ಉಡುಪಿ ಸೀನಿಯರ್ ಛೇಂಬರ್ ವತಿಯಿಂದ ಲೈಬ್ರೆರಿಗೆ ಪುಸ್ತಕಗಳ ಕೊಡುಗೆ


ಸೀನಿಯರ್ ಛೇಂಬರ್ ಇಂಟರ್‍ನ್ಯಾಶನಲ್ ಉಡುಪಿ ಟೆಂಪಲ್ ಸಿಟಿ ವತಿಯಿಂದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಬ್ರಹ್ಮಾವರದ ಲೈಬ್ರೆರಿಗೆ ಪುಸ್ತಕವನ್ನು ಕ್ರೋಢಿಕರಿಸುವ “ಪುಸ್ತಕ ಜೋಳಿಗೆ ಅಭಿಯಾನ”ಕ್ಕೆ ಪ್ರಪಥಮ ಕೊಡುಗೆಯಾಗಿ ವಿವಿಧ ಪುಸ್ತಕಗಳನ್ನು ನೀಡಲಾಯಿತು.
ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಜರುಗಿದ ಪುಸ್ತಕ ಹಸ್ತಾಂತರಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀನಿಯರ್ ಛೇಂಬರ್ ಉಡುಪಿಯ ಅಧ್ಯಕ್ಷ ಜಗದೀಶ್ ಕೆಮ್ಮಣ್ಣು ವಹಿಸಿ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಸೀನಿಯರ್ ಛೇಂಬರ್‍ನ ರಾಷ್ಟ್ರೀಯ ನಿರ್ದೇಶಕ ಚಿತ್ರಕುಮಾರ್ ಭಾಗವಹಿಸಿದ್ದರು. ವೇದಿಕೆಯಲ್ಲಿ ನಿರ್ದೇಶಕರಾದ ತುಳಸಿದಾಸ್ ಸಾಲ್ಯಾನ್, ಲಕ್ಷ್ಮಣ್ ಉಪ್ಪೂರು, ರವಿರಾಜ್ ಉದ್ಯಾವರ, ಶಂಕರ ಪೂಜಾರಿ, ವಿಜಯ ಸುವರ್ಣ, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಆಶಾ ದೇವಿ ನಾಯಕ್ ಉಪಸ್ಥಿತರಿದ್ದರು. ಗಣೇಶ್ ಬ್ರಹ್ಮಾವರ ವಂದಿಸಿದರು.