ಕೊರೊನಾ ಪರಿಹಾರದ ಹಣವನ್ನು ಸಾಲದ ಕಂತಿಗೆ ಜಮೆ ಮಾಡಿದ್ದ ಕೆನರಾ ಬ್ಯಾಂಕ್: ಜಾಲತಾಣದ ಟೀಕೆಗೆ ಗುರಿಯಾಗಿ ಖಾತೆಗೆ ಮರಳಿಸಿದ ಬ್ಯಾಂಕ್.

JANANUDI.COM NETWORK

ಮಂಗಳೂರು: ಬಡ ಆಟೊ ಚಾಲಕ ಬಶೀರ್ ಗೆ ಕೊವೀಡ್ ಲಾಕ್ ಡೌನ್ ಪರಿಹಾರವೆಂದು ಸರಕಾರ ನೀಡಿರುವ 3 ಸಾವಿರ ರೂ. ಸಹಿತ ಬ್ಯಾಂಕ್ ಖಾತೆಯಲ್ಲಿದ್ದ 2,700ನ್ನೂ ಎಲ್ಲವನ್ನು ಬಶೀರ್ ಮನೆ ಸಾಲದ ಕಂತಿಗಾಗಿ ಕೊರೊನಾ ತೆಗೆದುಕೊಂಡಿದ್ದಕ್ಕೆ ಎನನ್ನು ಪರಿಹಾರ ಕೊಡದೆ, ಮುರಿದುಕೊಂಡಿದೆ, ಬ್ಯಾಂಕ್​ನ ವರ್ತನೆಗೆ ನೆಟ್ಟಿಗರು ಕಟು ಟೀಕೆ ವ್ಯಕ್ತಪಡಿಸಿದ್ದರು. ಈ ಕುರಿತು ದೊಡ್ಡ ಚರ್ಚೆಯನ್ನೇ ಅದು ಹುಟ್ಟುಹಾಕಿತು. ಯೂನಿಯನ್ ಪದಾಧಿಕಾರಿಗಳು ಬಶೀರ್​ಗೆ ಹಾಗೂ ಈ ರೀತಿ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರದ (ರೀ ಷೆಡ್ಯೂಲ್ ಅವಕಾಶದ) ದಾರಿಗಳನ್ನು ವಿವರಿಸಿದರು. ಇದರಿಂದ ಎಚ್ಚೆತ್ತ ಕೆನರಾ ಬ್ಯಾಂಕ್, ಸರಕಾರದ ಪರಿಹಾರ ಧನ ಮೂರು ಸಾವಿರ ರೂ.ಗಳನ್ನು ಬಶೀರ್ ಖಾತೆಗೆ ಮರಳಿಸಿದೆ

.

ಸುರತ್ಕಲ್ ಸೂರಿಂಜೆ ನಿವಾಸಿಯಾದ ಆಟೋ ಚಾಲಕ ಬಶೀರ್ ಮನೆ ಸಾಲದ ಮೇ ತಿಂಗಳ ಕಂತುನ್ನು ಕಟ್ಟಲು ಲಾಕ್ ಡೌನ್, ಕೊರೊನಾ ಬಿಕ್ಕಟ್ಟಿನಿಂದಾಗಿ ಅಸಾಧ್ಯವಾಗಿತ್ತು. ಸಾಲ ಕೊಟ್ಟ ಕೆನರಾ ಬ್ಯಾಂಕ್ ಬೈಕಂಪಾಡಿ ಬ್ರಾಂಚ್​ನ ಅಧಿಕಾರಿಗಳಲ್ಲಿ 3/4 ತಿಂಗಳು ಕಂತು ಪಾವತಿಗೆ ವಿನಾಯತಿ ಕೇಳಿದ್ದರು. ಅಲ್ಲಿ ಸಕಾರಾತ್ಮಕ ಸ್ಪಂದನೆ ಸಿಗದೆ ಅವರ ಖಾತೆಯಲ್ಲಿದ್ದ 2700 ರೂ. ಹಾಗೂ ಆಟೋ ಚಾಲಕರಿಗೆ ಕೊರೊನಾ ಪರಿಹಾರವಾಗಿ ಸರಕಾರ ನೀಡಿದ 3 ಸಾವಿರ ರೂ‌.ವನ್ನು ಬ್ಯಾಂಕ್ ಸಾಲಕ್ಕೆ ಜಮಾ ಮಾಡಿಕೊಂಡಿತ್ತು.

ಈ ಕುರಿತು ಆಟೋ ಚಾಲಕ ಬಶೀರ್ ಸಾಮಾಜಿಕ ಜಾಲತಾಣದಲ್ಲಿ ಕೆನರಾ ಬ್ಯಾಂಕ್​ ಆಡಳಿತದ ನಡೆಯ ಕುರಿತು ಮಾಹಿತಿ ಬಿಚ್ಚಿಟ್ಟಿದ್ದರು. ಬ್ಯಾಂಕ್​ನ ವರ್ತನೆಗೆ ನೆಟ್ಟಿಗರು ಕಟು ಬೇಸರ ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಈ ಕುರಿತು ದೊಡ್ಡ ಚರ್ಚೆಯನ್ನೇ ಅದು ಹುಟ್ಟುಹಾಕಿತು. ಯೂನಿಯನ್ ಪದಾಧಿಕಾರಿಗಳು ಬಶೀರ್​ಗೆ ಹಾಗೂ ಈ ರೀತಿ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರದ (ರೀ ಷೆಡ್ಯೂಲ್ ಅವಕಾಶದ) ದಾರಿಗಳನ್ನು ವಿವರಿಸಿದರು.

ಹೀಗಾಗಿ ಎಚ್ಚೆತ್ತ ಕೆನರಾ ಬ್ಯಾಂಕ್, ಸರಕಾರದ ಪರಿಹಾರ ಧನ ಮೂರು ಸಾವಿರ ರೂ.ಗಳನ್ನು ಬಶೀರ್ ಖಾತೆಗೆ ಮರಳಿಸಿದೆ. ರೀಷೆಡ್ಯೂಲ್ ಆಫರನ್ನೂ ನೀಡಿದೆ. ಈ ಮಾಹಿತಿ ಇಲ್ಲದ ಉಳಿದ ದೊಡ್ಡ ಸಂಖ್ಯೆಯ ಸಾಲಗಾರರಿಗೂ ಇದರ ಲಾಭ ಸಿಕ್ಕಿದೆ. ಸರಕಾರ ಪರಿಹಾರವಾಗಿ ನೀಡಿದ ಮೊತ್ತವನ್ನು ಸಾಲಕ್ಕೆ ಮುರಿಯುವ ಬ್ಯಾಂಕಗಳ ಕೆಟ್ಟ ಅಮಾನುಷ ಕ್ರಮಕ್ಕೂ ಕಡಿವಾಣ ಬೀಳಬೇಕಿದೆ.