ಹುಟ್ಟು ಹಬ್ಬ ವಿಶೇಷ ಮಕ್ಕಳ ವಸತಿ ಶಾಲೆ ಮಾನಸ ಜ್ಯೋತಿಯಲ್ಲಿ

ರೋಟರಿ ಕುಂದಾಪುರ ದಕ್ಷಿಣದ ಸದಸ್ಯರಾದ ರೋ. ಮನೋಹರ ಪಿ ತಮ್ಮ ಹುಟ್ಟು ಹಬ್ಬವನ್ನು ವಿಶೇಷ ಮಕ್ಕಳ ವಸತಿ ಶಾಲೆ ಮಾನಸ ಜ್ಯೋತಿಯಲ್ಲಿ ಹಣ್ಣು ಹಂಪಲು ಹಂಚಿ, ದೇಣಿಗೆಯನ್ನು ನೀಡಿ, ಮಕ್ಕಳೊಂದಿಗೆ ಆಚರಿಸಿಕೊಂಡರು.
ರೋಟರಿ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಮಾಜಿ ಅಧ್ಯಕ್ಷರಾದ ವಾಸುದೇವ ಕಾರಂತ, ಕೆ.ಪಿ.ಭಟ್ , ಕಾರ್ಯದರ್ಶಿ ಸಚಿನ್ ನಕ್ಕತ್ತಾಯ,ರೋ. ಸುರೇಖಾ ಪುರಾಣಿಕ ,ಶ್ರೀಮತಿ ವಿಜಯಲಕ್ಷ್ಮಿ ಮನೋಹರ ಹಾಗೂ ಮಾನಸ ಜ್ಯೋತಿಯ ಶೋಭಾ ಮಧ್ಯಸ್ಥ ಪಾಲ್ಗೊಂಡಿದ್ದರು.