ಬೈಂದೂರು ಹೋಲಿಕ್ರಾಸ್ ಇಗರ್ಜಿ : ಸಮುದಾಯ ದಿನಾಚರಣೆ

ಬೈಂದೂರು: ಸ್ಥಳೀಯ ನ ಹೋಲಿಕ್ರಾಸ್ ಇಗರ್ಜಿಯಲ್ಲಿ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊ ರವರ ಅಧ್ಯಕ್ಷತೆಯಲ್ಲಿ ಸಮುದಾಯದ ದಿವಸವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಉಡುಪಿ ಧರ್ಮಪ್ರಾಂತ್ಯದ ಕಿರುಕ್ರಿಸ್ತ ಸಮುದಾಯ ಆಯೋಗದ ನಿರ್ದೇಶಕರಾದ ವಂದನೀಯ ಹೆರಾಲ್ಡ್ ಪೀರೆರಾರವರು “ಸಮುದಾಯಕೋಸ್ಕರ ನಾವುಗಳು, ನಮಗಾಗಿ ಸಮುದಾಯ ಎಂಬ ಚಿಂತನೆಯಲ್ಲಿ ಜೀವಿಸಿದರೆ ಸಮಾಜದಲ್ಲಿ ಏಕತೆ, ಒಗ್ಗಟ್ಟು ಬಲಿಷ್ಠವಾಗಿರುತ್ತದೆ” ಎಂದರು

ವೇದಿಕೆಯಲ್ಲಿ ಕುಂದಾಪುರ ವಲಯದ ಪ್ರಧಾನ ಧರ್ಮಗುರು ವಂದನೀಯ ಸ್ಟ್ಯಾನಿ ತಾವ್ರೋ, ಕೋಟ ಇಗರ್ಜಿಯ ಧರ್ಮಗುರು ವಂದನೀಯ ಎ. ಡಿಲೀಮಾ, ಸಿಸ್ಟರ್ ಆ್ಯನ್ಸಿ, ಉಪಾಧ್ಯಕ್ಷ ಸ್ಟ್ಯಾನಿ ಡಾಯಸ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ಅನಿತಾ ನಜ್ರೆತ್ ಸ್ವಾಗತಿಸಿದರು, ಆಯೋಗಗಳ ಸಂಯೋಜಕಿ ಮೇಬಲ್ ನಜ್ರೆತ್ ವಂದಿಸಿದರು. ವೀಣಾ ಫೆರ್ನಾಂಡಿಸ್ ಮತ್ತು ರೋಶನ್ ರೋಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿದರು