JANANUDI.COM NETWORK ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ಬಿಬಿಎಂಪಿ ಹಣಕ್ಕಾಗಿ ಬೆಡ್ ಬ್ಲಾಕಿಂಗ್ ದಂಧೆಯ ವಿರುದ್ಧ ಲೋಕಾಯುಕ್ತರು ಅಸಮಧಾನ ಗ್ಗೊಂಡಿದ್ದು ಅವರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಲೋಕಾಯುಕ್ತರು ಪೊಲೀಸರಿಗೆ ಆದೇಶ ನೀಡಿದ್ದಾರೆ.     ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಶಾಸರಕಾರ ಸತೀಶ್ ರೆಡ್ಡಿ, ಉದಯ ಗರುಡಾಚಾರಾ ಹಾಗೂ ರವಿ ಸುಬ್ರಹ್ಮಣ್ಯ ಮಂಗಳವಾರ ವಿವಿಧ ವಾರ್ ರೂಂಗೆ ಭೇಟಿ ನೀಡಿ ಹಾಸಿಗೆಯನ್ನು ಹಣಕ್ಕಾಗಿ ಬ್ಲಾಕ್ ಮಾಡಿಡುವ […]

Read More

JANANUDI.COM NETWORK ಕುಂದಾಪುರ,ಮೇ. 6 : ಕರ್ನಾಟಕ ವೈಚಾರಿಕ ಸಾಹಿತ್ಯದ ಮೇರುಕೊಂಡಿಯೊಂದು ಇಂದು ಕಳಚಿಕೊಂಡಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ವೈಚಾರಿಕ ಸಾಹಿತಿ ಉಡುಪಿಯ ಡಾ.ಜಿ.ಭಾಸ್ಕರ್ ಮಯ್ಯ ನಿಧನರಾಗಿದ್ದಾರೆ    ಅವರಿಗೆ 70 ವರ್ಷ ವಯಸ್ಸಾಗಿತ್ತು. ಅವರಿಗೆ ಕೊವೀಡ್ ಸೊಂಕು ತಗಲಿದ್ದರಿಂದ ಕಳೆದ 4 ದಿನಗಳಿಂದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ 4:30ರ ಸುಮಾರಿಗೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾ ರೆಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.      ಹಿಂದಿ ಸಾಹಿತ್ಯ ಅಧ್ಯಯನದಲ್ಲಿ ಮೇರು […]

Read More

JANANUDI.COM NETWORK ಕಾಂಗ್ರೆಸ್ ಪಕ್ಷದ ಕರೆಯಂತೆ, ಉಡುಪಿ ಜಿಲ್ಲಾ ಕೇಂದ್ರವು ಕೊರೋನಾ ಸಂಕಷ್ಟದಿಂದ ಬಳಲುತಿದ್ದ ಸರ್ವರಿಗೆ ಸಹಾಯ ಮಾಡಲು ಸಹಾಯವಾಣಿ ಸಮಿತಿ ರಚನೆ ಮಾಡಿವೆ. ಉಡುಪಿ ಜಿಲ್ಲಾ ಕೇಂದ್ರದ ಸಮಿತಿಯಲ್ಲಿ ಕುಂದಾಪುರದ ವಿಕಾಸ್ ಹೆಗ್ಡೆ, ಆಶಾಕರ್ವಾಲ್ಲೊ, ಕ್ರಷ್ಣ ಪೂಜಾರಿ ಮತ್ತು ರಮೇಶ ಶೆಟ್ಟಿವಕ್ವಾಡಿ ಇವರುಗಳು ಇದ್ದಾರೆ. ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಕೋರೋನಾ ಸಂಕಷ್ಟದಿಂದ ಬಳಲುತಿದ್ದ ಸರ್ವರಿಗೆ ನೇರವಾಗಲು “ಸಹಾಯ ವಾಣಿ” ಸಮಿತಿ ರಚಿಸಲಾಗಿದೆ. ಆ ಸಮಿತಿಯಲ್ಲಿ ಹಲವು ವಿಭಾಗಳನ್ನು ಮಾಡಲಾಗಿವೆ.ಸರಕಾರಿ ಆಸ್ಪತ್ರೆಯಲ್ಲಿ […]

Read More

JANANUDI.COM NETWORK ಬೆಂಗಳೂರು, ಮೇ. 05: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮೇ 6 ರಿಂದ ಎರಡು ದಿನ ಭಾರಿ ಮಳೆಯಾಗಲಿದ್ದು, ಹವಮಾನ ಇಲಾಖೆ ಯೆಲ್ಲ್ಲೊ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಭಾರಿ ಮಳೆಯಾಗಲಿದ್ದು, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗದಲ್ಲಿಯೂ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

Read More

JANANUDI.COM NETWORK ಹುಬ್ಬಳ್ಳಿ,ಮೇ 05: ಚಾಮರಾಜನಗರ ಹಾಗೂ ಕಲಬುರಗಿಯಲ್ಲಿ ಸಂಭವಿಸಿದ ಕೋವಿಡ್ ದುರಂತದ ಬಳಿಕ ಇಂತಹದ್ದೇ ಮತ್ತೊಂದು ದುರಂತ ಪ್ರಕರಣದ ಹುಬ್ಬಳ್ಳಿಯಲ್ಲಿ  ಆಕ್ಸಿಜನ್ ಕೊರತೆಯಿಂದಾಗಿ ಐವರು ಕೊರೋನಾ ಸೋಂಕಿತರು ಏಕಕಾಲಕ್ಕೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಹುಬ್ಬಳ್ಳಿಯ ಲೈಫ್’ಲೈನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸೇರಿದಂತೆ ಐವರು ಸೋಂಕಿತರು ಮೃತಪಟ್ಟಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.        ನಿನ್ನೆ ಸಂಜೆ ಲೈಫ್ ಲೈನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿಯೇ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು […]

Read More

JANANUDI.COM NETWORK ಬೆಂಗಳೂರು,ಮೇ.4: ಎಲ್ಲಾ ರೀತಿಯ ಪೊಳ್ಳು ಸುಳ್ಳು ಸುದ್ದಿ ಸುಳ್ಳು ಸಾಧನೆ ತೋರಿಸಿ ಜನರಿಗೆ ಮರುಳು ಮಾಡುವ  ರಾಜಕೀಯ ಮಾಡಿ  ಇದೀಗ ಕೋವಿಡ್ ಸೊಂಕಿನಿಂದ ಸತ್ತವರನ್ನು ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡುವಲ್ಲಿಯೂ ಒಂದೂ ಚೂರು ಮಾನವೀಯತೆ, ಕರುಣೆ ಇಲ್ಲದೆ, ಸ್ಮಶಾನದಲ್ಲಿಯೂ ರಾಜಕೀಯ ಮಾಡಲು ರಾಜಕೀಯ ನಾಯಕರು ಹೊರಟು,  ತಮ್ಮ ಬಿಜೆಪಿಯ ನರೇಂದ್ರ ಮೋದಿ, ಯುಡಿರಪ್ಪ, ಎಸ್.ಅರ್.ಅಶೋಕ್, ಸ್ಥಳೀಯ ನಾಯಕರಾದ ಎಸ್.ಮಲ್ಲಯ್ಯ, ಬಿ.ಮರಿಸ್ವಾಮಿ  ಮುಂತಾದವರ ಚಿತ್ರಗಳಿರುವ ದೊಡ್ಡ ಬ್ಯಾನರ್ ಹಾಕಿ ಅಣಕ ಮಾಡಿರುವುದು ಸಾರ್ವಜನಿಕರಿಂದ ಅಸಹ್ಯವಾಗಿ ಕಂಡು […]

Read More

JANANUDI.COM NETWORK ಬೆಂಗಳೂರು, ಮೇ.04: ಕೊರೋನಾದಿಂದ ಜನ ವಿಲ ವಿಲವೆಂದು ಸಾಯುತ್ತಿರುವಾಗಲೂ, ಆಸ್ಪತ್ರೆಗಳಲ್ಲಿ ಅಕ್ರಮವಾಗಿ ಬೆಡ್ ಬುಕ್ಕಿಂಗ್ ಮಾಡುತ್ತಿದ್ದ ಮಾಫಿಯಾಗಳ ಕುಕ್ರತ್ಯವನ್ನು ಬಿಜೆಪಿಯರದೇ ಆದ ಸಂಸದ ತೇಜಸ್ವಿ ಸೂರ್ಯ ಬಯಲಿಗೆಳೆದಿದ್ದಾರೆ. ಅವರು ಮೇ.04 ರಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಅವರುಅಕ್ರಮವಾಗಿ ಬಿಬಿಎಂಪಿ ಬೆಡ್ ಗಳು ಅಕ್ರಮವಾಗಿ ಬುಕ್ ಆಗುತ್ತಿರುವುದನ್ನು ಬಯಲಿಗೆಳೆದಿದ್ದು, ಇದರಲ್ಲಿ ಶಾಮೀಲಾಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ವಾರ್ ರೂಮ್ ಗಳಿಂದಲೇ ಈ ವರೆಗೂ ಪ್ರಭಾವಿಗಳಿಂದ 4,065 ಬೆಡ್ ಗಳನ್ನು ಬುಕ್ ಮಾಡಿದ್ದಾರೆ. […]

Read More

JANANUDI.COM NETWORK ಮೈಸೂರು:ಮೇ. ಕೊರೋನಾ ಮಹಾಮಾರಿ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು,ಜನರು ನರಳಿನರಳಿ ಸಾಯುತಿದ್ದಾರೆ, ಇದೀಗ ಮೈಸೂರು ಚಾಮರಾಜ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಅಸಹಯಕರ ಘಟ್ನೆನಡೆದಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಹಲವಾರು ಜೀವಗಳು ಲೆಕ್ಕೆ ಇಲ್ಲದಷ್ಟು ಬಲಿಯಾಗುತ್ತಿರುವಾಗ,  ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಘಟನೆ ನಡೆದಿದ್ದು, ಮೋರಿಯಲ್ಲಿ ಕೊರೊನಾ ಸೋಂಕಿತನ ಶವ ಪತ್ತೆಯಾಗಿದ್ದು ಅಘಾತಕಾರಿ ಪ್ರಕರಣವಾಗಿದೆ. ಜಿಲ್ಲಾಸ್ಪತ್ರೆ ಸಿಬ್ಬಂದಿಗಳ ಇಂತಹ ಬೇಜವಾಬ್ಧಾರಿ ಕಾರ್ಯಕ್ಕೆ ಜನರು ಹಿಡಿಶಾಪ ಹಾಕುತ್ತಾ ಇದ್ದಾರೆ.    ಕೋವಿಡ್  ಸೊಂಕಿನಿಂದ ಬಳಲುತ್ತಿದ್ದ ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಸುರೇಶ್ ಎಂಬುವವರನ್ನು […]

Read More

JANANUDI.COM NETWORK ಕಲಬುರಗಿ ,ಮೇ.4 : ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದಲ್ಲಿ ೨೪ ಜನರ ದುರ್ಮರಣದ ಬೆನ್ನಲ್ಲೇ ಇದೀಗ ಕಲಬುರಗಿಯಲ್ಲಿಯೂ ಇಂತಹದೇ ದುರಂತ ಸಂಭವಿಸಿದೆ. ಆಕ್ಸಿಜನ್ ಸಿಗದೆ ನಾಲ್ವರು ಕೊರೊನಾ ಸೋಂಕಿತರು ಸಾವನ್ನಪ್ಪಿರುವ ಭೀಕರ ಘಟನೆ ಕಲಬುರಗಿಯ ಅಫಜಲ್ ಪುರ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.         ಮುಂಜಾನೆ 4 ಗಂಟೆಗೆ ಆಕ್ಸಿಜನ್ ಕೊರತೆ ಎದುರಾಗಿದ್ದು. ಆದರೆ ಬೆಳಗ್ಗೆ 11 ಗಂಟೆ ಸಮೀಪಿಸುತ್ತಾ ಬಂದಿದ್ದರೂ ಕೂಡ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆಯಾಗಿಲ್ಲ. ಇದರಿಂದಾಗೊ ರೋಗಿಗಳು ಆಕ್ಸಿಜನ್ ಸಿಗದೆ ಪರದಾಡುತ್ತಿದ್ದಾರೆ.     ಅಫಜಲ್ ಪುರ […]

Read More