ಭಂಡಾರ್ಕಾರ್ಸ್‍; ನಿವ್ರತ್ತಿ ಹೊಂದಿದ ಪ್ರಾಧ್ಯಾಪಕರ ಮತ್ತು ಸಿಬಂದಿಗೆ ಸನ್ಮಾನ

JANANUDI.COM NETWORK

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್‍ ಕಾಲೇಜಿನಲ್ಲಿ ಅಧ್ಯಾಪಕರ ಸಂಘದ ವತಿಯಿಂದ ಸರಕಾರಿ ಸೇವೆಯಿಂದ ನಿವೃತ್ತರಾದ ಕಾಲೇಜಿನ ಕನ್ನಡ ಪ್ರಾಧ್ಯಾಪಕರರಾದ ಪ್ರೊ.ಗಣಪತಿ ಭಟ್, ಮತ್ತು ಕಚೇರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ದಿನಕರ ಶೆಟ್ಟಿಗಾರ್ ಇವರನ್ನು ಗೌರವಿಸಲಾಯಿತು.
ಈ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ದಕನ್ನಡ ಪ್ರಾಧ್ಯಾಪಕರರಾದ ಪ್ರೊ.ಗಣಪತಿ ಭಟ್ ಅವರು ಮಾತನಾಡಿ ಸೇವೆಯಿಂದ ನಿವೃತ್ತನಾದ ನನಗೆ ನನ್ನ ಕೃಷಿ ವೃತ್ತಿ ಮುಂದುವರೆಸಿಕೊಂಡು ಹೋಗುವಂತೆ ಮಾಡಿದೆ. ಹಾಗೆಯೇ ವಿದ್ಯಾಥಿಗಳೊಂದಿಗೆ ಮತ್ತುಉಪನ್ಯಾಸಕರೊಂದಿಗಿನ ಭಾಂದವ್ಯವನ್ನು ನೆನಪಿಸಿಕೊಂಡರು.
ಪ್ರೊ.ಗಣಪತಿ ಭಟ್ ಅವರಕುರಿತು ಕನ್ನಡ ವಿಭಾಗ ಮುಖ್ಯಸ್ಥೆ ಡಾ.ರೇಖಾ ಬನ್ನಾಡಿ ಮಾತನಾಡಿದರು. ದಿನಕರ ಶೆಟ್ಟಿಗಾರ್ ಕುರಿತುಗೀತಾಪ್ರಭು ಮಾತನಾಡಿದರು.
ಈ ಸಂದರ್ಬದಲ್ಲಿ ವೇದಿಕೆಯಲ್ಲಿಕಾಲೇಜಿನ ಪ್ರಾಂಶುಪಾಲರಾದಡಾ.ಎನ್.ಪಿ.ನಾರಾಯಣ ಶೆಟ್ಟಿ,ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ,ಅಧ್ಯಾಪಕರ ಸಂಘದ ಅಧ್ಯಕ್ಷರಾದ ಶಂಕರನಾರಾಯಣ ಕೆ. ಉಪಸ್ಥಿತರಿದ್ದರು.
ಅಧ್ಯಾಪಕರ ಸಂಘದಖಜಾಂಚಿ ಮಂಜುನಾಥ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಗುರುದಾಸ ಪ್ರಭು ವಂದಿಸಿದರು. ಗೀತಾ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.