
ಕುಂದಾಪುರ: ಗಾಯನ ಮಂಡಳಿಗೆ ತರಬೇತಿ ಶಿಬಿರ ಕುಂದಾಪುರ, ಮೆ. 20: ಕುಂದಾಪುರ ರೋಜರಿ ಚರ್ಚಿನ ಗಾಯನ ಮಂಡಳಿಗೆ ಮೇ 18 ರಂದು ಚರ್ಚ್ ಸಭಾಭವನದಲ್ಲಿ ತರಬೇತಿ ಶಿಬಿರ ನೆಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಸಂತ ಜೋಸೆಫ್ ಸೆಮಿನರಿಯ ಪ್ರಾಧ್ಯಾಪಕ ವಂ|ಧರ್ಮಗುರು ಬೊನಿಫಾಸ್ ಪಿಂಟೊ ಆಗಮಿಸಿ ‘ದೇವಾಲಯದಲ್ಲಿ ಪವಿತ್ರ ಬಲಿದಾನ ಏರ್ಪಡಿಸುವಾಗ ಭಕ್ತಿಯ ವಾತವರಣ ಇರಬೇಕು, ಹಾಗಾಗಿ ಅಬ್ಬರದ ಸಂಗೀತಕ್ಕೆ ಕಡಿವಾಣ ಹಾಕಬೇಕು, ಪವಿತ್ರ ಬಲಿದಾನ ಅರ್ಪಿಸುವ ವೇಳೆ, ಗಾಯನ ಮಂಡಳಿಯಿಂದ ಉತ್ತಮ ಸಂಗೀತದ ಜೊತೆ ಉತ್ತಮ ಗಾಯನ […]

ಕುಂದಾಪುರ್ :ದೇವ್ ಆಪವ್ಣ್ಯಾಚೊ ಆಯ್ತಾರ್ ಕುಂದಾಪುರ್, ಮೆ.12: ದೇವ್ ಆಪವ್ಣಿ ಆಮ್ಕಾಂ ಗರ್ಜ್ ಆಸಾತ್, ಆಯ್ಚ್ಯಾ ಕಾಳಾರ್ ಯಾಜಕ್ ಜಾಂವ್ಚೆ ಆಸಕ್ತ್ ಉಣೆ ಜಾವ್ನ್ ಆಯ್ಲ್ಯಾ. ಪುಣ್ ಮುಕಾರ್ ಆಮ್ಚ್ಯಾ ಸಮಾಜೆಂತ್ ರೆಸ್ಪೆರ್ ಕರ್ಚೆಂ, ಮರ್ಣಾ ಸಂಸ್ಕಾರ್ ಕರ್ಚೆಂ, ಪವಿತ್ರ್ ಬಲಿದಾನ್ ಭೆಟಂವ್ಕ್ ಕೋಣ್ ಮ್ಹಳೆಂ ಪರಿಸ್ಥಿತಿ ಉದ್ಯೆಲಾ, ಆಮ್ಚ್ಯಾ ತರ್ನಾಟ್ಯಾನಿಂ ಯಾಜಕ್ ಜಾಂವ್ಚಿ ಆಶಾ ದಾಖಯ್ಜೆ, ಯಾಜಕ್ ಜಾಲ್ಯಾರ್ ತಾಕಾ ಶೆಂಬೊರ್ ವಾಂಟ್ಯಾನಿಂ ಫಳ್ ಮೆಳ್ತಾ, ಗ್ರೇಸ್ತ್ ಕಾಯೆನ್ ನ್ಹಯ್ ಬದ್ಲಾಕ್ ಶಾಂತಿ ಸಮಧಾನ್ […]

Photo’s: St.Antony studio ಕುಂದಾಪುರದಲ್ಲಿ ಮಕ್ಕಳಿಗೆ ಪರಮ ಪ್ರಸಾದ ದಿವ್ಯ ಸಂಸ್ಕಾರದ ದೀಕ್ಷೆ ಕುಂದಾಪುರ, ಮೆ.6: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಒಂದು ತಿಂಗಳ ಕಾಲ ಕೈಸ್ತ ಮಕ್ಕಳಿಗೆ ಶಾಸ್ತ್ರ, ಸಂಸ್ಕಾರಗಳ ತಿಳುವಳಿಕೆ, ಭೋದನೆ, ನಿತ್ಯ ಪ್ರಾರ್ಥನೆಗಳ ಬಾಯಿಪಾಠ, ಪರಮ ಪ್ರಸಾದದ ಮಹತ್ವ ತಿಳುವಳಿಕೆಯ ಶಿಕ್ಷಣ ನೀಡಿ ಭಾನುವಾರದಂದು ಆಯ್ದ 9 ಮಕ್ಕಳಿಗೆ ಪರಮ ಪ್ರಸಾದ ದಿವ್ಯ ಸಂಸ್ಕಾರದ ದೀಕ್ಷೆಯನ್ನು ಚರ್ಚಿನ ಪ್ರಧಾನ ಫಾ|ಸ್ಟ್ಯಾನಿ ತಾವ್ರೊ ನೀಡಿದರು. ಈ ಮೂಲಕ ಈ ಮಕ್ಕಳು ಇನ್ನು ಮುಂದೆ ಯೇಸು […]

ಎಸ್.ಎಸ್.ಎಲ್.ಸಿ – ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲೆಗೆ ಶೇಕಡ ನೂರು ಫಲಿತಾಂಶ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2019 ನೇ ಸಾಲಿನಲ್ಲಿ ನೆಡೆಸಿದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲೆಯು ಶೇಕಡ ನೂರು ಫಲಿತಾಂಶ ಪಡೆದು ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ 29 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತಿರ್ಣರಾಗಿದ್ದು, ಪುಸ್ಪ ಎಂಬ ವಿದ್ಯಾರ್ಥಿನಿ 582 ಅಂಕಗಳನ್ನು ಪಡೆದು, 92.12 ಶೇಕಡ ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. 4 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, […]

ಕುಂದಾಪುರ ಕಥೊಲಿಕ್ ಸಭಾ ದಿನಾಚರಣೆ- ಖಾದ್ಯ ಹಬ್ಬ ಕುಂದಾಪುರ, ಎ. 28: ಕುಂದಾಪುರ ಕಥೊಲಿಕ್ ಸಭಾ ಘಟಕವು ತನ್ನ ವರ್ಷ ದಿನಾಚರಣೆಯನ್ನು ಭಾನುವಾರ 27 ರಂದು ಆಚರಿಸಿತು. ಸಂಜೆ ಎಳು ಗಂಟೆಗೆ ಚರ್ಚಿನ ಪ್ರಧಾನ ಧರ್ಮಗುರು ಅತಿ ವಂ|ಫಾ|ಸ್ಟ್ಯಾನಿ ತಾವ್ರೊ ಇವರ ನೇತ್ರತ್ವದಲ್ಲಿ, ಫಾ|ರೋಯ್ ಲೋಬೊ ಮತ್ತು ಪ್ರಾಂಶುಪಾಲ ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಇವರು ಉಪಕಾರ ಸ್ಮರಣೆಯ ಪವಿತ್ರ ಬಲಿದಾನವನ್ನು ಅರ್ಪಿಸಿದರು. ನಂತರ ಸಂಘಟನೇಯ ಸದಸ್ಯರೆ ತಯಾರಿಸಿದ ಕೋಳಿ ಖಾದ್ಯ, ಬಿರಿಯಾನಿ, ಪೆÇರ್ಕ್ ಖಾದ್ಯ, ಇಡ್ಲಿ ಮುಂತಾದ […]

ಕುಂದಾಪುರ ದೈವಿಕ ಕರುಣೆಯ ಹಬ್ಬ- ಕಠೋರ ಪಾಪಿಗೂ ಯೇಸುವಿನ ದೈವಿಕ ಕರುಣೆ ಪ್ರಾಪ್ತವಾಗುತ್ತದೆ ಕುಂದಾಪುರ, ಎ.28: ‘ಯೇಸು ಕ್ರಿಸ್ತರು ತನ್ನ ಹ್ರದಯದಿಂದ ಕೆಂಪು ಮತ್ತು ಬಿಳಿ ಕಿರಣಗಳನ್ನು ಹರಿಸುತ್ತಾ ಭಾಗ್ಯವಂತೆ ಸಿಸ್ಟರ್ ಫಾವೊಸ್ತಿನಳಿಗೆ ದರ್ಶನ ನೀಡಿ, ಈ ಕೆಂಪು ಕಿರಣ ಮನುಷ್ಯನ ಆತ್ಮಕ್ಕೆ ಬಲವನ್ನು ನೀಡುತ್ತದೆ ಮತ್ತು ಬಿಳಿ ಕಿರಣ ನನ್ನ ದೈವಿಕ ಕರುಣೆಯನ್ನು ಪ್ರಾಪ್ತಿ ಮಾಡುತ್ತದೆ, ಹಾಗಾಗಿ ನೀನು ಇಂತಹದೆ ಒಂದು ಚಿತ್ರವನ್ನು ರಚಿಸಿ ಇದನ್ನು ಜಗತ್ತಿಗೆ ತಿಳಿಯಪಡಿಸು, ನಾನು ಅತ್ಯಂತ ದಯಾಳು, ಎಂತಹ ಕಠೋರ […]

ಕುಂದಾಪುರದಲ್ಲಿ ಪಾಸ್ಖ ಹಬ್ಬದ ಸಂಭ್ರಮ – ಕ್ರಿಸ್ತರ ಪುನರುತ್ಥಾನ ಮರಣವನ್ನು ಸೋಲಿಸಿ ಜಯಿಸಿದ ಹಬ್ಬ ಫಾ|ರೋಯ್ ಲೋಬೊ ಕುಂದಾಪುರ,ಎ.21: ಸುಮಾರು 449 ವರ್ಷಗಳ ಇತಿಹಾಸ ಇರುವ ಉಡುಪಿ ಧರ್ಮ ಪ್ರಾಂತ್ಯದ ಅತೀ ಪುರಾತನ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸು ಕ್ರಿಸ್ತರು ಶುಭ ಶುಕ್ರವಾರದಂದು ಶಿಲುಭೆ ಮರಣ ಹೊಂದಿ ವiೂರನೇ ದಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ, ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸಂಜೆಯ ಕತ್ತಲಿನಲ್ಲಿ ಚರ್ಚ್ ಮೈದಾನದಲ್ಲಿ ಪಾಸ್ಖದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, […]

ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಶುಭ ಶುಕ್ರವಾರ – ಅಡಾಮ್ ಪಾಪದ ಆರಂಭ ಆತನ ಸಮಾಧಿ ಸ್ಥಳ ಗೊಲ್ಗೊಥಾದಲ್ಲಿ ಪಾಪ ನಿವಾರಣೆಗಾಗಿ ಯೇಸುವಿನ ಬಲಿದಾನ ಕುಂದಾಪುರ ಮಾ.31: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕಶ್ಟ ಮರಣದ ಶುಕ್ರವಾರವನ್ನು ಭಕ್ತಿ ಶ್ರದ್ದೆಯಿಂದ ಆಚರಿಸಲಾಯಿತು. ಬೆಳಗ್ಗೆ ಆಯ್ದ ಜನರ ಮುಂದಾಳತ್ವದಲ್ಲಿ ಮೈದಾನದಲ್ಲಿ ಭಕ್ತರೊಡನೆ ಶಿಲುಭೆ ಮರಣದ ಯಾತ್ರ ವಿಧಿಯನ್ನು ನೆಡೆಸಲಾಯಿತಾದರೆ ಸಂಜೆ ಇಗರ್ಜಿಯಲ್ಲಿ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ಪ್ರಥಮ ಭಾಗದಲ್ಲಿ […]

ಕುಂದಾಪುರ ರೋಜರಿ ಮಾತೆ ಇಗರ್ಜಿಯಲ್ಲಿ ಶುಭ ಶುಕ್ರವಾರದಂದು ಶಿಲುಭೆ ಯಾತ್ರೆ ಕುಂದಾಪುರ, ಎ.19: ಕುಂದಾಪುರ ರೋಜರಿ ಮಾತೆ ಇಗರ್ಜಿಯಲ್ಲಿ ಶುಭ ಶುಕ್ರಾವಾರದ ಪ್ರಯುಕ್ತ ನ್ಯಾಯ ನೀತಿ ರೋಗಿಗಳಿಗೆ ಗುಣಪಡಿಸುವ ಮರಣ ಹೊಂದಿದವರನ್ನು ಜೀವಂತ ಮಾಡಿದ್ದ ಯೇಸು ಕ್ರಿಸ್ತರನ್ನು ಯಹೂದಿಗಳ ಯಾಜಕರು ಮತ್ಸರದಿಂದ ಯೇಸುವಿನ ಮೇಲೆ ಆರೋಪಗಳನ್ನು ಹೋರಿಸಿ ಮರಣ ದಂಡನೆ ನೀಡುವಂತ್ತೆ ಮಾಡಿ, ಅದಕ್ಕು ಮುನ್ನು ಅವರಿಗೆ ಹೊಡೆದು ಬಡಿದು ಅವರ ಹೆಗಲಿಗೆ ಶಿಲುಭೆ ನೀಡಿ ಶಿಲುಭೆ ಯಾತ್ರೆ ಮಾಡಿಸಿದರು. ಈ ಶಿಲುಭೆ ಯಾತ್ರೆಯನ್ನು ಸ್ಮರಿಸಿ ಬೆಳಿಗ್ಗೆ […]