ಬೀಜಾಡಿ: ಉಚಿತ ಕಾನೂನು ಅರಿವು-ನೆರವು ಶಿಬಿರ

JANANUDI.COM NETWORK


ಬೀಜಾಡಿ: ಗ್ರಾಮ ಪಂಚಾಯಿತಿ ಬೀಜಾಡಿ, ಬೀಜಾಡಿ ಗೋಪಾಡಿ ಮಿತ್ರ ಸಂಗಮ ಇವರ ಜಂಟಿ ಆಶ್ರಯದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಕುಂದಾಪುರ ವಕೀಲರ ಸಂಘ, ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ,ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಉಚಿತ ಕಾನೂನು ಅರಿವು ನೆರವು ಮಾಹಿತಿ ಕಾರ್ಯಕ್ರಮ ಬೀಜಾಡಿ ಮಿತ್ರಸೌಧದಲ್ಲಿ ಸೋಮವಾರ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿ ಮೊಗವೀರ ವಹಿಸಿದ್ದರು. ಕುಂದಾಪುರದ ವಕೀಲೆ ಕವಿತಾ ಕಾರ್ಯಕ್ರಮ ಉದ್ಘಾಟಿಸಿ ಕಾನೂನು ಅರಿವು ಬಗ್ಗೆ ಮಾಹಿತಿ ನೀಡಿದರು. ಬೀಜಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿಜಯಕುಮಾರಿ ಸದಸ್ಯರಾದ ವಾದಿರಾಜ ಹೆಬ್ಬಾರ್, ಮಂಜುನಾಥ್ ಕುಂದರ್, ವಿಶ್ವನಾಥ್ ಮೊಗವೀರ,ಚಂದ್ರ ಬಿ.ಎನ್, ಶೇಖರ್ ಚಾತ್ರಬೆಟ್ಟು,ಅನಿಲ್ ಚಾತ್ರಬೆಟ್ಟು,ಪ್ರಸನ್ನ ದೇವಾಡಿಗ,ಪೂರ್ಣಿಮ, ರಜಿನಾ ಜೂಲಿ ಉಪಸ್ಥಿತರಿದ್ದರು. ಬೀಜಾಡಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಗಣೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಪಂಚಾಯತ್ ಸಿಬ್ಬಂದಿ ನಾರಾಯಣ ವಂದಿಸಿದರು.