
ಶ್ರೀನಿವಾಸಪುರ: ಇಷ್ಟು ದಿನ ನೋಡಿದ್ದು ನ್ಯೂಸ್ ರೀಲ್ ಮಾತ್ರ. ಸೋಮವಾರದಿಂದ ಆಚೆ ಸಿನಿಮಾ ಶುರುವಾಗುತ್ತೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾರ್ಮಿಕವಾಗಿ ಹೇಳಿದರು. ಶ್ರೀನಿವಾಸಪುರದ ಪಟ್ಟಣದ ಚೌಡೇಶ್ವರಿ ದೇವಿ ದೇವಾಲಯದಲ್ಲಿ ಬುಧವಾರ ಮಾಜಿ ಸ್ಪೀಕರ್ ಕೆ.ಅರ್.ರಮೇಶ್ ಕುಮಾರ್ ಪೂಜೆ ಸಲ್ಲಿಸಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಈ ರೀತಿ ತಿಳಿಸಿದರು ಅವರು ಪಟ್ಟಣದ ಅಮಾನಿಕೆರೆ ಚೌಡೇಶ್ವರಿ ದೇವಾಲಯದಲ್ಲಿ ಬುಧವಾರ ಪೂಜೆ ಸಲ್ಲಿಸಿದ ಬಳಿಕ, ಕಳೆದ ವಿಧಾನಸಭಾ ಚುನಾವಣೆ ಮುಗಿದ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ […]

ಶ್ರೀನಿವಾಸಪುರ; ಕಟ್ಟೆಕೆಳಗಿನ ಪಾಳ್ಯದಲ್ಲಿ ಬುಧವಾರ ಏರ್ಪಡಿಸಿದ್ದ ಇ ಖಾತಾ ಅಭಿಯಾನ ಕಾರ್ಯಕ್ರಮವನ್ನು ಪುರಸಭಾಧ್ಯಕ್ಷ ಬಿ.ಆರ್.ಭಾಸ್ಕರ್ ಉದ್ಘಾಟಿಸಿ ಇ ಖಾತಾ ಅಭಿಯಾನ ಪ್ರಯೋಜನ ಪಡೆಯಿರಿ ಎಂದು ತಿಳಿಸಿ, ನಾಗರಿಕರು ಪುರಸಭೆ ವತಿಯಿಂದ ನಡೆಸಲಾಗುತ್ತಿರುವ ಇ ಖಾತಾ ಅಭಿಯಾನ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕು. ತಮ್ಮ ಮನೆ ಹಾಗೂ ನಿವೇಶನಗಳಿಗೆ ಇ ಖಾತೆ ಪಡೆದುಕೊಳ್ಳಬೇಕು ಎಂದು ಪುರಸಭಾಧ್ಯಕ್ಷ ಬಿ.ಆರ್.ಭಾಸ್ಕರ್ ಹೇಳಿದರು.ಪಟ್ಟಣದ ಕಟ್ಟೆಕೆಳಗಿನ ಪಾಳ್ಯದಲ್ಲಿ ಬುಧವಾರ ಏರ್ಪಡಿಸಿದ್ದ ಇ ಖಾತಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ನಾಗರಿಕರ ಹಿತದೃಷ್ಟಿಯಿಂದ ಈ ವಿಶೇಷ […]

ಶ್ರೀನಿವಾಸಪುರ : ಶಾಲೆಗೆ ಬರುವ ಆಹಾರ ಪಡಿತರಗಳ ಗುಣಮಟ್ಟ ಪರಿಶೀಲಿಸಿ , ಗುಣಮಟ್ಟ ಖಾತರಿ ಪಡಿಸಕೊಂಡು ಆಹಾರ ಪದಾರ್ಥಗಳು, ತರಕಾರಿಗಳನ್ನು ಬಳಸಿಕೊಳ್ಳುವ ಮುನ್ನ ಅವುಗಳ ಸ್ವಚ್ಚೆತೆಗೆ ಮಹತ್ವ ನೀಡಿ. ನೀರನ್ನು ಬಳಸುವಾಗ ಸ್ವಚ್ಚತೆ ಕಾಪಾಡಬೇಕು.ಗುಣಮಟ್ಟ ಪರಿಶೀಲಿಸಿದ ಬಳಿಕವೇ ಬಳಸಬೇಕು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಟಿ.ಆರ್.ಸುಲೋಚನ ಸಲಹೆ ನೀಡಿದರು.ತಾಲೂಕಿನ ತಾಡಿಗೋಳ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಸೋಮವಾರ ಅಡುಗೆ ಕೋಣೆ ಹಾಗು ಬಾಲಕೀಯರ, ಬಾಲಕರ ಶೌಚಾಲಯಗಳ ಉದ್ಗಾಟಿಸಿ ಮಾತನಾಡಿದರು. ಅಡಿಗೆ ಮಾಡುವ ಸ್ಥಳವು ಸ್ವಚ್ಚವಾಗಿರಬೇಕು . […]

ಶ್ರೀನಿವಾಸಪುರ : ತಾಲ್ಲೂಕಿನಲ್ಲಿ ಗ್ರಾಮೀಣ ಬಡ ಹಾಗೂ ದುರ್ಬಲ ಮಹಿಳೆಯರ ಸುಂದರ ಬದುಕಿಗೆ ಅಗತ್ಯವಾಗಿರುವ ಅನೇಕ ಯೋಜನೆಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖೇನ ಅನುಷ್ಟಾನ ಮಾಡುತ್ತಿದ್ದು, ಈ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನರು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ಬೆಂಗಳೂರು ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕರಾದ ಸೀನಪ್ಪ ತಿಳಿಸಿದರು.ಪಟ್ಟಣದ ವೇಣು ವಿದ್ಯಾ ಸಂಸ್ಥೆ ಬಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದವತಿಯಿಂದ ಭಾನುವಾರ ಶ್ರೀನಿವಾಸಪುರ -2 ನೂತನ ಯೋಜನಾ ಕಚೇರಿಯನ್ನು ಉದ್ಗಾಟಿಸಿ ಮಾತನಾಡಿದರು.ಸದಸ್ಯರ ಸರ್ವತೋಮುಖ ಅಭಿವೃದ್ಧಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ […]

ಶ್ರೀನಿವಾಸಪುರ : ಮಹಿಳೆಯರನ್ನು ಆರ್ಥಿಕ ಜ್ಞಾನದಿಂದ ಸಬಲೀಕರಣಗೊಳಿಸಲು ಆರ್ಥಿಕವಾಗಿ ಸಬಲರಾಗಬಹುದು ಎಂದು ಜಿಲ್ಲಾ ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಸುಬ್ಬಾನಾಯಕ್ ಹೇಳಿದರು . ಪಟ್ಟಣದ ಪುರಸಭೆ ಕಚೇರಿಯಲ್ಲಿ ಭಾನುವಾರ ಲೀಡ್ ಬ್ಯಾಂಕ್ಗಳ ವತಿಯಿಂದ ನಡೆದ ಹಣಕಾಸು ಸಾಕ್ಷರತಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಡಿಮೆ ಮತ್ತು ಮಧ್ಯಮವರ್ಗದ ಕುಟುಂಬಗಳು ಆರ್ಥಿಕವಾಗಿ ಸಭಲರಾಗಲು ವಿಶೇಷವಾಗಿ ಮಹಿಳೆಯರು ಮುಖ್ಯ ಕಾರಣರಾಗುತ್ತಾರೆ . ಮಹಿಳೆಯರು ಬ್ಯಾಂಕ್ಗಳಲ್ಲಿ ಖಾತೆ ತೆರದು , ಬರುವ ಸಂಪಾದನೆಯ ಸ್ವಲ್ಪ ಹಣವನ್ನು ಬ್ಯಾಂಕಿನಲ್ಲಿ ಉಳಿತಾಯ ಮಾಡಿದಾಗ ತಮ್ಮ […]

ಕೋಲಾರ: ಎಲ್ಲ ನಾಗರಿಕ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಕರ್ನಾಟಕ ಒನ್ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಈ ಕೇಂದ್ರದಲ್ಲಿ ವಿವಿಧ ಸರ್ಕಾರಿ ಸೇವೆಗಳನ್ನು ಒಂದೇ ಸೂರಿನಡಿ ಪಡೆಯಬಹುದಾಗಿದೆ ಎಂದು ಕೋಲಾರ ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ ರಮೇಶ್ ಹೇಳಿದರು.ನಗರದ ಕುರುಬರಪೇಟೆಯ 3ನೇ ಮುಖ್ಯರಸ್ತೆಯಲ್ಲಿರುವ ಕರ್ನಾಟಕ ಒನ್ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಸಮಗ್ರ ನಾಗರಿಕ ಸೇವೆ ನೀಡಲು ಈ ಸೇವಾ ಕೇಂದ್ರ ಸನ್ನದ್ಧವಾಗಿರುತ್ತವೆ. ಕರ್ನಾಟಕ ಒನ್ ಕೇಂದ್ರಗಳಲ್ಲಿ ವಿದ್ಯುತ್ ಬಿಲ್ಗಳ ಪಾವತಿ, ನೀರಿನ ಬಿಲ್ ಪಾವತಿ, […]

ಕೋಲಾರ,ಮಾ.01: ಹಿರಿಯ ಪತ್ರಕರ್ತರ ಕೆ.ಬಿ ಜಗದೀಶ್ ಅವರ ಪತ್ರಿಕೋದ್ಯಮದಲ್ಲಿನ ಸೇವೆ ಹಾಗೂ ಶ್ರಮಕ್ಕೆ ಇವತ್ತು ಪ್ರಶಸ್ತಿ ಬಂದಿದೆ ಅವರ ಮಾರ್ಗದರ್ಶನ ಕಿರಿಯ ಪತ್ರಕರ್ತರಿಗೆ ಪ್ರಸ್ತುತ ಸಂದರ್ಭದಲ್ಲಿ ಅತ್ಯವಶ್ಯಕವಾಗಿದೆ ಎಂದು ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್. ಗಣೇಶ್ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಾಜ್ಯ ಸಂಘದಿಂದ ಎಂ.ನಾಗೇಂದ್ರ ರಾವ್ ಹೆಸರಿನಲ್ಲಿ ಕೊಡುಮಾಡುವ ದತ್ತಿನಿಧಿ ಪ್ರಶಸ್ತಿಗೆ ಭಾಜನರಾದ ಕೆ.ಬಿ ಜಗದೀಶ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚೆಗೆ […]

ಶ್ರೀನಿವಾಸಪುರ : ಜಗತ್ತಿನಲ್ಲಿ ಯಾರು ಪರಿಪೂರ್ಣರಲ್ಲ, ಎಲ್ಲರಲ್ಲೂ ಒಂದಲ್ಲ-ಒಂದು ನ್ಯೂನತೆ ಇರುತ್ತದೆ. ವಿಶೇಷ ಚೇತನರಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪೋಷಿಸಿದರೆ ಸಾದನೆ ಮಾಡಬಹುದು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬೈರೇಗೌಡ ಹೇಳಿದರು.ಪಟ್ಟಣದ ನೌಕರರ ಭವನದಲ್ಲಿ ಸಾಂತ್ವನ ಟ್ರಸ್ಟ್ ವತಿಯಿಂದ ಶನಿವಾರ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ವಿಕಲಚೇತನರು ತಮ್ಮ ನ್ಯೂನತೆ ಮರೆತು ನೆಮ್ಮದಿಯಿಂದ ಬದಕು ಸಾಗಿಸುತ್ತಿದ್ದಾರೆ. ಅಂತಹವರಿಗೆ ಅನುಕಂಪ ತೋರದೆ ಅವರ ಕೆಲಸಗಳಿಗೆ ಪ್ರೋತ್ಸಾಹವನ್ನು ನೀಡಿ ಅತ್ಮಶಕ್ತಿಯನ್ನು ಹೆಚ್ಚಿಸುವ […]

ಚಿತ್ರಶೀರ್ಷಿಕೆ:(ಫೋಟೊ-2ಕೋಲಾರ1);ಕೋಲಾರ ನಗರದ ಮದರ್ತೆರೇಸಾ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸುತ್ತಿರುವ ಮುಖ್ಯ ಅಧೀಕ್ಷಕ ಮಂಜುನಾಥ್ ಹಾಗೂ ಉಪನ್ಯಾಸಕರು. ಕೋಲಾರ:- ಜಿಲ್ಲೆಯ 28 ಕೇಂದ್ರಗಳಲ್ಲಿ ಸುಗಮವಾಗಿ ಆರಂಭವಾದ ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಗೆ ಇಂದು ಜಿಲ್ಲೆಯಲ್ಲಿ 11875 ಮಂದಿ ನೋಂದಾಯಿಸಿದ್ದು, 11333 ಮಂದಿ ಪರೀಕ್ಷೆಗೆ ಹಾಜರಾಗಿ. 542 ಮಂದಿ ಗೈರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಶೋಕ್ಕುಮಾರ್ ಭಾವಗಿ ತಿಳಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ […]