

ಭಾರತೀಯ ಜೇಸಿಐನ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ಜೇಸಿಐ ವಲಯ 15ರ ಮಧ್ಯಂತರ ಸಮ್ಮೇಳನ – 2023 “ನಿಲುಮೆ” ಸಮಾರಂಭದಲ್ಲಿ ಪ್ರತಿಷ್ಠಿತ ಘಟಕ ಬೆಳ್ಮಣ್ಣು ಜೇಸಿಐ ಘಟಕದ ಅಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿ ಸಾರಥ್ಯದ ತಂಡಕ್ಕೆ ಅತ್ಯುತ್ತಮ ಘಟಕ ರನ್ನರ್ ಪ್ರಶಸ್ತಿ, ಸ್ಪೆಷಲ್ ಪ್ರೋಜೆಕ್ಟ್ ವಿನ್ನರ್ ಪ್ರಶಸ್ತಿ, ಸ್ವಿಲರ್ ಘಟಕ, ರಕ್ತದಾನ ವಿಭಾಗ, ಗಣರಾಜ್ಯೋತ್ಸವ, ಯುವ ದಿನಾಚರಣೆ, ಯುಗಾದಿ ದಿನಾಚರಣೆ ಸೇರಿದಂತೆ ಹಲವಾರು ವಿಭಾಗಗಳ ಪ್ರಶಸ್ತಿ ಪುರಸ್ಕಾರವನ್ನು ವಲಯಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷರಾದ ಬೋಳ ಸುಧಾಕರ್ ಆಚಾರ್ಯ, ಪೂರ್ವಾಧ್ಯಕ್ಷರಾದ ಸಂದೀಪ್ ವಿ. ಪೂಜಾರಿ, ಸತ್ಯನಾರಾಯಣ ಭಟ್, ಕೃಷ್ಣ ಪವಾರ್, ಉಪಾಧ್ಯಕ್ಷೆ ಜಯಶ್ರೀ ಪೂಜಾರಿ, ಯುವ ಜೇಸಿ ಅಧ್ಯಕ್ಷ ಕೀರ್ತನ್ ಪೂಜಾರಿ, ಮಹಿಳಾ ಜೇಸಿ ಸಂಯೋಜಕಿ ಸೌಜನ್ಯ ಕೋಟ್ಯಾನ್, ಸದಸ್ಯರಾದ ಸುದರ್ಶನ್ ಪೂಜಾರಿ, ಜೆಸಿಂತಾ, ಶ್ವೇತಾ ಆಚಾರ್ಯ, ಅನಿತಾ ಮೊದಲಾದವರಿದ್ದರು.