ಬೆಥನಿ ಎಜುಕೇಶನಲ್ ಸೊಸೈಟಿಯಎಜುಕೇಶನಲ್ ಸೊಸೈಟಿ (ರಿ) ಮಂಗಳೂರು ಅಮೃತ ಮಹೋತ್ಸವ

“ಸರ್ವರಿಗೂ; ವಿಶೇಷವಾಗಿ ಹಿಂದುಳಿದವರುಮತ್ತುಹೆಣ್ಣುಮಕ್ಕಳಿಗೆಪರಿಪೂರ್ಣಜೀವನಕ್ಕಾಗಿ ಪರಿವರ್ತನೀಯ ಶಿಕ್ಷಣ” ನೀಡುವ ಪಥದಲ್ಲಿ ಬೆಥನಿ ಎಜುಕೇಶನಲ್ ಸೊಸೈಟಿ (ರಿ) ಮಂಗಳೂರು

ಮಂಗಳೂರು : ಬೆಥನಿಎಜುಕೇಷನಲ್‍ಸೊಸೈಟಿ(ರಿ) (BES)ಪರಿವರ್ತನೀಯಶಿಕ್ಷಣದಲ್ಲಿದಾರಿದೀಪವಾಗಿದ್ದು,ತನ್ನ ಮಹತ್ವದ ಮೈಲುಗಲ್ಲೊಂದನ್ನುತಲುಪಿದೆ.ತನ್ನಅಮೃತ ಮಹೋತ್ಸವದ ಸಮಾರೋಪಆಚರಣೆಯನ್ನು2023ರ ಸೆಪ್ಟೆಂಬರ್18ರಂದು ಸೋಮವಾರದಂದುಆಚರಿಸಿಕೊಳ್ಳಲು ಸಜ್ಜಾಗಿದೆ. ಬೆಥನಿ ಎಜ್ಯುಕೇಷನಲ್ ಸೊಸೈಟಿಯನ್ನು4ನೇ ಸೆಪ್ಟೆಂಬರ್1948ರಂದು ಬೆಥನಿ ಸಂಸ್ಥಾಪಕರಾದದೇವರ ಸೇವಕ ರೇಮಂಡ್ ಫ್ರಾನ್ಸಿಸ್ ಕಾಮಿಲಸ್ ಮಸ್ಕರೇನ್ಹಸ್‍ರವರಆಶ್ರಯದಡಿ ಮದರ್ ಪೇತ್ರಾಅವರನ್ನು ಮೊದಲ ಅಧ್ಯಕ್ಷರನ್ನಾಗಿಸಿ ನೋಂದಾಯಿಸಲಾಯಿತು. ಸೊಸೈಟಿಗಳ ನೋಂದಣಿಕಾಯಿದೆ, 1860ರ ಅಡಿಯಲ್ಲಿ‘ಬೆಥನಿಎಜುಕೇಷನಲ್‍ಸೊಸೈಟಿ(ರಿ) ಮಂಗಳೂರುಎಂದು ನಾಮಕರಣ ಮಾಡಲಾಯಿತು. ದಾರ್ಶನಿಕ ನಾಯಕ ಮತ್ತುದೇವರ ಸೇವಕ ರೇಮಂಡ್ ಫ್ರಾನ್ಸಿಸ್‍ಕ್ಯಾಮಿಲಸ್ ಮಸ್ಕರೇನ್ಹಸ್‍ಅವರಆಶ್ರಯದಲ್ಲಿ, ಅದರ ಮೊದಲ ಅಧ್ಯಕ್ಷರಾದ ಮದರ್‍ಪೇತ್ರಾಬಿಎಸ್‍ಅವರ ಮಾರ್ಗದರ್ಶನ ಹಾಗೂ ಮೊದಲ ಕೌನ್ಸಿಲ್‍ಆಫ್ ಮ್ಯಾನೇಜ್‍ಮೆಂಟ್‍ನೊಂದಿಗೆ, ಬಿಇಎಸ್ ಶಿಕ್ಷಣ ಸಂಸ್ಥೆಯುಸಾಮಾಜಿಕ ಪ್ರಗತಿಯನ್ನುರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ

ಸವಾಲಿನ ಸಮಯದಲ್ಲಿಮೂಡಿದ ಭರವಸೆಯಬೆಳಕು:1921ರಲ್ಲಿ, ದೇವರ ಸೇವಕರೆಂದುಗುರುತಿಸಲ್ಪಟ್ಟಿರುವ, ಬೆಥನಿ ಕನ್ಯಾಮಠದ ಮತ್ತು ಬೆಥನಿ ಎಜುಕೇಷನಲ್‍ಸೊಸೈಟಿಯಸ್ಥಾಪಕ ಆರ್.ಎಫ್.ಸಿ.ಮಸ್ಕರೇನ್ಹಸ್‍ಅವರು ಆ ಕಾಲದಪರಿಸ್ಥಿತಿಯನ್ನುಸೂಕ್ಷ್ಮವಾಗಿ ಅವಲೋಕಿಸಿದಾಗಕಂಡುಬಂದಬಡತನ, ಅನಕ್ಷರತೆ, ಅಜ್ಞಾನ, ಲಿಂಗಅಸಮಾನತೆಮತ್ತುಗ್ರಾಮೀಣಬಡಜನರಪರಿಪೂರ್ಣವ್ಯಕ್ತಿತ್ವದವಿಕಾಸತೆಗೆಇರುವ ಅವಕಾಶಗಳಕೊರತೆಅವರ ಮನಸ್ಸನ್ನು ಬಡಿದೆಬ್ಬಿಸಿತು.ಈ ಸಂದರ್ಭದಲ್ಲಿತಮ್ಮ ಬದುಕನ್ನು ಮಾನವೀಯ ಸೇವೆಯ ಮೂಲಕ ದೇವರಿಗೆ ಸಮರ್ಪಿಸಲು ಬದ್ಧರಾದ ನಾಲ್ವರುಉದಾತ್ತ ಮತ್ತುದಿಟ್ಟ ಮಹಿಳಾ ಶಿಕ್ಷಕಿಯರಾದಭಗಿನಿಮಾರ್ಥಾಬಿಎಸ್, ಭಗಿನಿಕ್ಲೇರಾಬಿಎಸ್, ಭಗಿನಿಲೂಡ್ರ್ಸ್‍ಬಿಎಸ್‍ಮತ್ತುಭಗಿನಿಗಟ್ರ್ರೂಡ್ ಬಿಎಸ್‍ಅವರು ಸಂಸ್ಥಾಪಕರಗುರಿ, ಧ್ಯೇಯ ಮತ್ತುದೃಷ್ಟಿಕೋನಕ್ಕೆ ಸ್ಪಂದಿಸಿಅದನ್ನು ಪರಿಪೂರ್ಣಗೊಳಿಸಲು ಮುಂದಾದರು. ಈ ನಾಲ್ವರುಶಿಕ್ಷಕಿಯರು ಬೆಥನಿ ಕನ್ಯಾಮಠ ಮತ್ತು ಬೆಥನಿ ಎಜುಕೇಷನಲ್‍ಸೊಸೈಟಿಯಸ್ಥಾಪಕಸದಸ್ಯರಾದರು. ಸಮಾಜದಸಮಗ್ರಅಭಿವೃದ್ಧಿಯಾಗಬೇಕಾದರೆಹೆಣ್ಣುಮಕ್ಕಳುಮತ್ತುಮಹಿಳೆಯರನ್ನು ಸಬಲೀಕರಣಗೊಳಿಸಬೇಕು. ಅದರಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕ ಎಂಬ ಸತ್ಯವನ್ನುಅವರುಅರ್ಥಮಾಡಿಕೊಂಡರು.

ಪರಿವರ್ತನಾತ್ಮಕ ಶಿಕ್ಷಣದ ಗುರಿ: ಬೆಥನಿಎಜುಕೇಷನಲ್‍ಸೊಸೈಟಿಯಮೂಲ ಉದ್ದೇಶವುಪರಿವರ್ತನಾತ್ಮಕ ಶಿಕ್ಷಣವನ್ನು ನೀಡುವುದಾಗಿದೆ. “ಎಲ್ಲರಿಗೂ; ಅದರಲ್ಲೂ ವಿಶೇಷವಾಗಿ ಹಿಂದುಳಿದವರುಮತ್ತುಹೆಣ್ಣುಮಕ್ಕಳಿಗೆಪರಿಪೂಣ9ಜೀವನಕ್ಕಾಗಿ ಪರಿವರ್ತನಾತ್ಮಕ ಶಿಕ್ಷಣ” ಎಂಬದೃಢವಾದಸಿದ್ಧಾಂತವುಅದರ ಬೆಳವಣಿಗೆಯ ಹಿಂದಿನ ಪ್ರೇರಕ ಶಕ್ತಿಯಾಗಿದೆ.

ಅಮೃತ ಮಹೋತ್ಸವಆಚರಣೆ: ಮಂಗಳೂರಿನ ಬೆಂದೂರ್‍ನಲ್ಲಿರುವ ಸೈಂಟ್ ಸೆಬಾಸ್ಟಿಯನ್ ಚರ್ಚ್‍ನಲ್ಲಿ ಮಧ್ಯಾಹ್ನ3:30ಕ್ಕೆ ಧರ್ಮಪ್ರಾಂತ್ಯದಧರ್ಮಾಧ್ಯಕ್ಷರಾದಅತೀ ವಂದನೀಯಪೀಟರ್ ಪೌಲ್ ಸಲ್ಡಾನ್ಹಾಅವರಅಧ್ಯಕ್ಷತೆಯಲ್ಲಿ ಬಿಇಎಸ್‍ನಅಮೃತ ಮಹೋತ್ಸವಆಚರಣೆಯ ಸಮಾರೋಪಸಮಾರಂಭವುಕೃತಜ್ಞತಾ ಬಲಿಪೂಜೆಯೊಂದಿಗೆ ಆರಂಭಗೊಳ್ಳಲಿದೆ. ಇತರಧರ್ಮಾಧ್ಯಕ್ಷರುಗಳು, ಧರ್ಮಗುರುಗಳು, ಧಾರ್ಮಿಕಭಗಿನಿಯರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಪೆÇೀಷಕರು ಮತ್ತು ಹಿತೈಷಿಗಳು ಸೇರಿದಂತೆಗಣ್ಯ ಅತಿಥಿಗಳು ಈ ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಂಗಳೂರಿನ ಬೆಂದೂರಿನಲ್ಲಿರುವ ಸೈಂಟ್ ಸೆಬಾಸ್ಟಿಯನ್ ಪ್ಲಾಟಿನಂಜುಬಿಲಿ ಸಭಾಂಗಣದಲ್ಲಿ ಸಂಜೆ5:30ಕ್ಕೆ ನಿಗದಿಯಾಗಿರುವ ಸಾಂಸ್ಕøತಿಕಕಾರ್ಯಕ್ರಮದಲ್ಲಿ ಬೆಂಗಳೂರು ಮಹಾಧರ್ಮಪ್ರಾಂತ್ಯದಮಹಾಧರ್ಮಾಧ್ಯಕ್ಷರಾದಅತಿವಂದನೀಯಡಾ|ಪೀಟರ್‍ಮಚಾದೋಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಕರ್ನಾಟಕವಿಧಾನಸಭೆಯ ಸಭಾಧ್ಯಕ್ಷರಾದಶ್ರೀಯು.ಟಿ.ಖಾದರ್, ಮಂಗಳೂರುನಗರ,ದಕ್ಷಿಣ ವಿಧಾನಸಭಾಕ್ಷೇತ್ರದಶಾಸಕರಾದಶ್ರೀವೇದವ್ಯಾಸಕಾಮತ್‍ಮತ್ತುದಕ್ಷಿಣಕನ್ನಡಸಾವ9ಜನಿಕ ಶಿಕ್ಷಣ ಇಲಾಖೆಯಉಪನಿರ್ದೇಶಕರಾದಶ್ರೀದಯಾನಂದಆರ್ ನಾಯ್ಕ್‍ರವರು ಉಪಸ್ಥಿತರಿರುವರು.

ವಿವಿಧಬಿಇಎಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಈ ಅಮೃತ ಮಹೋತ್ಸವದಲ್ಲಿ ಬಿಇಎಸ್ ಧ್ಯೇಯೋದ್ದೇಶಗಳಾದನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಶಾಂತಿಮತ್ತುಸೌಹಾರ್ದತೆ, ಪರಿಸರದಕಾಳಜಿಮತ್ತುಉತ್ಕೃಷ್ಟತೆಹಾಗೂ ಸ್ವಾವಲಂಬನೆಗಾಗಿ ಶಿಕ್ಷಣದಬದ್ಧತೆಯವಿಷಯಗಳ ಬಗ್ಗೆ ಒತ್ತು ನೀಡುವ ವಿವಿಧ ಕಾಯ9ಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಸಹಭಾಗಿಗಳನ್ನು ಗೌರವಿಸುವುದು: ಕಳೆದ ಏಳೂವರೆ ದಶಕಗಳಲ್ಲಿ ಬಿಇಎಸ್‍ನಸವ9 ಕಾಯ9ಗಳಿಗೆ ಬೆನ್ನೆಲುಬಾಗಿ ನಿಂತು ಸಹಕರಿಸಿ, ಪ್ರೋತ್ಸಾಹಿಸಿದ ಎಲ್ಲಾ ಸಹಯೋಗಿಗಳಿಗೆ ಕೃತಜ್ಞತೆಯನ್ನುವ್ಯಕ್ತಪಡಿಸಲು ಈ ಆಚರಣೆಯುಒಂದು ಸುಸಂದಭ9ವಾಗಿದೆ.

ನಾಯಕತ್ವ ಮತ್ತು ಮೌಲ್ಯಗಳು: ಬೆಥನಿ ಎಜುಕೇಷನಲ್‍ಸೊಸೈಟಿಯ ಆಡಳಿತವುಬೆಥನಿ ಸಭೆಯಮಹಾಮಾತೆಅವರನಾಯಕತ್ವ ಮತ್ತುಅಧ್ಯಕ್ಷತೆಯಲ್ಲಿಹಾಗೂ ಬೆಥನಿ ಸಭೆಯ ಆಡಳಿತ ಮಂಡಳಿಯ ಸಹಕಾರದೊಂದಿಗೆ ನಡೆಯುತ್ತಿದೆ.ಪ್ರಸ್ತುತ, ಭಗಿನಿರೋಸ್‍ಸೆಲಿನ್‍ಬಿಎಸ್‍ಅವರುಬಿಇಎಸ್‍ಅಧ್ಯಕ್ಷರಾಗಿ, ಭಗಿನಿಶಾಂತಿಪ್ರಿಯಾಬಿಎಸ್‍ಉಪಾಧ್ಯಕ್ಷರಾಗಿಮತ್ತುಭಗಿನಿಸಂಧ್ಯಾಬಿಎಸ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಥನಿ ಎಜುಕೇಷನಲ್‍ಸೊಸೈಟಿಯ ಆಡಳಿತ ಮಂಡಳಿಯು ಜನರಲ್ ಕೌನ್ಸಿಲರ್‍ಗಳುಸೇರಿದಂತೆಒಟ್ಟು10 ಸದಸ್ಯರನ್ನು ಒಳಗೊಂಡಿದೆ.

ಭಾರತದಾದ್ಯಂತಧನಾತ್ಮಕ ಪ್ರಭಾವ:ಬೆಥನಿ ಎಜುಕೇಷನಲ್‍ಸೊಸೈಟಿಯುತನ್ನ ಹೆಜ್ಜೆಗುರುತನ್ನು ಭಾರತದಾದ್ಯಂತ ವಿಸ್ತರಿಸಿದೆ. ಪರಿವರ್ತನೀಯ ಶಿಕ್ಷಣವನ್ನು ಪಸರಿಸುವುದು ಮತ್ತು ಬೆಥನಿ ಎಜುಕೇಶನಲ್ ಸೊಸೈಟಿಯ ಮೂಲ ಮೌಲ್ಯಗಳಾದ ದೈವಾನುಭವ;ಅನುಕಂಪದಿಂದಕೂಡಿದ ಪ್ರೀತಿಎಲ್ಲರಿಗಾಗಿ ವಿಶೇಷವಾಗಿ ದೀನದಲಿತರಿಗಾಗಿ; ಸಂಘಟನೆ ಸಹಭಾಗಿತ್ವ ಮತ್ತು ಸಂಘಸ್ಫೂರ್ತಿ; ಪ್ರತಿಯೊಬ್ಬರ ಸಾಮಥ್ರ್ಯಗಳನ್ನು ಉತ್ಕೃಷ್ಟಗೊಳಿಸಿಮಾನವೀಯಸಮಾಜವನ್ನುನಿರ್ಮಿಸುವುದು;ಸತ್ಯ, ಪ್ರೀತಿ, ನ್ಯಾಯ ಮತ್ತು ಶಾಂತಿ; ಸರಳ ಜೀವನ ಮತ್ತುದುಡಿಮೆಯಘನತೆ;ಜೀವ, ನಿಸರ್ಗ, ಸಂಸ್ಕೃತಿ ಮತ್ತು ಧರ್ಮಗಳ ಬಗ್ಗೆ ಗೌರವಹಾಗೂರಾಷ್ಟ್ರಪ್ರೇಮ ಇವೆಲ್ಲವುಗಳನ್ನು ವಿದ್ಯಾರ್ಥಿಗಳಲ್ಲಿಮೂಡಿಸುವುದುಇದರಪ್ರಮುಖಆದ್ಯತೆಯಾಗಿದೆ.

ಬೆಥನಿ ಎಜುಕೇಷನಲ್‍ಸೊಸೈಟಿಯಿಂದ ನಡೆಸಲ್ಪಡುವ ಪ್ರೌಢಶಾಲಾ ವಿದ್ಯಾಥಿ9ಗಳಿಗೆ ಸಂಸ್ಥೆಯಿಂದರಚಿಸಲ್ಪಟ್ಟ ಬೆಥನಿ ಚಾಂಪಿಯನ್ಸ್ ಎಂಬ ಸಂಘದ ಮೂಲಕ ನಾಗರಿಕ ಮತ್ತುರಾಜಕೀಯ ನಾಯಕತ್ವದ ಸಾಧಕರಾಗಿ ಹಾಗೂ ಸಾಮಾಜಿಕ ಪ್ರಗತಿಯೊಂದಿಗೆಯುವಜನರಿಗೆ ಮಾರ್ಗದರ್ಶಕರಾಗಿ ಹೊರಹೊಮ್ಮಿಸಲುಪ್ರಯತ್ನಿಸಲಾಗುತ್ತಿದೆ.

ಸಂಸ್ಥೆಯ ಬೆಳವಣಿಗೆ: ಪ್ರಸ್ತುತ, ಬೆಥನಿ ಎಜುಕೇಷನಲ್‍ಸೊಸೈಟಿಯುಪ್ರಾಥಮಿಕ, ಮಾಧ್ಯಮಿಕ, ಪದವಿ ಪೂವ9 ಕಾಲೇಜುಗಳು ಮತ್ತುಎರಡು ಪದವಿ ಕಾಲೇಜುಗಳನ್ನು ಒಳಗೊಂಡು ಒಟ್ಟು135 ಸಂಸ್ಥೆಗಳನ್ನು ನಿರ್ವಹಿಸುತ್ತಿದೆ. ಇದು33ವಿದ್ಯಾಥಿ9 ನಿಲಯಗಳು ಮತ್ತು ಹಲವಾರುಅನೌಪಚಾರಿಕ ಶಿಕ್ಷಣ ಕೇಂದ್ರಗಳು, ಶಿಕ್ಷಕರ ತರಬೇತಿಕಾಲೇಜು ಮತ್ತುಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿಪರ ಶಿಕ್ಷಣ ಕೇಂದ್ರಗಳನ್ನು ಒಳಗೊಂಡಿದೆ. ಈ ಸಂಸ್ಥೆಗಳು ಭಾರತದ26 ರಾಜ್ಯಗಳು ಮತ್ತು53 ಧರ್ಮಪ್ರಾಂತ್ಯಗಳಲ್ಲಿ ಹರಡಿಕೊಂಡಿವೆ. ವೈವಿಧ್ಯಮಯ ಶೈಕ್ಷಣಿಕ ಕೊಡುಗೆಗಳ ಮೂಲಕ 82,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ನೀಡುತ್ತಾಉಜ್ವಲ ಭವಿಷ್ಯವನ್ನುರೂಪಿಸಲುಈ ಸಂಸ್ಥೆಯುಸಮರ್ಪಿತವಾಗಿದೆ.

ಈ ಸಂಸ್ಥೆಯ ಮೂಲ ಶಕ್ತಿಯು ಸಹಭಾಗಿತ್ವ ಎಂಬ ತತ್ವದಲ್ಲಿಅಡಗಿದೆ. ನಮ್ಮ ಹೆಚ್ಚಿನ ಸಂಖ್ಯೆಯ ಬೆಥನಿ ಸಹೋದರಿಯರುಧಮ9ಪ್ರಾಂತ್ಯದ ಇತರ ಆಡಳಿತ ಮಂಡಳಿಗಳೊಂದಿಗೆ ಜೊತೆಗೂಡಿ65 ಶಾಲೆಗಳು ಮತ್ತುಅನೇಕ ವಿದ್ಯಾಥಿ9 ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲಿಮೌಲ್ಯಾಧಾರಿತ ಮತ್ತುಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಮಾಜಿಕ ವಿಮೋಚನೆಯಗುರಿ: ಬೆಥನಿ ಭಗಿನಿಯರು ಬೆಥನಿ ಸಾಮಾಜಿಕ ಸೇವಾ ಕೇಂದ್ರಗಳ ಮೂಲಕ ಮಹಿಳೆಯರು, ಯುವಕರು, ಮಕ್ಕಳು, ವಲಸಿಗರು ಮತ್ತು ಸಮಾಜದ ಕೆಳಸ್ತರದಲ್ಲಿರುವವರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಬಂದಿರುತ್ತಾರೆ. ಅವರ ಸಾಮಾಜಿಕ ವಿಮೋಚನೆಯಧ್ಯೇಯವುಉನ್ನತಆದ್ಯತೆಯಾಗಿ, ಹಲವಾರು ಯೋಜನೆಗಳ ಮೂಲಕ ಸ್ವಾವಲಂಬನೆ, ಕೌಶಲ್ಯಆಧಾರಿತ ಶಿಕ್ಷಣ ಮತ್ತುಆರ್ಥಿಕ ಸದೃಢತೆ ಹಾಗೂ ಸುಸ್ಥಿರ ಜೀವನೋಪಾಯವನ್ನುಉತ್ತೇಜಿಸುತ್ತಿದೆ.

ರಾಷ್ಟ್ರೀಯಮತ್ತುಅಂತಾರಾಷ್ಟ್ರೀಯ ಮಟ್ಟದಲ್ಲಿಮಹಿಳೆಯರ ಸಶಕ್ತೀಕರಣಕ್ಕೆಯತ್ನ: ಭಾರತದಾದ್ಯಂತ56 ಸಾಮಾಜಿಕ ಸೇವಾ ಕೇಂದ್ರಗಳೊಂದಿಗೆ, ಬೆಥನಿ ಸಭೆಯು26 ರಾಜ್ಯಗಳ 937 ಪಟ್ಟಣ ಮತ್ತುಹಲವಾರುಗ್ರಾಮ ಪಂಚಾಯತ್‍ಗಳ ವ್ಯಾಪ್ತಿಗೆ ಸೇರಿದ4,20,000ಮಹಿಳೆಯರು, ಯುವಕರು ಮತ್ತು ಮಕ್ಕಳ ಜೀವನವನ್ನು ಸಬಲೀಕರಣಗೊಳಿಸಲು ಹೆಜ್ಜೆಇಟ್ಟಿದೆ. ಅಚಲವಾದ ಬದ್ಧತೆಯೊಂದಿಗೆ ಮಹಿಳೆಯರ ಸಬಲೀಕರಣದಲ್ಲಿ1921ರಿಂದಸಂಸ್ಥೆಯು ಮುಂಚೂಣಿಯಲ್ಲಿದೆ. ಬೆಥನಿ ಸಭೆಯ ಸಹೋದರಿಯರು ವಾಯುವ್ಯಆಫ್ರಿಕಾ,ತಾಂಜಾನಿಯಾ ಮತ್ತು ನೇಪಾಳದಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ವೈದ್ಯಕೀಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಅಮೃತ ಮಹೋತ್ಸವದ ಅಂಗವಾಗಿ 75 ಹೆಣ್ಣುಮಕ್ಕಳಿಗೆ ತಮ್ಮಜೀವನವನ್ನುರೂಪಿಸುವಂತಹ ವೃತ್ತಿಪರ ಶಿಕ್ಷಣ ಪಡೆಯಲು ಸಹಾಯಧನ ನೀಡಿ ಸಹಕರಿಸುವವಿಶಿಷ್ಟ ಯೋಜನೆಯನ್ನು ಕೈಗೊಳ್ಳಲಾಗಿದೆ. ಮಾತ್ರವಲ್ಲದೆ ಪ್ರತೀವಷ9 1000ಬಡಮಕ್ಕಳಿಗೆ ವಿದ್ಯಾಥಿ9ವೇತನ ನೀಡುವುದರ ಮೂಲಕ ಅವರ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿದೆ.

ಬೆಥನಿ ಎಜುಕೇಷನಲ್‍ಸೊಸೈಟಿ(ರಿ) ಮಂಗಳೂರುತನ್ನಅಮೃತಮಹೋತ್ಸವದಸಂಭ್ರಮಾಚರಣೆಯ ಸುಸಂದಭ9ದಲ್ಲಿ, ತನ್ನ ಪರಿವರ್ತನಾತ್ಮಕ ಶಿಕ್ಷಣದ ಪರಂಪರೆಯನ್ನು ಮತ್ತು ಸಾಮಾಜಿಕ ಸಾಮರಸ್ಯ, ಶಾಂತಿ ಮತ್ತುಏಕೀಕೃತ ಮಾನವ ಸಮುದಾಯದಉತ್ತೇಜನಕ್ಕೆ ಮತ್ತು ಲಕ್ಷಾಂತರ ಮಕ್ಕಳ ಮೂಲಭೂತಗುಣಮಟ್ಟದ ಶಿಕ್ಷಣಕ್ಕೆ ಅದರಲ್ಲೂ ವಿಶೇಷವಾಗಿ ಮಾನವಹಕ್ಕುಗಳಿಂದವಂಚಿತವಾಗಿರುವಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣದ ಬದ್ಧತೆಗಾಗಿ ಭಗವಂತನಕೃಪೆಯನ್ನುಕೋರುತ್ತಾ,ಈ ಸಂಸ್ಥೆಯು ವಿಶ್ವದಾದ್ಯಂತ ಪಸರಿಸಿ ಶಿಕ್ಷಣ ಮತ್ತು ಸಮಾಜ ಸೇವೆಯ ಕೈಂಕಯ9ವನ್ನು ಮಾಡುತ್ತಾ ಸಮಾಜದಜನರಿಗೆ ಭರವಸೆಯ ಬೆಳಕಾಗಲಿ ಎಂಬುವುದೇ ನಮ್ಮೆಲ್ಲರ ಸದಾಶಯ.

ಸಿಸ್ಟರ್ ರೋಜ್ ಸೆಲಿನ್ ಬಿಎಸ್ -ಅಧ್ಯಕ್ಷೆ , ಸಿಸ್ಟರ್ ಶಾಂತಿ ಪ್ರಿಯ ಬಿಎಸ್- ಸಿಸ್ಟರ್ ಸಂಧ್ಯಾ ಬಿಎಸ್- ಕಾರ್ಯದರ್ಶಿ