
ಶ್ರೀನಿವಾಸಪುರ : ಗೌನಿಪಲ್ಲಿ ಸತ್ಯಸಾಯಿ ಪ್ರೌಢಶಾಲಾವರಣದಲ್ಲಿ ಬುಧವಾರ ಶಾಲಾವರಣದಲ್ಲಿ ಇದ್ದ ಕೆಇಬಿ ಸಿಬ್ಬಂದಿ ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡುತ್ತಿರುವ ಸಮಯದಲ್ಲಿ ಶಾಲೆಯ ವಿದ್ಯಾರ್ಥಿಗಳು ಶಾಲಾವರಣದಲ್ಲಿ ಮಧ್ಯಾಹ್ನದ ಊಟ ಮಾಡುತ್ತಿದ್ದ ವೇಳೆ ಎರಡು ಕಂಬಗಳು ಮುರಿದ ಪರಿಣಾಮ ಶಾಲೆಯ 3 ವಿದ್ಯಾರ್ಥಿಗಳಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಮರಗಳ ಕೊಂಬೆಗಳನ್ನು ಕಡಿಯುತ್ತಿರುವ ವೇಳೆ ಶಾಲೆಯ 7 ನೇತರಗತಿ ವಿದ್ಯಾರ್ಥಿಗಳಾದ ದಿನೇಶ್ , ಭರತ್ , ಚರಣ್ ಗಾಯಗಳಾಗಿವೆ . ಕರಿಪಲ್ಲಿ ಗ್ರಾಮದ ದಿನೇಶ್ ತಲೆಗೆ ಪೆಟ್ಟಾಗಿ ತೀವ್ರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ […]

ಶ್ರೀನಿವಾಸಪುರ ತಾಲ್ಲೂಕಿನ ಮುತ್ತಕಪಲ್ಲಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಾಹಿತಿ ಪಾತಮುತ್ತಕಪಲ್ಲಿ ಚಲಪತಿ ಗೌಡ ಅವರನ್ನು ಸನ್ಮಾನಿಸಲಾಯಿತು

ಶ್ರೀನಿವಾಸಪುರದ ಕರ್ನಾಟಕ ಮಾದರಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಕ್ಕಳ ದಿನಾಚರಣೆ ಆಚರಿಸಲಾಯಿತು.

ಶ್ರೀನಿವಾಸಪುರ: ಮಕ್ಕಳು ಜವಾಹರಲಾಲ್ ನೆಹರು ಅವರ ಆದರ್ಶ ಪಾಲಿಸಬೇಕು ಎಂದು ನವಕರ್ನಾಟಕ ಸ್ವಾಭಿಮಾನ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾದಿಕ್ ಅಹ್ಮದ್ ಹೇಳಿದರು.ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯ ವಿತರಿಸಿ ಮಾತನಾಡಿದ ಅವರು, ನೆಹರು ಅವರಿಗೆ ಮಕ್ಕಳೆಂದರೆ ಅತೀವ ಪ್ರೀತಿ ಇತ್ತು. ಹಾಗಾಗಿಯೇ ತಮ್ಮ ಹುಟ್ಟು ಹಬ್ಬವನ್ನು ಮಕ್ಕಳ ದಿನಾಚರಣೆ ಹೆಸರಲ್ಲಿ ಆಚರಿಸುವಂತೆ ಹೇಳಿದ್ದರು ಎಂದು ಹೇಳಿದರು.ಉರ್ದು ಶಾಲೆಯಲ್ಲಿ ಓದುವ ಮಕ್ಕಳು ಭವಿಷ್ಯದ ದೃಷ್ಟಿಯಿಂದ ಕನ್ನಡ […]

ಶ್ರೀನಿವಾಸಪುರ: ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಲ್.ಗೋಪಾಲಕೃಷ್ಣ ಹೇಳಿದರು.ಪಟ್ಟಣದ ವೆಂಕಟೇಶಗೌಡ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ನಾನು ವಿಧಾನಸಭೆಗೆ, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಆಭ್ಯರ್ಥಿಯಾಗಿ ಸ್ಪರ್ಧಿಸಲು ನ.15 ರಂದು ಟಿಕೆಟ್ಗಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ’ ಎಂದು ಹೇಳಿದರು.40 ವರ್ಷಗಳಿಂದ […]

ಕೋಲಾರ,ನ.11: ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಟೋಟಲ್ ಟಿ.ಎಂ.ಜೆ ರೀಪ್ಲೇಸ್ಮೆಂಟ್ ಮುಖದಲ್ಲಿ ಚಲಿಸುವ ಏಕೈಕ ಮೂಳೆ ಕೆಳದವಡೆ. ಕೆಳದವಡೆ ಮತ್ತು ತಲೆ ಬುರುಡೆಯ ಜಂಟಿ Temporomandibular joint(TMJ), ತಲೆ ಬುರುಡೆಯ ಫೋಸಾದಲ್ಲಿ ಸರಿಯುವುದರಿಂದ ಕೆಳದವಡೆಯ ಚಲನೆ ಸಾಧ್ಯವಾಗುತ್ತದೆ. ಕೆಳದವಡೆಗೆ ಪೆಟ್ಟುಬಿದ್ದು, ಜಂಟಿ ಸುತ್ತ ರಕ್ತಸ್ರಾವವಾಗಿ ಕ್ರಮೇಣ ತಲೆ ಬುರುಡೆ ಜೊತೆ ಸೇರಿ ಒಂದೇ ಮೂಳೆಯಾಗಿ ದವಡೆಯ ಚಲನೆಯನ್ನು ನಿಬರ್ಂಧಿಸುವುದನ್ನು TMJ Ankylosis ಎಂದು ಕೆರಯಲಾಗುತ್ತದೆ. ಇಂತಹ ಸಂದರ್ಭದಲ್ಲಿ ಬಾಯಿ ತೆಗೆಯುವುದು ಮತ್ತು ಆಹಾರ ಸೇವನೆಯಲ್ಲಿ ತೊಡುಕು ಕಂಡುಬರುತ್ತದೆ.ಆರ್.ಎಲ್.ಜಾಲಪ್ಪ ಆಸ್ಪತ್ರೆಯದಂತ ವೈದ್ಯಕೀಯ […]

ಕೆಜಿಎಫ್ :ದಾಸ ಶ್ರೇಷ್ಠ ಕವಿ ಕನಕದಾಸರು ನಿತ್ಯ ಸ್ಮರಣೀಯರೆಂದು, ಭಾರತೀಯ ದಾಸ ಸಾಹಿತ್ಯದ ಸಂಸ್ಕøತಿಯನ್ನು ಇಂದಿಗೂ ಉಳಿಸಿ ವಿಶ್ವಕ್ಕೆ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ಚೇತನ ಕನಕದಾಸರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ಧರಣೀದೇವಿ ಅವರು ನುಡಿದರು.ಅವರು ಕೆಜಿಎಫ್ನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಶ್ರದ್ದಾಭಕ್ತಿಯಿಂದ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಾವಪೂರ್ವ ಗೌರವವನ್ನು ಸಲ್ಲಿಸಿದ ಬಳಿಕ ಮಾತನಾಡಿ, ಕನಕದಾಸರು ನಮ್ಮ ನಡುವಿನ ಶಿಕ್ಷಾಗುರು ಮಾತ್ರವಲ್ಲ ಮೋಕ್ಷಾಗುರುವೂ ಹೌದು, ಮೋಕ್ಷವು ಸತ್ತಮೇಲೆ ಸಿಗುವಂತದ್ದಲ್ಲ, ಅದು […]

ಶ್ರೀನಿವಾಸಪುರ: ಯಲ್ದೂರು ಸುತ್ತಮುತ್ತಲಿನ ಗ್ರಾಮಗಳ ಸಮೀಪ ಬೆಳೆಯಲಾಗಿದ್ದ ಶ್ರೀಗಂಧದ ಮರಗಳನ್ನು ಕಳವು ಮಾಡಿದ್ದರೆಂದು ಹೇಳಲಾದ ನಾಲ್ಕು ಮಂದಿ ಆಪಾದಿತರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.ಚಾಂಪಲ್ಲಿ ನಾರಾಯಣಸ್ವಾಮಿ, ಕಿರುಮಣಿ ವೆಂಕಟರಾಮಪ್ಪ, ಕಿರುಮಣಿ ನಾಗರಾಜ, ಕಟ್ಟಿಗೇನಹಳ್ಳಿ ಅಬ್ದುಲ್ ಮೆಹಬೂಬ್ ಪಾಷ ಬಂಧಿತರು.ಪಟ್ಟಣದ ಹೊರವಲಯದ ಶಿವಪುರ ಕ್ರಾಸ್ನಲ್ಲಿ ಮೊದಲ ಮೂವರು ಆರೋಪಿಗಳು ಸುಮಾರು ರೂ.2,26,400 ಮೌಲ್ಯದ 11 ಕೆಜಿ 320 ಗ್ರಾಂ ತೂಕದ 23 ಶ್ರೀಗಂಧದ ತುಂಡುಗಳನ್ನು ಅಬ್ದುಲ್ ಮೆಹಬೂಬ್ ಪಾಷಗೆ ಮಾರುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆಪಾದಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.ಜಿಲ್ಲಾ ಪೊಲೀಸ್ […]

ಶ್ರೀನಿವಾಸಪುರ: ಕನಕದಾಸರು ನಾಡು ಕಂಡ ಶ್ರೇಷ್ಠ ದಾರ್ಶನಿಕರು. ಓಬವ್ವನ ಶೌರ್ಯ ಮೆಚ್ಚುವಂಥದ್ದು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಕುರುಬರ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕನಕದಾಸ ಹಾಗೂ ಒನಕೆ ಓಬವ್ವ ಅವರ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕನಕದಾಸರು ತಮ್ಮ ಕೀರ್ತನೆಗಳು ಹಾಗೂ ಕೃತಿಗಳ ಮೂಲಕ ಸಮಾಜ ಸುಧಾರಣೆಗೆ ಪ್ರಯತ್ನಿಸಿದರು. ಸಂತ ಕವಿ ಕನಕದಾಸರ ಜೀವನ ಮಾನವ ಕುಲಕ್ಕೆ ದಾರಿದೀಪವಾಗಿದೆ. ಅವರ ಸಾಹಿತ್ಯ […]