
ಕುಂದಾಪುರ: ಭಾಗ್ಯವಂತ ರೋಜರಿ ಮಾತಾ ಚರ್ಚಿನಲ್ಲಿ 25-8-2024 ರಂದು ಯುವ ಯುವತಿ ಮತ್ತು ತಂದೆ ತಾಯಂದರಿಗೆ ಕೌಟಂಬಿಕ ಜೀವನದ ತಯಾರಿಗಾಗಿ ಶಿಬಿರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಧರ್ಮ ಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕ ಲೆಸ್ಲಿ ಆರೋಜಾ ಇವರು ಶಿಬಿರವನ್ನು ನಡೆಸಿಕೊಟ್ಟರು.ಯುವಕ – ಯುವತಿಯರು ತಮ್ಮ ಜೀವನ ಕಟ್ಟುಕೊಳ್ಳುವಾಗ, ತಮ್ಮ ಜೀವನ ಸಂಗಾತಿಯನ್ನು ಆರಿಸುವಾಗ ಸರಿಯಾದ ಆಯ್ಕೆ ಮಾಡಿಕೊಳ್ಳಬೇಕು. ದಾಂಪತ್ಯ ಜೀವನದಲ್ಲಿ ಸುಧಾರಿಸುವಿಕೆಯನ್ನು ಅಳವಡಿಸಿಕೊಂಡು ಜೀವನವನ್ನು ನೆಡಸಬೇಕು. ಹೆತ್ತವರು ಅವರ ಮಧ್ಯೆ ಬರಬಾರದು. ಅವರಿಗೆ ಅವರ ಜೀವನ […]

ಕುಂದಾಪುರ,ಅ.15: ಕುಂದಾಪುರ ಚರ್ಚಿನಲ್ಲಿ ಭಾಗ್ಯವಂತೆ ಮೇರಿ ಮಾತೆಯ ಸ್ವರ್ಗಾರೋಹಣದ ಹಬ್ಬವನ್ನು ಸಡಗರ ಮತ್ತು ಭಕ್ತಿಯಿಂದ ಆಚರಿಸಲಾಯಿತು.ದೇವರ ಪುತ್ರ, ಪವಿತ್ರ ಆತ್ಮನ ಶಕ್ತಿಯಿಂದ ಮನುಜನಾಗಿ ಮೇರಿ ಮಾತೆಯ ಗರ್ಭದಲ್ಲಿ ಜನಿಸಿದ ಮಹಾಮಾತೆಯನ್ನು ದೇವರು ಜೀವಂತವಾಗಿ ಸ್ವರ್ಗಕ್ಕೆ ಕರೆದುಕೊಂಡ ಹಬ್ಬ ಇದಾಗಿದೆ. ಇದೇ ದಿವಸ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ ಲಭಿಸಿದ್ದು, ನಮ್ಮ ಭಾಗ್ಯವಾಗಿದೆ. ಮೇರಿ ಮಾತೆ ದೇವರ ವಾಕ್ಯವನ್ನು ಪಾಲಿಸಲು ತ್ವರಿತ ರೀತಿಯಲ್ಲಿ ಕಾರ್ಯಚರಿಸಿದಳು, ಮೇರಿ ಮಾತೆಯ ನಂಬಿಕೆ ತುಂಬ ಮೇಲ್ಪಟ್ಟಿದಾಗಿತ್ತು, ಹಾಗೆಯೇ ಮೇರಿ ಮಾತೆ ದೇವರ ವಾಕ್ಯವನ್ನು […]

ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಅ.15 ರಂದು ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ, 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕುಂದಾಪುರ ಚರ್ಚಿನ ಅ| ವಂ| ಪಾವ್ಲ್ ರೇಗೊ ಕೇಡೆಟಗಳಿಂದ ಗೌರವ ಸ್ವೀಕರಿಸಿ ಧ್ವಜಾರೋಹಣ ಗೈದು “ನಮ್ಮ ಹಿರಿಯರು ಮಾಡಿದತ್ಯಾಗ ಸಾಹಸಗಳ ಬಲಿದಾನದಿಂದ ಇವತ್ತು ನಾವು ಸ್ವಾತಂತ್ರ್ಯದ ಫಲವನ್ನು ಅನುಭವಿಸುತ್ತಿದ್ದೇವೆ. ಅವರತ್ಯಾಗ ಬಲಿದಾನಕ್ಕೆ ನಾವು ಗೌರವ ನೀಡಬೇಕು’ ಎಂದುಅವರು ಶುಭಕೋರಿದರು. ಸ್ವಾತಂತ್ರದ ಬಗ್ಗೆ ಬಾಲಕಿ ವೇನಿಶಾ ಡಿಸೋಜಾ ಸ್ವಾಂತ್ರ್ಯದ ಬಗ್ಗೆ […]

ಕುಂದಾಪುರ, ಅ.5,: ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನಲ್ಲಿ ಅ.4 ರಂದು ಚರ್ಚಿನ ಕುಟುಂಬ ಆಯೋಗದಿಂದ ಭಾನುವಾರ ವಿವಾಹಿತ ದಂಪತಿಗಳ ದಿನಾಚರಣೆಯನ್ನು ಆಚರಿಸಲಾಯಿತು. ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಪವಿತ್ರ ಬಲಿದಾನವನ್ನು ಅರ್ಪಿಸಿ ವಿವಾಹಿತ ದಂಪತಿಗಳು ಹೇಗೆ ಜೀವಿಸಬೇಕು, ಅವರ ಕರ್ತವ್ಯಗಳನ್ನು ಎನೆಂಬುದನ್ನು ತಿಳಿಸಿ ಸಂದೇಶ ನೀಡಿ ಶುಭ ಹಾರೈಸಿದರು.ಪವಿತ್ರ ಬಲಿದಾನದ ನಂತರ ನಡುವೆ ಉಡುಪಿ ಧರ್ಮಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕರದಾರ ಲೆಸ್ಲಿ ಆರೋಜಾ, ವಿವಾಹಿತ ದಂಪತಿಗಳ ಜೀವನದ ಮೇಲೆ ಬೆಳಕು ಚೆಲ್ಲಿದರು. ಸುಮಾರು 125 ವಿವಾಹಿತ […]

ಕುಂದಾಪುರ, ಜು.16: ಕುಂದಾಪುರ ಹೋಲಿ ರೋಜರಿ ಮಾತಾ ಚರ್ಚಿನಲ್ಲಿ ಸ್ಥಳಿಯ ಸಂತ ಜೋಸೆಫ್ ಕಾನ್ವೆಂಟಿನ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಧರ್ಮ ಭಗಿನಿಯರು, ತಮ್ಮ ಪಾಲಕಿ ಕಾರ್ಮೆಲ್ ಮಾತೆಯ ಹಬ್ಬವನ್ನು ಜುಲಾಯ್ 14 ರಂದು ಆಚರಿಸಿದರು. ಹಬ್ಬದ ಬಲಿದಾನವನ್ನು ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಫಾ| ಪಾವ್ಲ್ ರೇಗೊ ಇವರ ನೇತ್ರತ್ವದಲ್ಲಿ, ಕುಂದಾಪುರದವರೇ ಆದ ವಂ| ಫಾ| ಮನೋಜ್ ಬ್ರಗಾಂಜ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ ಕಾರ್ಮೆಲ್ ಮಾತೆಯ ಮಹತ್ವವನ್ನು ವಿವರಿಸಿ “ದೇವರ ಇಚ್ಚೆ ತಿಳಿಯಲು ಮತ್ತು […]

ಕುಂದಾಪುರ,ಜು.15; ಜನನುಡಿ ಸುದ್ದಿ ಸಂಸ್ಥೆ ಆಶ್ರಯದಲ್ಲಿ ನಡೆದ 23-24 ರ ಮುದ್ದು ಯೇಸು ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣ ಕಾರ್ಯಕ್ರಮವನ್ನು ಎರಡು ಕಡೆಗಳಲ್ಲಿ ಮಾಡಲಾಯಿತು. ಮೊದಲು ಜು,11 ರಂದು ಕಟ್ಕೆರೆ ಬಾಲ ಯೇಸು ಆಶ್ರಮದ ಪ್ರಾರ್ಥನ ಮಂದಿರದಲ್ಲಿ ಮತ್ತು ಜು. 14 ರಂದು ರೋಜರಿ ಚರ್ಚ್ ಸಭಾಭವನದಲ್ಲಿ ನಡೆಯಿತು.ಕಟ್ಕೆರೆ ಬಾಲ ಯೇಸು ಆಶ್ರಮದ ಪ್ರಾರ್ಥನ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶ್ರಮದ ಮುಖ್ಯಸ್ಥರಾದ ವಂ|ಧರ್ಮಗುರು ಪ್ರವೀಣ್ ಪಿಂಟೊ ಮತ್ತು ವಂ|ಧರ್ಮಗುರು ಜೊಸ್ವಿ ಸಿದ್ದಕಟ್ಟೆ ಬಹುಮಾನ ವಿತರಣೆಯನ್ನು ಮಾಡಿದರು.ಕುಂದಾಪುರ ರೋಜರಿ […]

ಕುಂದಾಪುರ, ಜು.8: ಕಥೊಲಿಕ್ ಸಭಾ ಕುಂದಾಪುರ ಘಟಕದ ವತಿಯಿಂದ, ಕುಂದಾಪುರ ಚರ್ಚಿನ ಆರೋಗ್ಯ ಆಯೋಗ ಮತ್ತು ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಅನಡೆಯಿತು.ಹೋಲಿ ರೋಸರಿ ಚರ್ಚ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಕಾರ್ಯಕ್ರವನ್ನು ಉದ್ಘಾಟಿಸಿ “ರಕ್ತದಾನಕಿಂತ ಶ್ರೇಷ್ಠ ದಾನವಿಲ್ಲ, ಒಬ್ಬರು ರಕ್ತದಾನ ನೀಡಿದರೆ, 3 ಜೀವಗಳನ್ನು ಉಳಿಸಬಹುದು, ರಕ್ತದಾನ ಜೀವ ಉಳಿಸುವ ಮಹತ್ಕಾರ್ಯವಾಗಿದೆ’ ಎಂದು ತಮ್ಮ ಸಂದೇಶದಲ್ಲಿ ನುಡಿದು […]

ಕುಂದಾಪುರ, ಜು.7: ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಪರಿಸರ ದಿನಾಚರಣೆ ಮತ್ತು ವನಮಹತ್ಸೋವವನ್ನು ಜು.7 ರಂದು ಆಚರಿಸಲಾಯಿತು, ಭಾನುವಾರ ಬೆಳಗ್ಗೆ ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯ ಧರ್ಮಗುರು ಅ|ವಂ|ಪಾವ್ಲ್ ರೇಗೊ ಇಗರ್ಜಿಯಲ್ಲಿ ಬಲಿದಾನ ಅರ್ಪಿಸಿ ಪರಿಸರದ ಉಳಿವಿಗಾಗಿ ಸಂದೇಶ ನೀಡುತ್ತಾ ‘ಗೀಡ ನೆಟ್ಟು ಪೋಷಿಸಿರಿ, ಕೇವಲ ನಡುವ ಕಾಟಾಚಾರ ಬೇಡ, ಹೂವುವಿನ ಗೀಡ, ಫಲ ನೀಡುವವ ಗೀಡಗಳನ್ನು ನಡಿರಿ, ಅದರಿಂದ ಸಿಗುವ ಫಲ, ಪಕ್ಷಿಗಳಾದರೂ ತಿನ್ನಲಿ, ಪ್ರಾಣಿ ಪಕ್ಷಿಗಳಿಗೂ ಆಹಾರ ಅಗತ್ಯವಿದೆಯೆಂದು ತೀಳಿಯೋಣ, ಅವರು ಪ್ರಕøತಿ […]

ಕುಂದಾಪುರ, ಜೂ 23: ಕುಂದಾಪುರ ಹೋಲಿ ರೋಜರಿ ಚರ್ಚಿನ, ಕಥೊಲಿಕ್ ಸಭಾ ಘಟಕ ಮತ್ತು ಶ್ರೀಸಾಮಾನ್ಯರ ಆಯೋಗದಿಂದ ಶ್ರೀಸಾಮನ್ಯರ ದಿನವನ್ನು ಆಚರಿಸಲಾಯಿತು. ಮೊದಲಿಗೆ ಅ|ವಂ| ಪಾವ್ಲ್ ರೇಗೊ ನೇತ್ರತ್ವದಲ್ಲಿ ಚರ್ಚಿನಲ್ಲಿ ಕ್ರತ್ಞತಾ ಬಲಿದಾನವನ್ನು ಅರ್ಪಿಅಸಾಲಾಯಿತು.ನಂತರ ನೆಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ| ಪಾವ್ಲ್ ರೇಗೊ ಇವರು ಭಾಗವಹಿಸಿ ಕ್ರೈಸ್ತ ಸಮಾಜದಲ್ಲಿ ಪತ್ರಕರ್ತರಾಗಿ ಸೇವೆ ನೀಡುತ್ತಿರುವ ಹಾಗೇಯೆ ಕೊಂಕಣಿ ಮತ್ತು ಕನ್ನಡದಲ್ಲಿ ಸಾಹಿತ್ಯ, ನಾಟಕಗಳನ್ನು ರಚಿಸಿ ಹೆಸರುವಾಸಿಯಾದ ಬರ್ನಾಡ್ ಡಿಕೋಸ್ತಾ,ಕುಂದಾಪುರ. ಮತ್ತು ಕೊಂಕಣಿಯ […]