
ಕೋಲಾರ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ ಸಮಾವೇಶವನ್ನು ದೇವನಹಳ್ಳಿಯಲ್ಲಿ ನಡೆಸಲಾಗಿದ್ದು,ಈ ಸಂದರ್ಭದಲ್ಲಿ ಇಡೀ ಸಂಪುಟದಲ್ಲೇ ಉತ್ತಮ ಸಾಧನೆ ತೋರಿರುವ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು, ಗ್ರಾಹಕ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದರು.ದೇವನಹಳ್ಳಿಯಲ್ಲಿ ನಡೆದ ರಾಜ್ಯ ಸರ್ಕಾರದ 2 ವರ್ಷಗಳ ಸಾಧನಾ ಸಮಾವೇಶದಲ್ಲಿ ರಾಜ್ಯ ಸಂಪುಟದ 36 ಸಚಿವರಲ್ಲಿ ಉತ್ತಮ ಸಾಧನೆ ತೋರಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಕೆ.ಎಚ್.ಮುನಿಯಪ್ಪರನ್ನು ಸನ್ಮಾನಿಸಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿಯಾಗಿ ಜಿಲ್ಲೆಯ ಎಲ್ಲಾ ಶಾಸಕರನ್ನು ಸಮನ್ವಯತೆಯಿಂದ ನಡೆಸಿಕೊಂಡಿರುವ […]

ಶ್ರೀನಿವಾಸಪುರ: ಪಟ್ಟಣದ ವಾರ್ಡ್ ಸಂಖ್ಯೆ 16 ಮತ್ತು 17ರಲ್ಲಿ ನೀರಿನ ತೀವ್ರ ಸಮಸ್ಯೆ ಉಂಟಾಗಿದ್ದು, ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡದೆ ಇದ್ದ ಕಾರಣವಾಗಿ ವಾರ್ಡ್ನ ಮಹಿಳೆಯರು ಮತ್ತು ಪುರುಷರು ಸೇರಿ 50ಕ್ಕೂ ಹೆಚ್ಚು ಮಂದಿ ಪುರಸಭೆಗೆ ತೆರಳಿ ನೀರು ಸಮಸ್ಯೆ ಪರಿಹರಿಸಲು ಒತ್ತಾಯಿಸಿದರು. ಇತ್ತೀಚೆಗೆ ಪುರಸಭೆ ವತಿಯಿಂದ ಹೊಸದಾಗಿ ಕೊಲ್ವೇ ಬಾವಿಯನ್ನು ಕೊರೆಸಿದರೂ ಸಹ, ಸಮರ್ಪಕ ನೀರು ಸರಬರಾಜಿನಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿದರು. ಪುರಸಭೆ ಸದಸ್ಯ ಶಬ್ಬೀರ್ ಖಾನ್ ನೇತೃತ್ವದಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿ […]

ಶ್ರೀನಿವಾಸಪುರ : ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ಧನ್ವಂತರಿ, ಗಣಪತಿ ಹಾಗೂ ಆಂಜನೇಯ ದೇವಾಲಯಗಳ ಪ್ರತಿಷ್ಠಾಪನಾ ಕಾರ್ಯಕ್ರಮ ಧಾರ್ಮಿಕ ಶ್ರದ್ಧೆ ಮತ್ತು ಸಾಂಸ್ಕೃತಿಕ ಸಂಭ್ರಮದೊಂದಿಗೆ ಜರುಗಿತು. ಪುರೋಹಿತರಾದ ಎಚ್.ಎನ್. ರಾಮೋಜಿಚಾರ್ ಮತ್ತು ಹರೀಶ್ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತ ವಿಧಿ ವಿಧಾನಗಳಂತೆ ಪ್ರತಿಷ್ಠಾಪನಾ ಕೈಂಕರ್ಯ ನೆರವೇರಿತು. ಈ ದೈವಿಕ ಕಾರ್ಯಕ್ರಮದ ಭಾಗವಾಗಿ ವೈದ್ಯರು ಹಾಗೂ ಸಿಬ್ಬಂದಿ ದೇವರ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು. ಪ್ರತಿಷ್ಠಾಪನೆಗೆ ಶ್ರಮಿಸಿದ ಆಸ್ಪತ್ರೆಯ ಸಿಬ್ಬಂದಿಗೆ ವಿಶ್ವಕರ್ಮ ಸಮುದಾಯದ ತಾಲೂಕು ಅಧ್ಯಕ್ಷರಾದ ಕೆ. […]

ಶ್ರೀನಿವಾಸಪುರ: ಬೆಂಗಳೂರು ಅರಮನೆ ಮೈದಾನದಲ್ಲಿ ಬಹುಭವ್ಯವಾಗಿ ನಡೆದ ರಾಜ್ಯಮಟ್ಟದ ಡಿಜಿ ಇಮೇಜ್ ವಸ್ತು ಪ್ರದರ್ಶನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಜನಸಾಗರದ ನಡುವೆ ಅದ್ಧೂರಿಯಾಗಿ ನೆರವೇರಿತು. ರಾಜ್ಯದ ಮೂಲೆಮೂಲೆಗಳಿಂದ ಆಯ್ಕೆಗೊಂಡ ಪ್ರತಿಭಾನ್ವಿತ ಛಾಯಾಗ್ರಾಹಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಈ ಹೆಮ್ಮೆಮಯ ಸಂದರ್ಭದಲ್ಲಿ ಶ್ರೀನಿವಾಸಪುರ ಪಟ್ಟಣದ ಹೆಸರನ್ನು ಉಜ್ವಲಗೊಳಿಸಿದವರು ಶ್ರೀ ವಿನಾಯಕ ಡಿಜಿಟಲ್ ಸ್ಟುಡಿಯೋ (ಎಸ್ ಬಿ ಐ ಬ್ಯಾಂಕ್ ಹತ್ತಿರ, ಎಂ.ಜಿ.ರಸ್ತೆ ) ಇದರ ಮಾಲಿಕ ವೇಣುಗೋಪಾಲ ರೆಡ್ಡಿ. ತಮ್ಮ ದೀರ್ಘಕಾಲದ ಛಾಯಾಗ್ರಹಣ ಸೇವೆ, ಕಲಾತ್ಮಕ ದೃಷ್ಟಿಕೋನ […]

ಶ್ರೀನಿವಾಸಪುರ : ದುಖಃ ದುಮ್ಮಾನಗಳನ್ನು ದೂರವಿಟ್ಟುಕೊಳ್ಳಲು ಹಾಗೂ ಸಂತುಷ್ಟ ಜೀವನಕ್ಕಾಗಿ ಯೋಗ ಜೀವನ ಪ್ರತಿಯೊಬ್ಬರಿಗೂ ಇಂದು ಅತ್ಯವಶ್ಯಕವಾಗಿದೆ ಎಂದು ಸ ನೌ ಸಂ ಅಧ್ಯಕ್ಷ ಎಂ. ಭೈರೇಗೌಡ ಹೇಳಿದ್ದಾರೆ.ಪಟ್ಟಣದ ಯೋಗ ಮಂದಿರದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಆಯೋಜಿಸಿದ್ದ ಮಾತೃ ಭೋಜನ ಹಾಗೂ ಮಾತಾಪಿತೃಗಳ ಪಾದಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಯಂದಿರು ಮಕ್ಕಳನ್ನು ಭ್ರಾತೃತ್ವದ ಭಾವನೆಯಿಂದ ಬೆಳೆಸಿದರೆ, ಮಕ್ಕಳಲ್ಲಿ ಸಂಸ್ಕಾರ ಬೆಳೆದು, ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು.ಅವರು ಮುಂದುವರೆದು ಮಕ್ಕಳಿಗೆ ಆಟ, ಪಾಠಗಳೊಂದಿಗೆ ದೈನಂದಿನ ದೈಹಿಕ […]

ಕುಂದಾಪುರ; ಎಂಐಟಿ ಕುಂದಾಪುರದ ಅಂತಿಮ ವರ್ಷದ ಎಐಅಂಡ್ ಎಂಎಲ್ ವಿದ್ಯಾರ್ಥಿನಿ ಮೇಘನಾ ವಿಜಯ್ ಕುಮಾರ್, ಕಾನ್ಫರೆನ್ಸ್ ಸಂಯೋಜಕಿ ಜೀನ್ ಆಶ್ಲೇ ಅವರ ಅಧಿಕೃತ ಆಹ್ವಾನದ ಮೇರೆಗೆ, ಎಸಿಎಸ್ ಟಿಎಂ ಇಂಟೆರ್ ರ್ನ್ಯಾಷನಲ್ ಕಾನ್ಫರೆನ್ಸ್ ದುಬಾಯ್ ನಲ್ಲಿ ವರ್ಚುವಲ್ ಆಗಿ ಪ್ರಬಂಧ ಮಂಡಿಸಿದ್ಧಾರೆ. ವಿಭಾಗ ಮುಖ್ಯಸ್ಥರಾದ ಡಾ. ಇಂದ್ರ ವಿಜಯ್ ಸಿಂಗ್ ಮತ್ತು ಟಿ. ದಿಲೀಪ್ ಅವರು ಸಹ-ಲೇಖಕರಾಗಿ ಬರೆದ ಸೆಲ್ ಫೋನ್ ಮತ್ತು ಸೆಲ್ ಟವರ್ ವಿಕಿರಣಕ್ಕೆ ಒಡ್ಡಿಕೊಂಡ ಮಕ್ಕಳಲ್ಲಿ ಆಕ್ಸಿಡೇಟಿವ್ ಒತ್ತಡದ ಸೂಚಕಗಳ ಅಧ್ಯಯನ ಎಂಬ […]

ಶ್ರೀನಿವಾಸಪುರ ತಾಲ್ಲೂಕು ಕೇತಗಾನಹಳ್ಳಿ ಗ್ರಾಮದ ಅರಣ್ಯ ಇಲಾಖೆ ಮತ್ತು ರೈತರ ಮಧ್ಯೆ ಸಂಘರ್ಷ ನಡೆದು ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಇಲಾಖೆಯವರು ಕಳೆದ 6 ತಿಂಗಳಿನಿಂದ ಸಾವಿರಾರು ಎಕೆರೆ ಅರಣ್ಯ ಭೂಮಿಯನ್ನು ರೈತರಿಂದ ವಶಪಡಿಸಿಕೊಂಡಿದ್ದಾರೆ. ಆದರೆ ರೈತರು ನ್ಯಾಯಾಲಯ ಮೆಟ್ಟಿಲೇರಿ ತಡೆಯಾಜ್ಞೆಯನ್ನು ತಂದು ತೆರವು ಮಾಡಿರುವ ಒತ್ತುವರಿ ಜಮೀನು ಪ್ರವೇಶ ಮಾಡಲು ಮುಂದಾಗಿದ್ದಾರೆ. ಇದರಿಂದ ಇಲಾಖೆ ಮತ್ತು ರೈತರ ಮಧ್ಯೆ ಸಂಘರ್ಷ ನಡೆಯುವಂತಾಗಿದೆ. ಏಪ್ರಿಲ್ 5 ರಂದು ಶ್ರೀನಿವಾಸಪುರ […]

ಶ್ರೀನಿವಾಸಪುರ 1 : ತಾಲೂಕಿನ ರೋಣೂರು ಕ್ರಾಸ್ನ ವಿಐಪಿ ಕಾಲೇಜಿನಲ್ಲಿ ಬುಧವಾರ ಪಿಯುಸಿ ಫಲಿತಾಂಶದ ಅಂಗವಾಗಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.ನಮ್ಮ ಶಾಲೆಯಲ್ಲಿ ಎಲ್ಕೆಜಿಯಿಂದ ದ್ವಿತೀಯ ಪಿಯುಸಿ ವರೆಗೂ ಇದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗುಣಮಟ್ಟದ ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳು ಹಮ್ಮಿಕೊಳ್ಳಲಾಗಿದೆ ಎಂದು ಆಡಳಿತ ಮಂಡಲಿ ಅಧ್ಯಕ್ಷ ಡಾ|| ಕೆ.ಎನ್.ವೇಣುಗೋಪಾಲ್ರೆಡ್ಡಿ ತಿಳಿಸಿದರು.ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಟ್ಟಣದಲ್ಲಿ ನಮ್ಮ ಬ್ರಾಂಚ್ಗೆ ಸಂಬಂದಿಸಿದಂತೆ ಪಿಯುಸಿ ಕಾಲೇಜು ಪಟ್ಟಣದಲ್ಲಿನ ಹಾಗು ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಿಯುಸಿ ಕಾಲೇಜನ್ನು […]

ಬೆಂಗಳೂರು, ಏಪ್ರಿಲ್ 8: ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2024-25ನೇ ಸಾಲಿನ ರಾಜ್ಯವಲಯ ಮತ್ತು ಜಿಲ್ಲಾವಲಯ ಕಾರ್ಯಕ್ರಮಗಳಲ್ಲಿ ಸಾಧಿಸಿರುವ ಪ್ರಗತಿ ಹಾಗೂ ಮುಂದಿನ 2025-26ನೇ ಆರ್ಥಿಕ ವರ್ಷದಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಇಂದು (ಮಂಗಳವಾರ) ಇಲಾಖೆಯ ಕೇಂದ್ರ ಕಚೇರಿಯಲ್ಲಿ ಆಯುಕ್ತ ಅಕ್ರಂ ಪಾಷಾ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಮಾಲೋಚನಾ ಸಭೆ ನಡೆಯಿತು. ಈ ಸಭೆಯಲ್ಲಿ ಇಲಾಖೆಯ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು, ಯೋಜನಾ ನಿರ್ವಾಹಕರು, ಮತ್ತು ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿ, ಪ್ರಸ್ತುತ ಯೋಜನೆಗಳ ಪರಿಣಾಮಕಾರಿತ್ವದ […]