ಕುಂದಾಪುರ ಭಂಡಾರ್ಕಾರ್ಸ್: ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಗಣಪತಿ ಭಟ್.ಪಿ ಇವರಿಗೆ ಬೀಳ್ಕೊಡುಗೆ

JANANUDI.COM NETWORK

ಕುಂದಾಪುರ.ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು. ಇಲ್ಲಿ ಕನ್ನಡ ವಿಭಾಗದ ವತಿಯಿಂದ ಕನ್ನಡ ಸಹ ಪ್ರಾಧ್ಯಾಪಕರಾದ ಗಣಪತಿ ಭಟ್.ಪಿ ಇವರಿಗೆ ಬೀಳ್ಕೊಡುಗೆ ಸಮಾರಂಭ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿಯವರು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಗಣಪತಿ ಭಟ್ ರವರನ್ನು ನಾನು ಹಿಂದಿನಿಂದಲೂ ಗಮನಿಸಿದಂತೆ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ.ಕಷ್ಟಕರ ದಿನವಾದ ಕೊರೋನಾ ಸಂದರ್ಭದಲ್ಲಿಯೂ ಕೂಡ ತಂತ್ರಜ್ಞಾನದ ಆನ್ಲೈನ್ ತರಗತಿಯನ್ನು ನಿರ್ವಹಣೆ ಮಾಡಿರುವುದನ್ನು ನೆನಪಿಸಿಕೊಂಡರು.ವಿದ್ಯಾರ್ಥಿಗಳಿಗೆ ಒಳ್ಳೆಯ ಉಪನ್ಯಾಸಕ ನಾಗಿ ಕನ್ನಡ ಜ್ಞಾನಧಾರೆಯೆರೆಯುವಲ್ಲಿ ಪ್ರಯತ್ನಶೀಲರಾಗಿದ್ದರೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮ ಆಯೋಜಿಸಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರೇಖಾ. ವಿ.ಬನ್ನಾಡಿಯವರು ಸಹೋದ್ಯೋಗಿಯಾದ ಗಣಪತಿ ಭಟ್ .ಪಿ ಯವರು ಪ್ರತಿದಿನ ದೂರದ ಊರಿನಿಂದ ಬರುತ್ತಿದ್ದರೂ ಕೂಡ ಹಾಗೆ 20ವರ್ಷ ನಮ್ಮ ಜೊತೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಸಹಕಾರ ಮನೋಭಾವವನ್ನು ತೋರಿರುವುದನ್ನು ಸ್ಮರಿಸಿಕೊಂಡರು. ಸನ್ಮಾನಿತರಾದ ಗಣಪತಿ ಭಟ್ ರವರು ತಮ್ಮ ಕಲಿಕೆಯ ಕಾಲಘಟ್ಟವನ್ನು ನೆನಪಿಸಿಕೊಂಡರು.ಆಗ ಕೃಷಿಯ ಜೊತೆಗೆ ಓದು ಮತ್ತು ಉದ್ಯೋಗ ಎಲ್ಲಾ ಸಾಧ್ಯ ವಾಗುತ್ತಿತ್ತು.ಹಿರಿಯರ ಮಾರ್ಗದರ್ಶನ ಹಿಂದಿನ ಕಾಲದಲ್ಲಿ ಒದಗಿ ಬರುತ್ತಿತ್ತು.ಈಗಿನ ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೆ ಸಿಲುಕುತ್ತಿದ್ದಾರೆಂದು ತಮ್ಮ ಅನುಭವವನ್ನು ಹಂಚಿಕೊಂಡರು. ಕನ್ನಡ ಭಾಷಾ ವಿಭಾಗದ ಉಪನ್ಯಾಸಕ ಮಂಜುನಾಥ.ಕೆ.ಎಸ್ ರವರು ನಿರೂಪಣೆ ಗೈದರು.ಉಪನ್ಯಾಸಕ ಮೋಹನ್ ರವರು ಸ್ವಾಗತಿಸಿದರು.ಕನ್ನಡ ಉಪನ್ಯಾಸಕಿ ಮೈತ್ರಿ ಶೆಟ್ಟಿಯವರು ವಂದಿಸಿದರು.ವಿದ್ಯಾರ್ಥಿಗಳುಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.