ಬಿಕರ್ನಕಟ್ಟೆ – ಬಾಲಯೇಸು ಪುಣ್ಯ ಕ್ಷೇತ್ರದಲಿ ಬಾಲಯೇಸುವಿನ ಧ್ವಜ ಇಳಿಸುವ ಮೂಲಕ ವಾರ್ಷಿಕ ಮಹೋತ್ಸವಕ್ಕೆ ತೆರೆ


ಮಂಗಳೂರು: ಬಿಕರ್ನಕಟ್ಟೆ ಬಾಲ ಯೇಸು ಪುಣ್ಯ ಕ್ಷೇತ್ರದ 2023 ರ ವಾರ್ಷಿಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರೆ ಏಳೆಯಲಾಯಿತು. ಇದರ ಪ್ರಯುಕ್ತ ಅ|ವಂ|ಮೊ|ಮ್ಯಾಕ್ಷಿಮ್ ನೊರೊನ್ಹಾ ಬಲಿಪೂಜೆಯನ್ನು ಅರ್ಪಿಸಿದ ಬಳಿಕ ಬಾಲ ಯೇಸುವಿನ ಸ್ವರೂಪವಿದ್ದ ಧ್ವಜವನ್ನು ಗೌರವ ಪೂರ್ವಕವಾಗಿ ಕೆಳಗಿಳಿಸಿ ಉತ್ಸವಕ್ಕೆ ತೆರೆ ಏಳೆಯಲಾಯಿತು.
ಈ ಸಂದರ್ಭದಲ್ಲಿ ಪುಣ್ಯ ಕ್ಷೇತ್ರದ ಮುಖ್ಯಸ್ಥರಾದ ವಂ|ಧರ್ಮಗುರು ರೊಮೇಲ್ ಡಿಸೋಜಾ, ಹಾಗೂ ಇನ್ನಿತರ ಧರ್ಮಗುರುಗಳು ಸಾವಿರಾರು ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.