
JANANUDI.COM NETWORK ಬೆಂಗಳೂರು,10: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಗೆ ವಯ್ಸ್ಕರಲ್ಲಿ ಹೆಚ್ಚು ಜನ ಸಾವನ್ನಪ್ಪದೆ, ಜನ ಸಾಮಾನ್ಯರಲ್ಲಿ ಆತಂಕ ಕಡಿಮೆಯಾದರೂ, ಇದೀಗ ಆತಂಕಕಾರಿ ಅಂಕಿ-ಅಂಶಗಳು ಬಹಿರಂಗವಾಗಿದೆ.ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯಲ್ಲಿ ಪುಟ್ಟ ಮಕ್ಕಳು ಹೆಚ್ಚು ಬಲಿಯಾಗಿದ್ದು ಬಹಿರಂಗವಾಗಿದ್ದು ಕಳೆದ 23 ದಿನದಲ್ಲಿ ಬರೋಬ್ಬರಿ 25 ಮಕ್ಕಳು ಕೋವಿಡ್ ಮೂರನೇ ಅಲೆಗೆ ಬಲಿಯಾಗಿದ್ದಾರೆ. ಇದರಲ್ಲಿ, 7 ಮಕ್ಕಳು ಒಂದು ವರ್ಷ ಕ್ಕಿಂತ ಕಡಿಮೆ ಪ್ರಾಯದ ಮಕ್ಕಳು ಎನ್ನುವುದನ್ನು ಅಂಕಿ-ಅಂಶಗಳು ತಿಳಿಸಿದೆ.ರಾಜ್ಯದಲ್ಲಿ 4 ದಿನದ ಹಸುಗೂಸೂ ಸೇರಿದಂತೆ 18 ವರ್ಷದವರೆಗಿನ […]

JANANUDI.COM NETWORK ಬೆಂಗಳೂರು: ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ನಾವು ಎಣಿಸಿಕೊಂಡಂತ್ತೆ ಸಾಮಾನ್ಯ ಸಮಸ್ಯೆಗೆ ತಿರುಗದೆ, ಗಂಭೀರ ಸಮಸ್ಯೆಗೆ ದಾರಿಯಾದಂತ್ತೆ ಕಾಣುತ್ತದೆ. ಇದೀಗ ಈ ಸಮಸ್ಯೆ ಹಲವು ಸ್ತರಗಳನ್ನು ಮುಟ್ಟಿದೆ. ಶಾಲೆಗಳಲ್ಲಿ ಧಾರ್ಮಿಕ ವಿಚಾರ ಯಾಕೆ ಎಂದು ಪ್ರಶ್ನೆ ಬಂದಿದ್ದು, ಸಮವಸ್ತ್ರದಲ್ಲಿ ಸಮವಸ್ತ್ರದಲ್ಲಿ ಸಮಾನತೆ ಕಾಣಬೇಕು ಎಂಬ ಒತ್ತಾಯ ಕಂಡು ಬಂದಿರುವ ಹಿನ್ನೆಲೆಯಲ್ಲಿ, ಕನ್ನಡದ ನಟ ಚೇತನ್ ಜಾತ್ಯತೀತ ಪ್ರಶ್ನೆ ಎತ್ತಿ, ಗಂಭೀರವಾದ ಸಂದೇಶ ನೀಡಿದ್ದಾರೆ.“ಸರ್ಕಾರಿ ಕಚೇರಿ ಮತ್ತು ಶಾಲಾ ಕಾಲೇಜುಗಳಿಂದ ದೇವರ ಚಿತ್ರಗಳನ್ನು ತೆಗೆದು […]

JANANUDI.COM NETWORK ಸಂಗೀತದಲ್ಲಿ ಬಹಳ ಆಸಕ್ತಿಯನ್ನು ವಿದ್ಯಾರ್ಥಿ ಜೀವನದಲ್ಲಿ ಮೈಗೂಡಿಸಿಕೊಂಡಿದ್ದ ಕೋಡಿ ಜನಾರ್ಧನ ಶೆಣೈ ಅವರು, 1970 ರಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ಲತಾ ಮಂಗೇಶ್ಕರ್ ಅವರಿಗೆ ಅಭಿಮಾನದಿಂದ ಪತ್ರ ಬರೆದಿದ್ದರು.‘ಲತಾ’ ಅವರು ಶೆಣೈಯವರ ಸಂಗೀತಾಭಿಮಾನಕ್ಕೆ ಸಂತೋಷಗೊಂಡು ಪತ್ರದೊಂದಿಗೆ ಸಹಿ ಹೊಂದಿದ್ದ ತಮ್ಮ ಫೋಟೋ ಸಹ ಕಳುಹಿಸಿದ್ದರು. ಕುಂದಾಪುರದ ಶ್ರೀ ಗಣೇಶ್ ನೋವೆಲ್ಟಿಸ್ನ ಮಾಲಕರಾದ ಕೆ. ಜನಾರ್ಧನ ಶೆಣೈ ಹಲವು ಪ್ರಖ್ಯಾತ ಸಂಗೀತಗಾರರ ಪತ್ರ ಮತ್ತು ಛಾಯಾಚಿತ್ರ ಹೊಂದಿದ್ದು, ಲತಾ ಮಂಗೇಶ್ಕರ್ ಅವರ ಪತ್ರ ಮತ್ತು […]

JANANUDI.COM NETWORK ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್ ಕೆ ಸಿಂಗ್ ಅವರ ಮಾರ್ಗದರ್ಶನದಲ್ಲಿ ಒಂದು ದಿನದ ಶಸ್ತ್ರ ತರಬೇತಿ ಶಿಬಿರವು ಏರ್ಪಡಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ!ಹೆರಾಲ್ಡ್ ಐವನ್ ಮೋನಿಸ್ ರವರು ಶಸ್ತ್ರಾಸ್ತ್ರವನ್ನು ಹೇಗೆ ನಿರ್ವಹಣೆ ಮಾಡಬಹುದೆಂದು ಪ್ರತಿಯೊಬ್ಬ ಕ್ಯಾಡೆಟ್ಗಳು ಪ್ರತ್ಯಕ್ಷವಾಗಿ ಅನುಭವ ಪಡೆದುಕೊಳ್ಳುವುದು ಅತೀ ಅಗತ್ಯ ಮುಂದೆ ವಿವಿಧ ಉದ್ಯೋಗಾವಕಾಶಗಳಿಗೆ ಇದು ಸಹಕಾರಿ ಎಂದು […]

JANANUDI.COM NETWORK ಶಿವಮೊಗ್ಗ: ರಾಜಕೀಯ ಪ್ರೇರಿತವಾಗಿ ಕಾಲೇಜು ಕ್ಲಾಸ್ ಒಳಗೆ ಬಂದ ಕೇಸರಿ ಶಾಲು, ಬೀದಿ ಬೀದಿಯಲ್ಲಿ ಕೇಸರಿ ಶಾಲು ಸುತ್ತಿದ ಬಳಿಕ ಯೋಚನೆಗೂ ನಿಲುಕದಂತೆ, ಶಿವಮೊಗ್ಗದ ಸರ್ಕಾರಿ ಪದವಿ ಕಾಲೇಜಿನಲ್ಲಿ ತ್ರಿವರ್ಣ ಧ್ವಜ ಹಾರಿಸುವ ಧ್ವಜ ಸ್ತಂಭ ಏರಿ ಕೇಸರಿ ಶಾಲನ್ನು ಹಾರಿಸಿದ ಅಘಾರಕಾರಿ ಘಟನೆ ನಡೆದಿದೆ.ವಿದ್ಯಾರ್ಥಿನಿಯರಿಗೆ ಸ್ಕಾರ್ಫ್ ಧರಿಸಿ ಕಾಲೇಜಿಗೆ ಬರಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ, ಕೇಸರಿ ಶಾಲು ಧರಿಸಿ ಬಂದ ಕೆಲವು ವಿದ್ಯಾರ್ಥಿಗಳು ಕಾಲೇಜಿನ ಧ್ವಜಸ್ತಂಭ ಏರಿ ಕೇಸರಿ ಧ್ವಜ ಹಾರಿಸಿದ್ದು, […]

ವರದಿ: ವಾಲ್ಟರ್ಮೊಂತೇರೊ, ಬೆಳ್ಮಣ್ಣು ನೆಹರು ಯುವ ಕೇಂದ್ರ ಉಡುಪಿ ಹಾಗೂ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಇದರ ಸಂಯುಕ್ತ ಆಶ್ರಯದಲ್ಲಿ ನಂದಳಿಕೆ ಅಬ್ಬನಡ್ಕದ ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದ ಬಳಿ ಸಂಘದ ಸದಸ್ಯರಿಂದ ಶ್ರಮದಾನ ಕಾರ್ಯಕ್ರಮ ಜರಗಿತು.ಶ್ರಮದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷ ಪ್ರಶಾಂತ್ ಪೂಜಾರಿ ಅವರು ಅಧ್ಯಕ್ಷತೆ ವಹಿಸಿ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂಧರ್ಭದಲ್ಲಿ ನಂದಳಿಕೆ ಅಬ್ಬನಡ್ಕ […]

JANANUDI.COM NETWORK ಕುಂದಾಪುರ; “ವಿವಿಧ ಕ್ಷೇತ್ರಗಳಲ್ಲಿ ಸ್ಮರಣೀಯ ಸಾಧನೆ ಮಾಡಿರುವ ಎ.ಜಿ.ಕೊಡ್ಗಿ ಅವರನ್ನು ಕುಂದಪ್ರಭ ಗೌರವಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ” ಎಂದು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಹೇಳಿದರು.ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಫೆ. 4 ರಂದು ಕುಂದಪ್ರಭ ಸಂಸ್ಥೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ 3ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎ.ಜಿ.ಕೊಡ್ಗಿ ಅವರಿಗೆ ‘ಕೋ.ಮ. ಕಾರಂತ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವನ್ನು […]

JANANUDI.COM NETWORK ಕುಂದಾಪುರ, ಫೆ.7: ಮೂಲತ ಹೇರಿಕುದ್ರು ನಿವಾಸಿ, ನಿವ್ರತ್ತ ಮೀನುಗಾರಿಕಾ ಬಂದರು ಅಧಿಕಾರಿ ಜೊಸೇಫ್ ಫೆರ್ನಾಂಡಿಸ್ (81) ಅಲ್ಪ ಕಾಲದ ಅಸೌಖ್ಯದಿಂದ ಉಡುಪಿ ಮೂಡುತೊನ್ಸೆಯ ಪುತ್ರನ ಗ್ರಹದಲ್ಲಿ ಫೆಬ್ರವರಿ 6 ರಂದು ನಿಧನರಾದರು.ಇವರು ಗಂಗೊಳ್ಳಿ, ಮಲ್ಪೆ, ಹಂಗಾರಕಟ್ಟೆ ಮುಂತಾದ ಮೀನುಗಾರಿಕಾ ಬಂದರುಗಳಲ್ಲಿ ಸೇವೆ ಸಲ್ಲಿಸಿದ್ದರು. ಸೌಮ್ಯ ಸ್ವಭಾವದ ಅವರು ದಕ್ಷ ಅಧಿಕಾರಿಯಾಗಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಮ್ರತರು ಪತ್ನಿ, ಮೂವರು ಪುತ್ರರರು ಒರ್ವ ಪುತ್ರಿ ಮತ್ತು ಅಪಾರ ಬಂಧು ಮಿತ್ರರರನ್ನು ಅಗಲಿದ್ದಾರೆ.

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ:- ಕೋಲಾರ ಜಿಲ್ಲಾ ಮಾಜಿ ಯೋಧರ ಟ್ರಸ್ಟ್ವತಿಯಿಂದ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬಲಮಂದೆ ಗ್ರಾಮದಲ್ಲಿ ಮಾಜಿ ಯೋಧರ ಮಕ್ಕಳಿಗಾಗಿ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ತೆರೆಯಲಾಗುತ್ತಿದ್ದು, ಫೆ.3 ರಂದು ವಿದ್ಯುಕ್ತವಾಗಿ ಉದ್ಘಾಟನೆಯಾಗಲಿದೆಯೆಂದು ಟ್ರಸ್ಟಿನ ಅಧ್ಯಕ್ಷ ಎಚ್.ಜಗನ್ನಾಥನ್ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಲಮಂದೆ ಗ್ರಾಮದಲ್ಲಿರುವ ಅಗತ್ಯಮೂಲ ಸೌಕರ್ಯಗಳನ್ನು ಬಳಸಿಕೊಂಡು ಬೆಂಗಳೂರಿನ ಸಿ ಫಾರ್ ಸೊಸೈಟಿವತಿಯಿಂದ ನೀಡಿರುವ ಕಂಪ್ಯೂಟರ್ಗಳನ್ನು ಬಳಸಿಕೊಂಡು ತರಬೇತಿ ಕೇಂದ್ರವನ್ನು ಆರಂಭಿಸಲಾಗುತ್ತಿದ್ದು, ಬಂಗಾರಪೇಟೆ ತಹಸೀಲ್ದಾರ್ ಫೆ.3 ರಂದು ಬೆಳಿಗ್ಗೆ 10.30 […]