ಶ್ರೀನಿವಾಸಪುರ : ತಾಲೂಕಿನಲ್ಲಿ ಯಾವುದೇ ಕಾರಣಕ್ಕೂ ರಸ್ತೆ , ಇತರೆ ಕಾಮಗಾರಿಗಳು ಕಳಪೆಯಿಂದ ಇರದಂತೆ ಎಚ್ಚರವಹಿಸುವಂತೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು .ಪಟ್ಟಣದ ಅಮಾನಿಕೆರೆಯಂಗಳದಲ್ಲಿ ನಡೆಯುತ್ತಿರುವ ಕ್ರೀಡಾಂಗಣ ಕಾಮಗಾರಿಯನ್ನ ಮಂಗಳವಾರ ವೀಕ್ಷಿಸಿ ಮಾತನಾಡಿದರು.ಕ್ರೀಡಾಂಗಣ ಕಾಮಗಾರಿಯು ಪ್ರಾರಂಭದ ಹಂತದಲ್ಲಿದ್ದು, ಪ್ರಾರಂಭದಲ್ಲಿಯೇ ವಿಘ್ನವಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದೇನೆ ಎಂದು ತಿಳಿಸುತ್ತಾ, ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯಾದ ಅವಘಡಗಳು ನಡೆಯದಂತೆ ಅಧಿಕಾರಿಗಳಿಗೆ […]

Read More

ಶ್ರೀನಿವಾಸಪುರ : ದೇಶದಲ್ಲಿಯೇ ಅತಿ ದೊಡ್ಡ ಮಾರುಕಟ್ಟೆಯೂ ಸಹಾ ಹೊಂದಿದೆ ದೇಶ ವಿದೇಶಗಳಿಗೆ ಇಲ್ಲಿಂದಲೇ ಮಾವು ರಫ್ತು ಮಾಡುವ ಕಾರಣ ಪ್ರಪಂಚ ಮಾವಿನ ಹಣ್ಣಿನ ನಗರವೆಂದೇ ಶ್ರೀನಿವಾಸಪುರ ಪ್ರಖ್ಯಾತಿಯಾಗಿದೆ ಎಂದು ಕರವೇ ಸಮರ ಸೇನೆ ತಾಲೂಕು ಪ್ರದಾನ ಕಾರ್ಯದರ್ಶಿ ವಿ.ಎನ್.ಜಗದೀಶ್ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಬಾಗ ಶುಕ್ರವಾರ ಕನ್ನಡಪರ ಸಂಘಟನೆಗಳ ಸದಸ್ಯರು ಪಟ್ಟಣದ ಚಿಂತಾಮಣಿ ಬೆಂಗಳೂರು ರಸ್ತೆ ಬದಿಗಳಲ್ಲಿ ವಾಹನಗಳನ್ನು ಚಾಲಕರು ನಿಲ್ಲಿಸುತ್ತಿದ್ದು ಇದರಿಂದ ಆಗುವ ಟ್ರಾಫಿಕ್ ಸಮಸ್ಯೆ ಬಗೆಹರಿಸುವಂತೆ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ […]

Read More

ಶ್ರೀನಿವಾಸಪುರ : ನೇಹಾ ಹಿರೇಮಠ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹತ್ಯೆ, ಹುಬ್ಬಳಿಯಲ್ಲಿ ಅಂಜಲಿ ಅಂಬಿಗೇರ (20 ವರ್ಷ) ಯುವತಿಯ ಹತ್ಯೆಯಾಗಿರುವುದು ರಾಜ್ಯ ಸರ್ಕಾರ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆಯು ಎಷ್ಟು ಹದಗಟ್ಟಿದೆ ಎಂದು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಡಾ|| ಕೆ.ಎನ್.ವೇಣುಗೋಪಾಲ್ ರಾಜ್ಯ ಸರ್ಕಾರದ ವಿರುದ್ಧ ಹೀಯಾಳಿಸಿದರು.ಪಟ್ಟಣದ ಸ್ವಗೃಹದಲ್ಲಿನ ಕಛೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.ಕೂಡಲೇ ಅಂಜಲಿ ಅಂಬಿಗೇರ ರವರನ್ನ ಕೊಲೆ ಮಾಡಿರುವ ಆರೋಪಿಯನ್ನು ಬಂದಿಸಿ ಕಾನೂನು ರೀತ್ಯ ಆರೋಪಿಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕೊಲೆಗೆ […]

Read More

ಕೋಲಾರ:- ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ರಾಹುಲ್ ಗಾಂಧಿ ಪರವಾಗಿ ರಾಜ್ಯ ಆಹಾರ ಸಚಿವ ಹಾಗೂ ಜಿಲ್ಲೆಯ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಪ್ರಚಾರ ನಡೆಸಿದರು.ಈ ಸಂದರ್ಭದಲ್ಲಿ ಸಾರ್ವಜನಕ ಸಭೆಯಲ್ಲಿ ಮಾತನಾಡಿದ ಸಚಿವರು. ತಾವು ಯುಪಿಯ ಸರ್ಕಾರದಲ್ಲಿ ಪ್ರಧಾನಮಂತ್ರಿ ಮನಮೋಹನ ಸಿಂಗ್ ರವರ ಸಚಿವ ಸಂಪುಟದಲ್ಲಿ ರೈಲ್ವೆ ಇಲಾಖೆಯ ರಾಜ್ಯ ದರ್ಜೆ ಸಚಿವರಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ರಾಯಬರೇಲಿ ವ್ಯಾಪ್ತಿಯಲ್ಲಿ ಕೈಗೊಂಡ ಜನಪರ ಕಾರ್ಯಗಳ ಕುರಿತು ಮತದಾರರ ಗಮನ ಸೆಳೆದರು.ಉತ್ತರ ಪ್ರದೇಶದ ಕಾಂಗ್ರೆಸ್ ಮುಖಂಡರು ಮಾತನಾಡಿ, ರಾಯಬರೇಲಿಯಲ್ಲಿ ರೈಲ್ವೆ ಕೋಚ್ […]

Read More

ಶ್ರೀನಿವಾಸಪುರ, ಮೇ.13: ಮುಂಗಾರು ಮಳೆಗೆ ನಷ್ಟವಾಗಿರುವ ಮಾವು ಬೆಳೆ ವೀಕ್ಷಣೆ ಮಾಡಲು ವಿಶೇಷ ತಂಡ ರಚನೆ ಮಾಡಿ ಮಾವು ಮಾರುಕಟ್ಟೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕಮೀಷನ್ ಹಾವಳಿ ತಡೆಗಟ್ಟಲು ಆಗ್ರಹಿಸಿ ಮೇ.20 ರ ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆ ಮುತ್ತಿಗೆ ಹಾಕಲು ತೋಟಗಾರಿಕಾ ಕಚೇರಿ ಆವರಣದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.ರೈತರು ಬೆವರು ಸುರಿಸಿ ಖಾಸಗಿ ಸಾಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಜೋಪಾನ ಮಾಡಿ ಕಾಪಾಡಿಕೊಂಡು ಬಂದಿದ್ದ ಮಾವಿನ ಪಸಲು ಒಂದೇ ರಾತ್ರಿಗೆ […]

Read More

ಶ್ರೀನಿವಾಸಪುರ: ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಭಾನುವಾರ ಶಂಕರ ಜಯಂತಿ ಅಂಗವಾಗಿ ಶಂಕರಾಚಾರ್ಯರ ಭಾವ ಚಿತ್ರಕ್ಕೆ ಸುಮದಾಯದ ಮುಖಂಡರು ಪುಷ್ಪನಮನ ಸಲ್ಲಿಸಿದರು.ತಹಶೀಲ್ದಾರ್ ಕಛೇರಿ ಸಿಬ್ಬಂದಿ ಅಭಿಷೇಕ್, ಆರ್‍ಐ ಗುರುರಾಜರಾವ್, ಶಂಕರಮಠದ ವ್ಯವಸ್ಥಾಪಕ ಶ್ರೀನಿವಾಸ್,ಸಮುದಾಯದ ಮುಖಂಡರಾದ ಗೋಪಿನಾಥ್‍ರಾವ್, ಸುಬ್ರಮಣ್ಯಂ, ಶಂಕರಮಠದ ಅರ್ಚಕ ಸುಬ್ರಮಣ್ಯ ಸ್ವಾಮಿ ಇದ್ದರು.

Read More

ಶ್ರೀನಿವಾಸಪುರ : ಪಟ್ಟಣದ ಶಂಕರಮಠದಲ್ಲಿ ಶುಕ್ರವಾರ ರಾತ್ರಿ ಶಂಕರ ಜಯಂತಿ ಅಂಗವಾಗಿ ಸೌಂದರ್ಯ ಲಹರಿ, ಉಪನ್ಯಾಸಗಳು, ಹಾಗೂ ಮಂಟಪೋತ್ಸವವು ಭಜನೆ , ಕೋಲಾಟ ಹಾಗೂ ಮಂತ್ರ ಪಠಣಗಳೊಂದಿಗೆ ಅದ್ದೂರಿಯಾಗಿ ನಡೆಯಿತು.ಕಾರ್ಯಕ್ರಮದಲ್ಲಿ ಶಂಕರಮಠದ ವ್ಯವಸ್ಥಾಪಕ ಶ್ರೀನಿವಾಸ್ ತಾಲೂಕು ಸತ್ಸಂಗದ ಅಧ್ಯಕ್ಷ ಸತ್ಯಮೂರ್ತಿ, ಸದಸ್ಯೆ ಮಂಗಳಸತ್ಯಮೂರ್ತಿ , ಶಂಕರ ಮಠದ ಸದಸ್ಯರಾದ ಮಂಜುನಾಥ್ , ಶ್ರೀನಿವಾಸಮೂರ್ತಿ, ದೇವಸ್ಥಾನದ ಅರ್ಚಕ ಸುಬ್ರಮಣ್ಯಸ್ವಾಮಿ, ನಾಗೇಂದ್ರ ಇದ್ದರು.

Read More

ಶ್ರೀನಿವಾಸಪುರ , ಪೋಟೋ : ಪಟ್ಟಣದ ಕಟ್ಟೆ ಕೆಳಗಿನ ಪಾಳ್ಯದ ನಿವಾಸಿ ಮಹಿಳೆಯಬ್ಬರಿಗೆ ಬಾಯಿ ಕ್ಯಾನ್ಸರ್ ನಿಂದ ಬಳುತ್ತಿದ್ದ ಹಿನ್ನೆಲೆಯಲ್ಲಿ ಯಾದವ ಸಮಾಜದ ಮುಖಂಡ ಎಂ.ಎಸ್.ಕೃಷ್ಣಪ್ಪ , ಉದ್ಯಮಿ ಬಾಸ್ಕರ್, ಲಾಯರ್, ರಾಧಕೃಷ್ಣರವರು ಮುಂದಿನ ಚಿಕಿತ್ಸೆಗೆ ಆರ್ಥಿಕ ನೆರವನ್ನು ನೀಡಿ, ಈ ಮಹಿಳೆಯ ಮಗಳ ವಿದ್ಯಾಭ್ಯಾಸಕ್ಕೂ ಸಹಾಯ ಹಸ್ತವನ್ನು ನೀಡುವುದಾಗಿ ದಾನಿಗಳು ತಿಳಿಸಿದರು.

Read More

ಶ್ರೀನಿವಾಸಪುರ : ಬಸವಣ್ಣ ಅವರು ಶೈವ ಧರ್ಮದ ಭಕ್ತಿ ಚಳುವಳಿಯಲ್ಲಿ ಪ್ರಸಿದ್ದ ಸಂತರಾಗಿದ್ದರು. ಇವರು ರಾಜನೀತಿಜ್ಞರಾಗಿ ಮತ್ತು ಸಮಾಜ ಸುಧಾರಕರಾಗಿ ತಮ್ಮ ಕಾವ್ಯ ಮತ್ತು ಬರವಣಿಗೆಯ ಮೂಲಕ ಸಾರ್ವಜನಿಕರಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಅವಿರತವಾಗಿ ಶ್ರಮಿಸಿದರು ಎಂದು ಹೇಳಿ ಬಸವಣ್ಣನವರ ತತ್ವಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಲು ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ಸಲಹೆ ನೀಡಿದರು.ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಶುಕ್ರವಾರ ಬಸವ ಜಯಂತಿ ಅಂಗವಾಗಿ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಆರ್‍ಐ ಮುನಿರೆಡ್ಡಿ, ಸಮುದಾಯ ಮುಖಂಡ ವೀರಭದ್ರಸ್ವಾಮಿ, ತಹಸೀಲ್ದಾರ್ […]

Read More
1 46 47 48 49 50 338