ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರ

JANANUDI.COM NETWORK

ಭಾರತೀಯ ಲೆಕ್ಕಪರಿಶೋಧನಾ ಘಟಕ ಉಡುಪಿ ಮತ್ತು ಲೊರೆನ್ಸಿಯನ್ ಸೆಂಟರ್ ಫಾರ್ ಎಕ್ಸಲೆನ್ಸ್ ಇದರ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಸಿಎ ಕೋರ್ಸಿನ ಬಗ್ಗೆ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಏರ್ಪಡಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಸಿಎ ಪ್ರೀತೇಶ್ ಬರ್ಟನ್ ಡೇಸಾ ಆಗಮಿಸಿ “ಜೀವನದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಕಠಿಣ ಪರಿಶ್ರಮ ಅತಿ ಅಗತ್ಯ .ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ಇಂದು ಸಿಎ ಕೋರ್ಸ್ ಮಾಡಿದವರಿಗೆ ಹೇರಳ ಅವಕಾಶಗಳು ಲಭ್ಯವಿದೆ. ಈ ದಿಸೆಯಲ್ಲಿ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಗ್ರಾಮೀಣ ಮಟ್ಟದ ತರಬೇತಿ ಕೇಂದ್ರ ಆರಂಭಿಸಿರುವುದು ಶ್ಲಾಘನೀತ ಆಗಿದೆ ಎಂದು ಹೇಳಿದರು.”ಕಾರ್ಯಕ್ರಮದಲ್ಲಿ ಐಸಿಎಐ ಇದರ ವಲಯ ಅಧ್ಯಕ್ಷರಾದ ಶ್ರೀಮತಿ ಕವಿತಾ ಎಂ ಪೈ ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಎಡ್ವರ್ಡ್ ಲಾಸನ್ ಡಿಸೋಜ ವಹಿಸಿದ್ದರು .ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಜೆಸಿಂತಾ ಲೋಬೋ ಸ್ವಾಗತಿಸಿ ಶ್ರೀನಾಥ್ ಕುಲಾಲ್ ವಂದಿಸಿದರು. ಶ್ರೀಮತಿ ಪ್ರಮಿತ ವೀರ ಕಾರ್ಯಕ್ರಮ ನಿರೂಪಿಸಿದರು.