ಕಾರು ಲಾರಿ ಡಿಕ್ಕಿ -ಸ್ಥಳದಲ್ಲೇ  ರಂಗಭೂಮಿ  ಸ್ತ್ರಿ ಕಲಾವಿದೆಯರು ಸಾವು

JANANUDI.COM NETWORK


ಹಾವೇರಿ : ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಾಕೋಳ  ಗ್ರಾಮದ ಬಳಿ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ರಂಗಭೂಮಿ ಕಲಾವಿದರು.ಸ್ಥಳದಲ್ಲೇ ಸಾವನ್ನಪ್ಪಿದ ಘೋರ ದುರಂತ ಸಂಭವಿಸಿದೆ.       

ಮೃತರನ್ನು ದಾವಣಗೆರೆ  ಮೂಲದವರಾದ ಗೀತಾ ದಾವಣಗೆರೆ (34) ಮತ್ತು ಮ೦ಜುಳಾ (36) ಎ೦ದು. ಗುರುತಿಸಲಾಗಿದೆ. ಕಾರಿನಲ್ಲಿದ್ದ ಮತ್ತಿಬ್ಬರು ತೀವ್ರವಾಗಿ  ಗಾಯಗೊಂಡಿದ್ದಾರೆ ಸದ್ಯ ಗಾಯಾಳುಗಳನ್ನು ರಾಣೆಬೆನ್ನೂರು ಖಾಸಗಿ ಆಸ್ಪತ್ರೆಗೆದಾಖಲಿಸಿ ಚಿಕಿತ್ಸ ನೀಡಲಾಗುತ್ತಿದೆ.       ಕಾರು  ಲಾರಿಯನ್ನು ಓವರ್‌ ಟೀಕ್‌ ಮಾಡಲು ಹೋದಾಗ, ಈ ದುರ್ಥಟನೆ ಸಂಭವಿಸಿದೆ ಎನ್ನಲಾಗುತ್ತಿದ್ದು ಕಲಾವಿದೆಯರು  ದಾವಣಗೆರೆಯಿ೦ದ ಕಾರವಾರಕ್ಕೆ  ಕಾರ್ಯಕ್ರಮಕ್ಕೆ ತರಳುತ್ತಿದ್ದ ವೇಳ ಈ ದುರ್ಥಟನೆಸಂಭವಿಸಿದೆ ಎ೦ದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ರಾಣೆಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನ ನಡೆಸಿ  ಪ್ರಕರಣವನ್ನು  ದಾಖಲಿಸಿಕೊಂಡಿದ್ದಾರೆ.