
ಕೋಲಾರ:- ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್ಗಳ ಮೂಲಕ ಯಶಸ್ವಿನಿ ಯೋಜನೆ ನೋಂದಣಿಯನ್ನು ಅಂದೋಲನವಾಗಿ ಮಾಡಿ, ಅವಿಭಜಿತ ಜಿಲ್ಲೆಯ 7 ಲಕ್ಷ ಮಹಿಳೆಯರ ಮನೆ ಬಾಗಿಲಿಗೆ ಆರೋಗ್ಯಭಾಗ್ಯದ ಸೌಲಭ್ಯ ತಲುಪಿಸಿ ಎಂದು ಬ್ಯಾಂಕ್ ಹಾಗೂ ಸೊಸೈಟಿ ಸಿಬ್ಬಂದಿಗೆ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಯಶಸ್ವಿನಿ ಯೋಜನೆ ಅನುಷ್ಟಾನದ ಕುರಿತು ಪ್ಯಾಕ್ಸ್ಗಳು ಹಾಗೂ ಡಿಸಿಸಿ ಬ್ಯಾಂಕಿನ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಶಾಖೆಗಳ ಸಿಬ್ಬಂದಿಯೊಂದಿಗೆ ಹಮ್ಮಿಕೊಂಡಿದ್ದ ಆನ್ಲೈನ್ ಸಭೆಯ ಅಧ್ಯಕ್ಷತೆ […]

ಶ್ರೀನಿವಾಸಪುರ: ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಎಲ್.ಮಂಜುನಾಥ್ ಹೇಳಿದರು.ತಾಲ್ಲೂಕಿನ ಪನಸಮಾಕನಹಳ್ಳಿಯಲ್ಲಿ ಅನುಗ್ರಹ ರೈತ ಉತ್ಪಾದಕರ ಕಂಪನಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ರೈತ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಚೌದರಿ ಚರಣ್ ಸಿಂಗ್ ಅವರ ಜನ್ಮದಿನಾಚರಣೆಯನ್ನು ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತಿದೆ ಎಂದು ಹೇಳಿದರು.ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶ್ರೀರಾಮರೆಡ್ಡಿ ಮಾತನಾಡಿ, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ದಿವ್ಯ ನಿರ್ಲಕ್ಷ್ಯ ತಳೆದಿದೆ. ಜನ ಪ್ರತಿನಿಧಿಗಳು ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಚುನಾವಣೆ […]

ಶ್ರೀನಿವಾಸಪುರ: ಪಟ್ಟಣದ ಇಂದ್ರಾ ಭವನ್ ವೃತ್ತದ ಸಮೀಪ ಗುರುವಾರ ಅನಧಿಕೃತವಾಗಿ ಇಡಲಾಗಿದ್ದ ಪೆಟ್ಟಿಗೆ ಅಂಗಡಿ ವಿವಾದವನ್ನು, ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಅವರೊಂದಿಗೆ ಚರ್ಚಿಸುವುದರ ಮೂಲಕ ಬಗೆಹರಿಸಲಾಯಿತು.ಪಟ್ಟಣದ ಅಮರಾವತಿ ಎಂಬುವವರಿಗೆ ಬಸ್ ನಿಲ್ದಾಣದ ಪಾಸಲೆಯಲ್ಲಿ ಅಂಗಡಿ ತೆರೆಯು ಬಗ್ಗೆ ಪುರಸಭೆ ಪ್ರಸ್ತಾವನೆಯಲ್ಲಿ ಒಪ್ಪಿಗೆ ಸೂಚಿಸಲಾಗಿತ್ತು ಎಂದು ಹೇಳಲಾಗಿದ್ದು, ಅವರ ಕಡೆಯವರು ಪುರಸಭೆ ವಾಣಿಜ್ಯ ಮಳಿಗೆ ಮುಂಭಾಗದಲ್ಲಿ ಪೆಟ್ಟಿಗೆ ಅಂಗಡಿ ತಂದಿಟ್ಟಿದ್ದರು. ಆ ಸ್ಥಳದಲ್ಲಿ ಯೋಗಿ ನಾರೇಯಣ ಯತೀಂದ್ರರ ಪ್ರತಿಮೆ ಸ್ಥಾಪಿಸಲು ಹಾಗೂ ವೃತ್ತಕ್ಕೆ ನಾರೇಯಣ ಯಂತ್ರೀಂದ್ರರ ಹೆಸರಿಡಲು ಪುರಸಭೆ […]

ಕೋಲಾರ:- ಚುನಾವಣೆ ಹತ್ತಿರವಾಗುತ್ತಿದ್ದು, ಕೆಲವು ರಾಜಕೀಯ ಪಕ್ಷಗಳ ಹಣವಂತ ಮುಖಂಡರು ಮತ ಖರೀದಿಗೆ ಬಂದಾಗ ಸ್ವಾಭಿಮಾನ ಬಲಿಕೊಟ್ಟು ಅವರಿಗೆ ಸಂಘದ ಸದಸ್ಯರ ಸಂಖ್ಯೆ, ಮತ್ತಿತರ ಮಾಹಿತಿ ನೀಡಿ ಅಪಹಾಸ್ಯಕ್ಕೆ ಗುರಿಯಾಗದೇ ಬುದ್ದಿಹೇಳಿ ಕಳುಹಿಸಿ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.ನಗರದ ಸಾಯಿಬಾಬಾ ಮಂದಿರದಲ್ಲಿ ದಕ್ಷಿಣ ಕಸಬಾ ರೇಷ್ಮೆಬೆಳೆಗಾರರ ಹಾಗೂ ರೈತರ ಸಹಕಾರ ಸಂಘದ ಆಶ್ರಯದಲ್ಲಿ 34 ಮಹಿಳಾ ಸಂಘಗಳಿಗೆ 1.75 ಕೋಟಿ ರೂ ಶೂನ್ಯ ಬಡ್ಡಿ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.ಹೆಣ್ಣು […]

ಕೋಲಾರ,ಡಿ.22: ಇಂಗ್ಲೀಷ್ನಿಂದ ಮಾತ್ರ ವೃತ್ತಿ ಮತ್ತು ಬದುಕಿನಲ್ಲಿ ಯಶಸ್ಸು ಸಾಧ್ಯ ಎಂಬ ಭ್ರಮೆ ಬೇಡ, ಸಾಧಕ ಮಹನೀಯರೆಲ್ಲರೂ ಕನ್ನಡದಲ್ಲೇ ಮುಂದೆ ಬಂದವರು ಎಂಬುವುದನ್ನು ಮರೆಯಬಾರದು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಿ.ದೇವರಾಜ ಅವರು ತಿಳಿಸಿದರು.ಮುಳಬಾಗಿಲು ತಾಲೂಕಿನ ಎಂ.ಅಗ್ರಹಾರ ಗ್ರಾಮದಲ್ಲಿ ದಿಟ್ಟ ಕನ್ನಡಿಗರ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ್ದ 3ನೇ ವರ್ಷದ ಕನ್ನಡ ನಾಡ ಹಬ್ಬ, ಉಚಿತ ಆರೋಗ್ಯ ಶಿಬಿರ ಹಾಗೂ ವಿದ್ಯಾರ್ಥಿಗಳಿಗೆ ಲೇಖನಿ ಸಾಮಾಗ್ರಿಗಳ ವಿತರಣೆ ಸಮಾರಂಭವನ್ನು, ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಮಕ್ಕಳ ಮೇಲೆ ತಂದೆ-ತಾಯಿ […]

ಕೋಲಾರ:- ಸೊಸೈಟಿ ಸಿಬ್ಬಂದಿ ರೈತರ ಮನೆ ಬಾಗಿಲಿಗೆ ಹೋಗಿ ದಾಖಲೆ ಸಂಗ್ರಹಿಸಿ, ಪ್ರತಿ ಕುಟುಂಬಕ್ಕೂ ನೆರವಾಗುವ ಮೂಲಕ ಸಾಲ ವಿತರಣೆಯನ್ನು ಡಿಸಿಸಿ ಬ್ಯಾಂಕಿನಿಂದ ಆಂದೋಲನವಾಗಿ ನಡೆಸೋಣ, ಸಂಕಷ್ಟದಲ್ಲಿರುವ ರೈತರಿಗೆ ನೆರವಾಗೋಣ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು.ತಾಲ್ಲೂಕಿನ ಸೀಪೂರು ಗ್ರಾಮದಲ್ಲಿ ಬ್ಯಾಂಕಿಂಗ್ ಸೌಲಭ್ಯಗಳ ಕುರಿತಂತೆ ರೈತರೊಂದಿಗೆ ಮುಖಾಮುಖಿ ಚರ್ಚೆಯಲ್ಲಿ ಭಾಗವಹಿಸಿ, ಸಾಂಕೇತಿಕವಾಗಿ 19 ಲಕ್ಷ ರೂ ಬೆಳೆ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.ಮಳೆ ಬಂದಿದೆ, ಕೆಸಿ ವ್ಯಾಲಿ ನೀರಿನಿಂದ ಅಂತರ್ಜಲ ಮಟ್ಟ […]

ಶ್ರೀನಿವಾಸಪುರ: ದಳಸನೂರು ರೇಷ್ಮೆ ಬೆಳೆಗಾರರ ಹಾಗು ರೈತರ ಸೇವಾಸಹಕಾರ ಸಂಘಕ್ಕೆ 12 ಮಂದಿ ನೂತನ ನಿರ್ದೆಶಕರು ಆಯ್ಕೆಯಾಗಿದ್ದಾರೆ.ತಾಲ್ಲೂಕಿನ ದಳಸನೂರು ರೇಷ್ಮೆ ಬೆಳೆಗಾರರ ಸಹಕಾರರ ಸಂಘ ನಿ. ಆಡಳಿತ ಮಂಡಳಿಯ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈ ಕೆಳಕಂಡಂತೆ ನಿರ್ದೆಶಕರು ಆಯ್ಕೆಯಾಗಿದ್ದಾರೆ. ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ದಳಸನೂರು ನಾಗಭೂಷಣ್ ರೆಡ್ಡಿ, ಒಳಗೇರನಹಳ್ಳಿ ಮುರಳಿ, ಚಿರುವನಹಳ್ಳಿ ರಾಮಕೃಷ್ಣಾರೆಡ್ಡಿ ಸಿ, ಗಾಂಡ್ಲಹಳ್ಳಿ ಬಿ.ಎಸ್ ಶಶಿಕುಮಾರ್, ಒಳಗೇರನಹಳ್ಳಿ ಶಿವಾರೆಡ್ಡಿ ಎಸ್, ಸಾಲಗಾರರ ಪರಿಶಿಷ್ಟ ಮೀಸಲು ಕ್ಷೇತ್ರದಿಂದ ಕೋನೇಟಿ ತಿಮ್ಮನಹಳ್ಳಿ ವೀರಪ್ಪ ಎಂ, ಸಾಲಗಾರರ […]

ಕೋಲಾರ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಸದಸ್ಯರಿಗೆ 2022-23 ನೇ ಸಾಲಿನ ಯಶಸ್ವಿನಿ ಯೋಜನೆಯ ಪಲಾನುಭವಿಗಳಾಗಲು ಸಂಘದಿಂದ ವ್ಯವಸ್ಥೆ ಕಲ್ಪಿಸಲಾಗಿದೆ.ಸಂಘದ ಷೇರುದಾರ ಸದಸ್ಯರು ಕುಟುಂಬದ ನಾಲ್ಕ ಮಂದಿಗೆ ಶುಲ್ಕ 500 ರೂಗಳಾಗಿರುತ್ತದೆ. ಒಂದು ಕುಟುಂಬದಲ್ಲಿ 10 ಸದಸ್ಯರಿಗೆ ಮಾತ್ರ ಅವಕಾಶವಿದ್ದು, ತಲಾ ಎರಡು ಭಾವಚಿತ್ರ, ಆಧಾರ್ಕಾರ್ಡ್, ರೇಷನ್ ಕಾರ್ಡ್ ಕಡ್ಡಾಯವಾಗಿದ್ದು, 4 ಸದಸ್ಯರಿಗಿಂತ ಹೆಚ್ಚುವರಿ ಸದಸ್ಯರು ಕುಟುಂಬದಲ್ಲಿ ನೊಂದಾಯಿಸಿಕೊಳ್ಳಲು ತಲಾ ಒಬ್ಬೊಬ್ಬರಿಗೆ 100 ರೂಗಳನ್ನು ಪಾವತಿಸಿ ಯೋಜನೆಯ ಲಾಭವನ್ನು […]

ಶ್ರೀನಿವಾಸಪುರ : ತಾಲ್ಲೂಕು ವ್ಯಾಪ್ತಿಯಲ್ಲಿ ನಂಬಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸ್ವಯಂ ಚಾಲಿತ ಸಮೂಹ ಹಾಲು ಕರೆಯುವ ಯಂತ್ರ ಘಟಕವನ್ನು ಕೋಮುಲ್ ತಾಲ್ಲೂಕು ನಿರ್ದೇಶಕರಾದ ಎನ್. ಹನುಮೇಶ್ ರವರು ಉದ್ಘಾಟನೆ ಮಾಡಿ ರವರು ಮಾತನಾಡಿ , ಸ್ವಯಂ ಚಾಲಿತ ಸಮೂಹ ಹಾಲು ಕರೆಯುವ ಯಂತ್ರ ಘಟಕದ ಯೂನಿಟ್ ಧರ 2.5 ಲಕ್ಷ ಘಟಕವನ್ನು ಒಕ್ಕೂಟದಿಂದ ಶೇ .100 % ರಿಯಾಯತಿ ಧರದಲ್ಲಿ ಸಂಘಗಳಿಗೆ ಸರಬರಾಜು ಮಾಡಿಸಿ , ಮಿಲ್ಕಿಂಗ್ ಕಟ್ಟಡ ನಿರ್ಮಾಣಕ್ಕಾಗಿ 50,000 / – […]