
ವರದಿ: ಶಬ್ಬೀರ್ ಅಹ್ಮದ್ ಶ್ರೀನಿವಾಸಪುರದಲ್ಲಿ ಗುರುವಾರ ಏರ್ಪಡಿಸಿದ್ದ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ಕಾಂಗ್ರೆಸ್ ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಂದ್ರಾರೆಡ್ಡಿ ಉದ್ಘಾಟಿಸಿದರು. ಶ್ರೀನಿವಾಸಪುರ: ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಮೈತ್ರಿ ಅಭ್ಯರ್ಥಿಗೆ ಮತ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಂದ್ರಾರೆಡ್ಡಿ ಹೇಳಿದರು. ಮೈತ್ರಿ ಪಕ್ಷಗಳ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಒತ್ತು ನೀಡಿದ ಪರಿಣಾಮವಾಗಿ […]

ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ವಿಧಿ ವಶ: ಊಟ ಮಾಡುತ್ತಿರುವಾಗ ಹ್ರದಯಘಾತ ಸಮ್ಮಿಶ್ರ ಸರಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ಕಾಂಗ್ರೆಸನ ಸಿ.ಎಸ್. ಶಿವಳ್ಳಿ ಹ್ರದಯಘಾತದಿಂದ ವಿಧಿ ವಶವಾಗಿದ್ದಾರೆ. ಅವರು ಮಧ್ಯಾನ್ಞ ಊಟ ಮಾಡುತ್ತಿರುವಾಗ ಹ್ರದಯಾಘಾತವಾಗಿದ್ದು, ತಕ್ಷಣ ಹುಬ್ಬಳಿಯ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶವಾಗಿದ್ದಾರೆ. ಅವರಿಗೆ ಕೇವಲ 57 ವರ್ಷ ಪ್ರಾಯವಾಗಿತ್ತು. ಅವರು ಕುಂದಕೋಳ ಕ್ಷೇತ್ರದಿಂದ 3 ಭಾರಿ ಆಯ್ಕೆಯಾಗಿದ್ದರು. 1999 ರಲ್ಲಿ ಸ್ವಂತತ್ರವಾಗಿ ಸ್ಪರ್ಧೆ ಮಾಡಿ ಜಯಿಸಿದ್ದರು, ನಂತರ ಅವರು 2 […]

ವರದಿ: ಎಸ್.ಡಿ.ಪಿ.ಐ.ಬೆಂಗಳೂರು ಎಸ್ಡಿಪಿಐ ಸಂಘಟನೆ: ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಹೋರಾಡಲಿದೆ ಬೆಂಗಳೂರು, ಮಾ.5: ರಾಜ್ಯದಲ್ಲಿ ಒತ್ತುವರಿಯಾಗಿರುವ ವಕ್ಫ್ ಆಸ್ತಿಗಳ ಮರು ವಶಪಡಿಸಲು ಎಸ್ಡಿಪಿಐ ನಿರಂತರ ಹೋರಾಟ ಮಾಡಲಿದೆ. ಕೆಲವು ರಾಜಕೀಯ ನಾಯಕರ ಮೇಲೆ ವಕ್ಫ್ ಆಸ್ತಿ ಒತ್ತುವರಿ-ಮಾರಾಟದ ಆರೋಪವಿದೆ. ಮುಸ್ಲಿಮ್ ಸಮುದಾಯದಲ್ಲಿ ವಕ್ಫ್ ಆಸ್ತಿ ಸಂರಕ್ಷಣೆ ಮತ್ತು ದಾಖಲಾತಿ ಕ್ರಮಬದ್ಧಗೊಳಿಸುವ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ಡಿಪಿಐ ಪಕ್ಷದ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದರು. ಅವರು ಪಕ್ಷದ ವತಿಯಿಂದ ನಗರದ […]

ಮಾ. 8: ಪ್ರಕಾಶ್ ರೈ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕಾರವಾಗಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆಯೆಂದು ತಿಳಿದು ಬಂದಿದೆ. ಈ ಮಾನಹಾನಿಕರ ಪ್ರಕರಣದಲ್ಲಿ ಪ್ರತಾಪ್ ಸಿಂಹ ಅವರಿಗೆ ನ್ಯಾಯಲಯ ಜಾಮೀನುರಹಿತ ವಾರೆಂಟ್ ಜಾರಿಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣದ ಕುರಿತು ವಿಚಾರಣೆ ನಡೆಸಲು ಪ್ರತಾಪ್ ಸಿಂಹ ಅವರನ್ನು […]

ಪಿಯು ಪರೀಕ್ಷೆ ಇಂದಿನಿಂದ ಆರಂಭಗೊಂಡಿದೆ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿವೆ. ಸರಕಾರ, ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸಕಲ ಕ್ರಮಗಳನ್ನು ತೆಗೆದುಕೊಂಡಿದೆ. ಇವತ್ತಿನಿಂದ ಆರಂಭವಾಗುವ ಪರೀಕ್ಷೆಗಳು ಮಾರ್ಚ್ 18ರವರೆಗೆ ನಡೆಯಲಿವೆ. ಈ ಬಾರಿ ಒಟ್ಟು 6,73,606 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇವರಲ್ಲಿ 3,38,868 ಮಂದಿ ಬಾಲಕರು ಹಾಗೂ 3,34,738 ಬಾಲಕಿಯರು ಇದ್ದಾರೆ. 1013 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ. ವಿದ್ಯಾರ್ಥಿಗಳು ಉಚಿತ ಬಸ್ ವ್ಯವಸ್ಥೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕೆಎಸ್ಆರ್ಟಿಸಿ […]

ಬೆಂಗಳೂರು ಮತ್ತು ಕರಾವಳಿ ಭಾಗದಲ್ಲಿ ಅಕಾಲಿಕ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಸಹಿತ ಕರಾವಳಿ ಭಾಗದ ಕೆಲವೆಡೆಯಲ್ಲಿ ಮುಂದಿನ 24 ಗಂಟೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಬೆಂಗಳೂರಿನ ಜಯನಗರ, ಬನಶಂಕರಿ, ಉತ್ತರಹಳ್ಳಿ, ಬನಶಂಖರಿ, ಉತ್ತರಹಳ್ಳಿ ಇತರ ಕಡೆಗಳಲ್ಲಿ ಮಳೆಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಇದೇ ರೀತಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮ್ಮುನ್ನಚೆರಿಕೆಯನ್ನು ನೀಡಿದೆಯೆಂದು ತಿಳಿದು ಬಂದಿದೆ

ಆಪರೇಷನ್ ಕಮಲಕ್ಕೆ ಮೋದಿಯ ಕುಮ್ಮಕ್ಕು ಇದೆ : ಜಿಟಿ ದೇವೇಗೌಡ ಫೆ:7: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ರಚಿಸಲು ಪ್ರಯತ್ನ ಮಾಡಿ, ಬಹುಮತ ಇಲ್ಲದೇ ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉರುಳಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಚಿವ ಜಿ.ಟಿ. ದೇವೇಗೌಡ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿ ದೇವೇಗೌಡ ‘ಆಪರೇಷನ್ ಕಮಲ ಮೂಲಕ ಗದ್ದುಗೆ ಏರಲು ಯಡಿಯೂರಪ್ಪ ಸರ್ವ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕಾಗಿ ನಮ್ಮ ಶಾಸಕರಿಗೆ ಕೋಟಿ ಕೋಟಿ ರೂಪಾಯಿ ಆಫರ್ ಮಾಡುತ್ತಿದ್ದಾರೆ ಎಂದರು. ಬಿ,ಜೆ.ಪಿಯವರು […]

ಬೆಂಗಳೂರು ಎಚ್ಎಎಲ್ ಬಳಿ ಮಿರಾಜ್ 2000 ತರಬೇತಿ ಯುದ್ಧ ವಿಮಾನ ಸ್ಪೋಟ; ಇಬ್ಬರು ಪೈಲೆಟಗಳ ಸಜೀವ ದಹನ ಬೆಂಗಳೂರು: ನಗರದ ಎಚ್ಎಎಲ್ ಬಳಿ ಇಂದು ಬೆಳಿಗ್ಗೆ ಶುಕ್ರವಾರ ಯುದ್ದ ವಿಮನವಾದ ಮಿರಾಜ್ 2000 ತರಬೇತಿಯ ಸಮಯ ವಿಮಾಅನ ರನ್ ವೇಯಲ್ಲಿ ಟೇಕ್ ಆಪ್ ಆಗುವಾಗ ವಿಮಾನ ಸ್ಪೋಟಗೊಂಡು ನೆಲಕ್ಕೆ ಉರುಳಿ ವಿಮಾನದಲ್ಲಿದ್ದ ಇಬ್ಬರು ಪೈಲೆಟಗಳಾದ ಸ್ಕಾವರ್ಡನ್ ಲೀಡರ್ ಸಿದ್ಧಾರ್ಥ್ ನೇಗಿ ಮತ್ತು ಸ್ಕಾವರ್ಡನ್ ಲೀಡರ್ ಸಮೀರ್ ಅಬ್ರೊಲ್ ಸ್ಥಳದಲ್ಲಿ ಅಸುನೀಗಿದ್ದಾರೆಂದು ತಿಳಿದು ಬಂದಿದೆ. ಘಟನೆ ನಡೆದ ತಕ್ಷಣ […]

Report & photo: Elyas Muhammad Thumbe ಜನವರಿ 30 ಗಾಂಧೀಜಿಯ ಹುತಾತ್ಮ ದಿನವನ್ನು ದೇಶ ಮರೆಯಬಾರದು: ಎಸ್ಡಿಪಿಐ ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು 1948, ಜನವರಿ 30ರಂದು ಗುಂಡಿಕ್ಕಿ ಹತ್ಯೆಗೈಯ್ಯಲಾಯಿತು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಮುಂಚೂಣಿಯಲ್ಲಿದ್ದರು. ಅವರ ಸರ್ವ ಧರ್ಮ ಸಮಭಾವ, ಅಹಿಂಸಾವಾದ, ಸಾಮಾಜಿಕ ನ್ಯಾಯ ಮತ್ತು ಜಾತ್ಯಾತೀತತ ಸಿದ್ಧಾಂತದ ಬದ್ಧತೆ ಮೇಲೆ ದೇಶ ಕಟ್ಟುವ ಕನಸನ್ನು ಕಂಡಿದ್ದರು. ಆದರೆ ಸಂಘಪರಿವಾರದ ಕೋಮುವಾದಿ ನಾಥೂರಾಮ್ ಗೋಡ್ಸೆ ಗಾಂಧೀಜಿಯನ್ನು ಗುಂಡಿಕ್ಕಿ ಕೊಂದಿದ್ದನು. ಇದು ದೇಶದ ಪ್ರಥಮ […]