
ಶ್ರೀನಿವಾಸಪುರ ಪುರಸಭೆ ವತಿಯಿಂದ ಏರ್ಪಡಿಸಿದ್ದ ಪರಿಸರ ಚಿತ್ರ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ಅಭ್ಯರ್ಥಿಗೆ ಪ್ರಮಾಣ ಪತ್ರ ನೀಡಲಾಯಿತು.

ಶ್ರೀನಿವಾಸಪುರ ತಾಲ್ಲೂಕಿನ ಕುಪ್ಪಳ್ಳಿ ಗ್ರಾಮದ ಶತಾಯುಷಿ ಮಹಿಳೆ ಮುನಿಯಮ್ಮ(103) ಅವರನ್ನು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿ ವತಿಯಿಂದ ತಹಶೀಲ್ದಾರ್ ಶಿರಿನ್ ತಾಜ್ ಸನ್ಮಾನಿಸಿದರು.

ಶ್ರೀನಿವಾಸಪುರದಲ್ಲಿ ಆಟೋ ಚಾಲಕರ ಸಂಘದ ವತಿಯಿಂದ ಗಾಂಧಿ ಜಯಂತಿ ಆಚರಿಸಲಾಯಿತು. ಸಂಘದ ಅಧ್ಯಕ್ಷ ಜಗನ್, ರಾಘವೇಂದ್ರ, ರಿಜ್ವಾನ್, ಜಹೀರ್, ಜಾವಿದ್, ಸುರೇಶ್, ಮಾರಪ್ಪ ವೆಂಕಟೇಶ್, ಅಶೋಕ್, ನಾಗರಾಜ್ ಇದ್ದರು.

ಶ್ರೀನಿವಾಸಪುರದ ಪುರಸಭಾ ಕಚೇರಿಯಲ್ಲಿ ಸೋಮವಾರ ಗಾಂಧಿ ಜಯಂತಿ ಆಚರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ವ್ಯವಸ್ಥಾಪಕ ನವೀನ್ ಚಂದ್ರ, ಕೆ.ಜಿ.ರಮೇಶ್, ವಿ.ನಾಗರಾಜ್, ಎಂ.ಶಂಕರ್, ಕೆ.ಎಸ್.ಲಕ್ಷ್ಮೀಶ, ಸಂತೋಷ್, ಸುರೇಶ್, ಶಿವಪ್ರಸಾದ್, ಶ್ರೀನಾಥ್, ಬಿ.ವೆಂಕಟರೆಡ್ಡಿ, ನಾಗರಾಜ್, ಆಯಿಷಾ ನಯಾಜ್, ವಿ.ನಾಗರಾಜ್ ಇದ್ದರು.

ಶ್ರೀನಿವಾಸಪುರ ಪಟ್ಟಣದ ಹೈದರ್ ಆಲಿ ಮೊಹಲ್ಲ ಹಾಗೂ ಜಾಕಿರ್ ಹುಸೆನ್ ಮೊಹಲ್ಲಾ ಉರ್ದು ಶಾಲೆಗಳಿಗೆ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ದುರಸ್ತಿ ಕಾಮಗಾರಿಗಳು ಹಾಗೂ ಶಾಲಾ ನಿರ್ವಹಣೆ ವೀಕ್ಷಣೆ ಮಾಡಿದರು.

ಶ್ರೀನಿವಾಸಪುರ 1 : ಸ್ವಚ್ಚ ಭಾರತ ಅಭಿಯಾನವು ಭಾರತವು ಸ್ವಚ್ಚ ಮತ್ತು ಉತ್ತಮವಾಗಲು ಸಾಧಿಸಲು ಸಾಕಷ್ಟು ಗುರಿಗಳನ್ನು ಹೊಂದಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾದೀಶರಾದ ಬಿ.ಕೆ.ಮನು ಹೇಳಿದರು.ಪಟ್ಟಣ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ, ಸಹಯೋಗದಲ್ಲಿ ಪುರಸಭೆ ವತಿಯಿಂದ ಶನಿವಾರ ನಡೆದ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಸ್ವಚ್ಚ ಭಾರತ ಅಭಿಯಾನವು ಭಾರತಕ್ಕೆ ಹೆಚ್ಚು ಅಗತ್ಯವಿರುವ ಉಪಕ್ರಮವಾಗಿದೆ. ಏಕೆಂದರೆ ಕಳಪೆ ಶುಚಿತ್ವ ದಿಂದ ಪರಿಸರ ಹಾಗು ಆರೋಗ್ಯದ ಮೇಲೆ ಅನೇಕ ಪರಿಣಾಮ […]

ಶ್ರೀನಿವಾಸಪುರ 2 : ತಾಲೂಕಿನ ತೂಪಲ್ಲಿ ಗ್ರಾಮದಲ್ಲಿ ಭಾನುವಾರ ದಂದು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಈ ಸಂಘಕ್ಕೆ ಸಂಬಂದಿಸಿದಂತೆ ನಿರ್ದೇಶಕರ ಚುನಾವಣೆಯಲ್ಲಿ 11 ಅಭ್ಯರ್ಥಿಗಳು ಚುನಾವಣೆಯಲ್ಲಿ ಆಯ್ಕೆಯಾಗಿದ್ದು, ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಗಾಯತ್ರಿ ಮಾಹಿತಿ ನೀಡಿದರು.ತೂಪಲ್ಲಿ ಗ್ರಾಮದ ಟಿ.ವಿ.ರಾಮರೆಡ್ಡಿ, ಟಿ.ವಿ.ಮಧುಸೂದನರೆಡ್ಡಿ, ಸಾವಿತ್ರಮ್ಮ, ಶ್ರೀನಿವಾಸರೆಡ್ಡಿ, ಗಂಗುಲಪ್ಪ, ಮದ್ದಮ್ಮ, ಟಿ.ಎ.ನಾಗರತ್ನಮ್ಮ, ಎಂ.ಕುರಪ್ಪಲ್ಲಿಯ ನರಸಿಂಹನಾಯ್ಡು, ಎಂ.ಕೆ.ವೆಂಕಟರಮಣನಾಯ್ಡು, ತಮ್ಮಿರೆಡ್ಡಿಗಾರಿಪಲ್ಲಿಯ ಮುನಿರತ್ನಮ್ಮ, ಶಂಕರಪ್ಪ, ಟಿ.ಎ.ನಾಗರತ್ನಮ್ಮ , ನರಸಿಂಹಪ್ಪ , ಶ್ರೀನಿವಾಸ್ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಿಳಿಸಿದ್ದಾರೆ. […]

ಶ್ರೀನಿವಾಸಪುರ: ಗಾಂಧೀಜಿ ಪ್ರತಿಪಾದಿಸಿದ ಸತ್ಯ ಮತ್ತು ಅಹಿಂಸೆ ಸರ್ವಕಾಲಿಕ ಮಾನವೀಯ ಮೌಲ್ಯವಾಗಿ ಮುಂದುವರಿದಿದೆ ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಗಾಂಧೀಜಿ ಹಾಗೂ ಲಾಲ್ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಸಮಾರಂಭದಲ್ಲಿ ಗಾಂಧೀಜಿ ಹಾಗೂ ಲಾಲ್ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.ಜಗತ್ತಿನಲ್ಲಿ ಹೆಚ್ಚುತ್ತಿರುವ ಹಿಂಸಾ ವಾತಾವರಣ ಮಾನವ ಕುಲಕ್ಕೆ ಬೆದರಿಕೆ ಒಡ್ಡಿದೆ. ಇಂಥ ಪರಿಸ್ಥಿತಿಯಲ್ಲಿ ಗಾಂಧೀಜಿ ಅವರ ತತ್ವ ಪಾಲನೆಗೆ […]

ಮಂಗಳೂರು, ಸೆಪ್ಟೆಂಬರ್ 27, 2023 – ಮಂಗಳೂರಿನ ಓಶಿಯನ್ ಪರ್ಲ್, ಪೆಸಿಫಿಕ್ 4, ರಿಯಲ್ ಎಸ್ಟೇಟ್ ಉದ್ಯಮವು ಕ್ಷೇತ್ರಕ್ಕೆ ಹೊಸ ಆಯಾಮಗಳನ್ನು ತರಲು ಭರವಸೆ ನೀಡುವ ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು. ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡಾಯ್) ಮಂಗಳೂರು ಚಾಪ್ಟರ್ ಆಯೋಜಿಸಿದ್ದ ಕ್ರೆಡೈ ಮಹಿಳಾ ವಿಭಾಗದ (ಸಿಡಬ್ಲ್ಯೂಡಬ್ಲ್ಯು) ಉದ್ಘಾಟನೆ ಮತ್ತು ಸ್ಥಾಪನೆಯು ಅದ್ದೂರಿಯಾಗಿ ನಡೆಯಿತು, ಪ್ರಮುಖ ವ್ಯಕ್ತಿಗಳು ಮತ್ತು ಉತ್ಸಾಹಿಗಳು ಭಾಗವಹಿಸಿದ್ದರು.ಕಾರ್ಯಕ್ರಮವು 7:00 ಗಂಟೆಗೆ ಪ್ರಾರಂಭವಾಯಿತು. ಮತ್ತು ಗೌರವಾನ್ವಿತ ಮುಖ್ಯ ಅತಿಥಿಗಳಾದ […]