ ಎಲ್ಲರೊಂದಿಗೆ ಬೆರೆಯಲು ಮಾತಿನ ಕೌಶಲ್ಯ, ಲೆಕ್ಕಾಚಾರದ ವಿಚಾರ ತಿಳಿದಿರಬೇಕೆಂದು ಎಚ್. ಎಮ್. ಎಮ್ ಮತ್ತು ವಿ. ಕೆ. ಆರ್ ಸಂಸ್ಥೆ ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ನ 10ನೇ ದಿನದಲ್ಲಿ ಶಾಲಾ ವಠಾರದಲ್ಲಿ ನಡೆದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಯುತ ವಿಜಯ್ ರವರು ಮಾತನಾಡಿದರು. ಅವರು ಡಾ. […]

ಶ್ರೀನಿವಾಸಪುರ : ಈ ಹಿಂದೆ ಬಿಜೆಪಿ ಆಡಳಿತದಲ್ಲಿ ರಾಜ್ಯ ಕೆರೆ, ಕುಂಟೆ ಹಾಗೂ ಡ್ಯಾಮ್ಗಳಲ್ಲಿ ಸದಾ ನೀರು ಹರಿಯುತ್ತಿತ್ತು. ಕೆರೆಗಳ ಕಟ್ಟೆಯ ಮೇಲೆಯೂ ಹರಿಯುತ್ತಿತ್ತು. ಆದರೆ ಇಂದು ಮೂಕ ಜೀವಿಗಳು ನೀರು ಕುಡಿಯಲು ನೀರಿಲ್ಲದೆ ಪರದಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದರು. ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶ್ರೀನಿವಾಸಪುರ ವಿಧಾನ ಸಭಾ ಕ್ಷೇತದ ಹೋಳೂರು ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಎನ್ಡಿಎ ಅಭ್ಯರ್ಥಿಯ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಸಕಾಲದಲ್ಲಿ […]

ರಚನೆ:- ಬಿ.ಆರ್. ರವೀಂದ್ರ, ವಕೀಲರು ಮತ್ತು ಸಾಹಿತಿಗಳು ಕೋಲಾರ. ಈಗ ಸಮಾಜದಲ್ಲಿ ತಂದೆ ತಾಯಿಗಳಿಗೆ ತಮ್ಮ ವೃದ್ಧಾಪ್ಯದಲ್ಲಿ ಯಾರು ಚೆನ್ನಾಗಿ ನೋಡಿಕೊಳ್ಳಬಹುದು ಎನ್ನುವ ಅನುಮಾನದ ದೃಷ್ಟಿಯಿಂದ ಕಾಣುವುದು ಹೆಚ್ಚಾಗಿ ಮಕ್ಕಳ ಮನದಲ್ಲಿ ಮೂಡುವ ಪ್ರಶ್ನೆ ಪಿತೃಗಳಿಗೆ ಪಿತೃ ಭಕ್ತಿ ತೋರುವುದಾದರೂ ಹೇಗೆ? ಎಂದು, ಸಾಧಾರಣವಾಗಿ ಸಮಾಜದಲ್ಲಿ ಒಟ್ಟು ಕುಟುಂಬಗಳು ಮರೆಯಾದ ನಂತರ ಪೋಷಕರಿಗೆ ಈ ರೀತಿಯ ಭಯ, ಆತಂಕ ಇರುವ ಮಕ್ಕಳಲ್ಲಿ ಸಾಕುವವರು ಯಾರು? ಬಿಟ್ಟು ಹೋಗುವವರು ಯಾರು? ಹೀಗೆ ಹಲವಾರು ಚಿಂತೆ, ಆಲೋಚನೆಗಳಲ್ಲಿ ಬಿದ್ದು ಮಾತಿನ […]