ಖ್ಯಾತ ಆಯುರ್ವೇದ ಸಂಸ್ಥೆ “ಸುಗರ್ಧನ” ತಿರುನೇಲ್ವೇಲಿ ನಗರದಲ್ಲಿ ಸಾವಯವ ಮಿಶ್ರಿತ ಕ್ರಿಮಿನಾಶಕ ದ್ರಾವಣವನ್ನು ಸಿಂಪಡಿಸುವ ಮೂಲಕ ಕರೋನ ಹತೋಟಿಗೆ ನೆರವಾಗಿದೆ.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಮೇ.24: ಬೆಂಗಳೂರು: ಕರೋನ ಮಹಾ ಮಾರಿಯನ್ನು ಬಗ್ಗು ಬಡಿಯಲು ಸರ್ಕಾರಗಳು, ವಿವಿಧ ಸಂಘ ಸಂಸ್ಥೆಗಳು ಹಲವಾರು ವಿಧದಲ್ಲಿ ಪ್ರಯತ್ನ ಪಡುತ್ತಿದ್ದು, ಈ ನಿಟ್ಟಿನಲ್ಲಿ ಬೆಂಗಳೂರಿನ ಖ್ಯಾತ ಆಯುರ್ವೇದ ಸಂಸ್ಥೆ “ಸುಗರ್ಧನ” ನೆರೆ ರಾಜ್ಯವಾದ ತಮಿಳುನಾಡಿನ ತಿರುನೇಲ್ವೇಲಿ ನಗರದಲ್ಲಿ ಸಾವಯವ ಮಿಶ್ರಿತ ಕ್ರಿಮಿನಾಶಕ ದ್ರಾವಣವನ್ನು ಸಿಂಪಡಿಸುವ ಮೂಲಕ ಆ ನಗರದಲ್ಲಿ ಕರೋನ ಹತೋಟಿಗೆ ನೆರವಾಗಿದೆ.
ಹಗುರ ಮತ್ತು ಪರಿಮಿತ ಪ್ರಮಾಣ ಸಾವಯುವ ದ್ರಾವಣವನ್ನು ವಾತಾವರಣದಲ್ಲಿ ಸಿಂಪಡಿಸುವ ಮೂಲಕ ವಾತಾವರಣದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಈ ಕಾರ್ಯಾಚರಣೆಯನ್ನು ಮೇ 8ನೇ ತಾರಿಕಿನಿಂದ 14ನೇ ತಾರಿಕಿನವರೆಗೂ ನಡೆಸಲಾಯಿತು. ಒಟ್ಟು 8 ಸ್ವಯಂಚಾಲಿತ ಡ್ರೋನ್‍ಗಳನ್ನು ಈ ಕಾರ್ಯಕ್ಕಾಗಿ ಬಳಸಲಾಯಿತು.
ಈ ಬಗ್ಗೆ ಸುಗರ್ಧನ ಸಂಸ್ಥೆಯ ಡಾ. ನಾರಾಯಣ್ ಕಾರ್ತಿಕೇಯನ್ ಮಾಹಿತಿ ನೀಡಿ ಈ ಕಾರ್ಯಚರಣೆಯು ಹಿರಿಯ ಐ.ಎ.ಎಸ್ ಅಧಿಕಾರಿ ಮತ್ತು ತಮಿಳುನಾಡು ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಅಪೂರ್ವ, ಚೆನ್ನೈನಲ್ಲಿರುವ ವಾಯುಕ್ಷೇತ್ರ ಸಂಶೋಧನಾ ಮಂಡಳಿಯ ಕೆ.ಸೆಂಥಿಲ್ ಕುಮಾರ್ ಹಾಗೂ ತಿರುವಳ್ಳುವರ್ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ತಾಮರೈ ಸೆಲ್ವಿ ಇವರ ಮೇಲ್ವಿಚಾರಣೆಯಲ್ಲಿ ಒಟ್ಟು ಏಳು ದಿನಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 20000 ಲೀಟರ್ ಸಾವಯವ ದ್ರಾವಣವನ್ನು ವಾತಾವರಣದಲ್ಲಿ ಸಿಂಪಡಿಸಲಾಯಿತು ಎಂದು ತಿಳಿಸಿದರು.
ತಿರುನೆಲ್ವೇಲಿ ನಗರದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದ ಒಟ್ಟು 6 ವಾರ್ಡುಗಳಲ್ಲಿ ಎರಡು ಸರದಿಯಲ್ಲಿ ದ್ರಾವಣವನ್ನು ಸಿಂಪಡಿಸಲಾಯಿತು ಎಂದು ತಿಳಿಸಿದರು. ಸದರಿ ದ್ರಾವಣವನ್ನು ವಾತಾವರಣದಲ್ಲಿ ಸಿಂಪಡಿಸಿದ ನಂತರದ ದಿನಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದ್ದು ಒಟ್ಟು ಶೇಕಡಾ 33 ರಷ್ಟು ಪ್ರಕರಣಗಳು ಕಡಿಮೆಯಾಗಿವೆ ಎಂದು ತಿರುನೆಲ್ವೇಲಿ ನಗರ ಸಭಾ ಆಯುಕ್ತ ಜಿ.ಕಣ್ಣನ್ ತಿಳಿಸಿದ್ದಾರೆ. ಕೋಲಾರ ಜಿಲ್ಲೆಯಲ್ಲೂ ಸಹ ಈ ಪ್ರಯೋಗವನ್ನು ಮಾಡಲು ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಯೋಜನೆ ರೂಪಿಸಬಹುದೆ?