ಮಹಿಳೆಯರು ಸ್ವ-ಸಹಾಯ ಸಂಘಗಳ ಮೂಲಕ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಇಲ್ಲವಾದರೆ ವೃದ್ಧಾಶ್ರಮಗಳು ಹೆಚ್ಚುಸ್ಥಾಪಿಸಬೇಕಾಗುತ್ತದೆ:ಶೀನಪ್ಪ ಎಂ 

ಶ್ರೀನಿವಾಸಪುರ : ಮಹಿಳೆಯರು ಸ್ವ-ಸಹಾಯ ಸಂಘಗಳ ಮೂಲಕ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ತಮ್ಮ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಿಕೊಡಬೇಕು ಇಲ್ಲವಾದರೆ ವೃದ್ಧಾಶ್ರಮಗಳು ಹೆಚ್ಚುಸ್ಥಾಪಿಸಬೇಕಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ   ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಎಂ  ತಿಳಿಸಿದರು.

     ಪಟ್ಟಣದ ಮಾರುತಿ ಸಭಾ ಭವನದಲ್ಲಿ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಮಹಿಳೆಯರು ರಚಿಸಿಕೊಂಡಿರುವ ಸ್ವ-ಸಹಾಯ ಸಂಘಗಳು ಪಾರದರ್ಶಕವಾಗಿ ನಡೆಯಲು ಶಿಸ್ತು, ಚಟುವಟಿಕೆ ಹಾಗೂ ಜವಾಬ್ದಾರಿ ರೂಡಿಸಿಕೊಂಡರೆ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಪೂರಕವಾದ ವಾತಾವರಣ ರೂಪಿಸಿಕೊಳ್ಳಬಹುದು ಜೊತೆಗೆ ಸ್ವಾಭಿಮಾನದ ಕುಟುಂಬವನ್ನು ನಿರ್ವಹಿಸುವ ಆತ್ಮಸ್ಥೆöÊರ್ಯ ಮಹಿಳೆಯರಲ್ಲಿ ವೃದ್ಧಿಯಾಗುತ್ತದೆ ಮಹಿಳಾ ಸಬಲೀಕರಣಕ್ಕಾಗಿ ಮಾತೃಶ್ರೀ ಡಾ|| ಹೇಮಾವತಿ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘಗಳ ಮೂಲಕ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅವುಗಳ ಜೊತೆಗೆ ಒಟ್ಟು ೦೫ ಕೆರೆಗಳನ್ನು ಅಭಿವೃದ್ಧಿಗಾಗಿ ರೂ.೫೫ ಲಕ್ಷ ಮೊತ್ತವನ್ನು ವಿನಿಯೋಗ ಮಾಡಲಾಗಿರುತ್ತದೆ,  ತಾಲೂಕಿನಲ್ಲಿ ಒಟ್ಟು-೫೨೩೦೦ ಸದಸ್ಯರಿಗೆ ಆಯುಷ್ಮಾನ್ ಕಾರ್ಡ್, ಇ-Shಚಿಡಿm-೯೩೨೦, Pಒ ಆishಚಿ-೨೨೫೧ ಹಾಗೂ ಒಟ್ಟು ೨೨೦ ವಿದ್ಯಾರ್ಥಿಗಳಿಗೆ ರೂ.೧೪.೮೫ ಲಕ್ಷ ಶಿಷ್ಯವೇತನ, ೪೪ ಹಾಲಿನ ಡೈರಿಗಳ ಅಭಿವೃದ್ಧಿಗೆ sರೂ.೨೩.೦೦ ಲಕ್ಷ, ಒಟ್ಟು-೭೨ ದೇವಾಲಯಗಳ ಜೀರ್ಣೋದ್ದಾರಕ್ಕೆ ರೂ.೮೬.೫೧ ಲಕ್ಷ ವಿನಿಯೋಗ ಮಾಡಲಾಗಿರುತ್ತದೆ ಸೇರಿದಂತೆ ಸಮಾಜದ ಎಲ್ಲಾ ವರ್ಗದವರು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಮುನ್ನಡೆಯಲು ಮತ್ತು ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಹಿಳೆಯರ ಪ್ರತಿಭೆಯನ್ನು ಗುರ್ತಿಸಲು ನಿರಂತರ ಶ್ರಮಿಸಲಾಗುತ್ತಿದೆ ಹಾಗೂ ಇಡೀ ಕರ್ನಾಟಕ ರಾಜ್ಯಾದಾದ್ಯಂತ ಪ್ರತೀ ತಿಂಗಳು ೧೩,೫೩೧ ನಿರ್ಗತಿಕ ಕುಟುಂಬಗಳಿಗೆ ಮಾಶಾಸನವನ್ನು ನೀಡುತ್ತಿದೆ ಹಾಗೂ ಕೋವಿಡ್-೧೯ ಸಂದರ್ಭದಲ್ಲಿ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಹಾಗೂ ವಿಶೇಷ ಚೇತನರಿಗೆ ಅಗತ್ಯ ಪರಿಕರಗಳಾದ ವೀಲ್ ಚೇರ್, ವಾಟರ್ ಬೆಡ್, ೦೩ ಐeg Wಚಿಟಞiಟಿg Sಣiಛಿಞ,  Siಟಿgಟe ಐeg Wಚಿಟಞiಟಿg Sಣiಛಿಞ ಪರಿಕರಗಳನ್ನು ವಿತರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

     ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಕೀಲರಾದ ಭವ್ಯಶ್ರೀ ಮಾತನಾಡಿ ಮಹಿಳೆಯರು ಮೊದಲಿನಿಂದಲೂ ಚಳುವಳಿಗಳ ಮೂಲಕ ಹಕ್ಕುಗಳನ್ನು ಪಡೆಯಲಾಗಿದೆ ಕನಿಷ್ಠ ಮಹಿಳಾ ದಿನಾಚರಣೆಕ್ಕೆ ಹೋರಾಟ ಮಾಡಬೇಕಾದ ಅನಿವಾರ್ಯತೆ ಇತ್ತು ಬದಲಾದ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳ ತೇಜೋವಧೆಯಿಂದ ತಪ್ಪಿಸಲು ಮತ್ತು ರಕ್ಷಣೆ ಮಾಡಲು ವಿಶ್ವಸಂಸ್ಥೆ ಲಿಂಗ ಸಮಾನತೆ ಆಧಾರದಲ್ಲಿ ತಂತ್ರಜ್ಞಾನ ಡಿಜಿಟಲೀಕರಣವನ್ನು ನೀಡಿರುವುದು ಶ್ಲಾಘನೀಯ ಆದರೂ ಇನ್ನು ಹಲವಾರು ಭಾಗಗಳಲ್ಲಿ ಗೊಡ್ಡು ಸಾಂಪ್ರದಾಯಗಳಾದ ಬಾಲ್ಯ ವಿವಾಯು, ಸತಿಸಹಗಮನ ಪದ್ದತಿ, ಸೇರಿದಂತೆ ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆಯುತ್ತಿದೆ ಇದೆಲ್ಲರ ರಕ್ಷಣೆಗಾಗಿ ಸರ್ವಧರ್ಮದ ಗ್ರಂಥವಾದ ಸಂವಿಧಾನದ ಅಡಿಯಲ್ಲಿ ಕಾನೂನು ಹೋರಾಟ ಮಾಡಬಹುದು ಕಾನೂನು ನಮ್ಮ ರಕ್ಷಣೆಗೆ ಬಳಸಿಕೊಳ್ಳಬೇಕೆ ಹೊರತು ದುರುಪಯೋಗಪಡಿಸಿಕೊಳ್ಳಬಾರದು ಇದುವರೆಗೂ ಎಲ್ಲಾ ಕ್ಷೇತ್ರಗಳಲ್ಲೂ ಸಾದಿಸಿದ ಹೆಣ್ಣು ಮಕ್ಕಳನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ತಮ್ಮ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು. 

      ಈ ಸಂಧರ್ಭದಲ್ಲಿ ವೇದಿಕೆಯಲ್ಲಿ   ಈ ಸಂದರ್ಭದಲ್ಲಿ  ಜಿಲ್ಲಾ ನಿರ್ದೇಶಕರಾದ ಮುರಳಿಧರ ಶೆಟ್ಟಿ ಕೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀವಾಣಿ, ತಾ.ಪಂ. ಮಾಜಿ ಸದಸ್ಯರಾದ ನಾಗವೇಣಿರೆಡ್ಡಿ ಹಾಗೂ ಶ್ರೀನಿವಾಸಪುರ ತಾಲೂಕಿನ ಯೋಜನಾಧಿಕಾರಿಗಳಾದ ಸುರೇಶ್ ಗೌಡ ಎಸ್ ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ಈರಮ್ಮ ನಾಗರಾಳ ಹಾಗೂ ತಾಲೂಕಿನ ೨೫ ಜ್ಞಾನವಿಕಾಸ ಕೇಂದ್ರದ ಸದಸ್ಯರು ಹಾಗೂ ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರು