

ಶ್ರೀನಿವಾಸಪುರ 3 : ಬೆಂಗಳೂರು ನಗರದ ವಿಜಯನಗರ ಬಡಾವಣೆಯಲ್ಲಿ ತರಗತಿಗಳು ನಡೆಸಲಾಗುತ್ತದೆ 2026ನೇ ವರ್ಷದಲ್ಲಿ ಪರೀಕ್ಷೆ ಬರೆಯಲು ಎಲ್ಲಾ ಸಮುದಾಯದ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯಾವುದೇ ಪದವೀಧರರು ಯು.ಪಿ.ಎಸ್.ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅವಕಾಶವಿದೆ ಎಂದು ಆರ್ಯ ವೈಶ್ಯ ಮಹಾಸಭೆಯ ಜಿಲ್ಲಾಧ್ಯಕ್ಷ ಕೆ.ಆರ್.ಶಿವಕುಮಾರ್ ಮಾಹಿತಿ ನೀಡಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕರ್ನಾಟಕ ಆರ್ಯ ವೈಶ್ಯಮಹಾಸಭೆ ವತಿಯಿಂದ ಪತ್ರಿಕಾ ಗೋಷ್ಟಿ ನಡೆಸಿ ವಾಸವಿ ಆಕಾಡಮೆಯಿಂದ ನಡೆಸುವ ವಿವಿಧ ಕಾರ್ಯಾಗಾರದ ಬಗ್ಗೆ ಮಾತನಾಡಿದರು.
2026ರಲ್ಲಿ ನಡೆಯುವ ಯು.ಪಿ.ಎಸ್.ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಆಸಕ್ತ ವಿದ್ಯಾರ್ಥಿಗಳಿಗೆ ಮಾತ್ರ, ಇಲ್ಲಿ ನಡೆಸುವ ಎಲ್ಲಾ ತರಗತಿಗಳು ಸಂಪೂರ್ಣ ಉಚಿತವಾಗಿರುತ್ತದೆ. ಯಾವುದೇ ಸಮುದಾಯದ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ನಿಯಮಾನುಸಾರ ಪ್ರವೇಶವನ್ನು ಪಡೆಯಲು ಅವಕಾಶವಿದೆ.
ಪ್ರವೇಶಾಸಕ್ತ ವಿದ್ಯಾರ್ಥಿಗಳು ವಾಸವಿ ಅಕಾಡೆಮಿಯು ನಡೆಸುವ ಸಾಮಾನ್ಯ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತೀರ್ಣರಾಗಬೇಕಿರುತ್ತದೆ. ರಾಷ್ಟ್ರ ಮಟ್ಟದಲ್ಲಿ 2-3 ದಶಕಗಳಿಂದ ತರಬೇತಿ ನೀಡುತ್ತಿರುವ ಅನುಭವಿಗಳು, ಪರಿಣಿತರೂ ಆದ ಶಿಕ್ಷಕ ವೃಂದವನ್ನು ಆಕಾಡೆಮಿ ಹೊಂದಿದೆ. ಹಲವಾರು ಮಾಜಿ ಹಾಗೂ ಹಾಲಿ ಐ.ಎ.ಎಸ್ ಅಧಿಕಾರಿಗಳು ಇಲ್ಲಿನ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ನೀಡುತ್ತಾ ಬಂದಿರುತ್ತಾರೆ. ತರಬೇತಿಯ ಅವಧಿ ಆರು (6) ತಿಂಗಳು ಮಾತ್ರ.,
ಈ ಮೇಲಿನ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ವಾಸವಿ ಅಕಾಡೆಮಿ ನಡೆಸುವ ತರಗತಿಗಳಿಗಾಗಿ ಸೇರಬಯಸುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ಆರ್ಯ ವೈಶ್ಯಮಹಾಸಭೆಯಿಂದ 20ಕ್ಕೂ ಹೆಚ್ಚು ಯೋಜನೆಗಳ ಮೂಲಕ ಪ್ರತಿ ತಿಂಗಳು ಸುಮಾರು 1800ಕ್ಕೂ ಮೀರಿದ ಕುಟುಂಬಗಳಿಗೆ ಸಹಾಯ ಸವಲತ್ತುಗಳನ್ನು ನೀಡುತ್ತಿದ್ದು, ಅಲ್ಲದೆ ವಾಸವಿ ಅಕಾಡೆಮಿ ಮೂಲಕ ಕೇಂದ್ರ ಲೋಕ ಸೇವಾ ಆಯೋಗ ಐಎಎಸ್, ಐಪಿಎಸ್ ಇತ್ಯಾದಿ ಹಾಗೂ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಆಡಳಿತಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಊಟ, ವಸತಿ ಸೌಲಭ್ಯಗಳು ಇರುತ್ತದೆ.
ಜಿಲ್ಲಾ ನಿರ್ದೇಶಕರಾದ ಎಸ್.ಆರ್.ಅಮರನಾಥ್ ಮಾತನಾಡಿ ಸಂದ್ಯಾಶ್ರೀ ಯೋಜನೆವತಿಯಿಂದ 1500 ಮಾಶಾನವನ್ನು ನೀಡಲಿದ್ದೇವೆ , ಬಿಇ ಪದವಿಯಲ್ಲಿ ಅತಿ ಹೆಚ್ಚುಅಂಕ ಗಳಿಸಿದ ವಿದ್ಯಾರ್ಥಿ ಬಿ.ಆರ್.ದರ್ಶನ್ರವರಿಗೆ ಉಚಿತವಾಗಿ ಲ್ಯಾಪ್ಟಾಪ್ ನೀಡಲಾಗಿದೆ ಹಾಗೂ ಇಂದು ಪಟ್ಟಣದ ನಾಲ್ವರಿಗೆ ಮಾಶಾನವನ್ನು ನೀಡಲಿದ್ದೇವೆ ಎಂದು ಮಾಹಿತಿ ನೀಡಿದರು.
ಆರ್ಯವೈಶ್ಯ ಮಹಾಸಭೆಯ ಜಿಲ್ಲಾ ಉಪಾಧ್ಯಕ್ಷ ಎಂ.ಆರ್.ಆನಂದ್, ವೈ.ಬಿ.ರಮೇಶ್, ತಾಲೂಕು ಆರ್ಯ ವೈಶ್ಯ ಸಂಘದ ಕಾರ್ಯದರ್ಶಿ ಕೆ.ವಿ.ಸೂರ್ಯನಾರಾಯಣಶೆಟ್ಟಿ, ಯುವ ಜನ ಮಹಾಸಭಾ ಮಾಧ್ಯಮ ಮತ್ತು ಮಾಹಿತಿ ಚೆರ್ಮೆನ್ ಗಣೇಶ್ರೆಡ್ಡಿ, ಪರಿಸರ ಚೆರ್ಮನ್ ನವೀನ್ಕುಮಾರ್, ಜಿಲ್ಲಾ ನಿರ್ದೇಶಕರಾದ ಅನಿಲ್ಕುಮಾರ್, ಆಂಜನೇಯಲು, ಸೋಮಯಾಜಹಳ್ಳಿ ಆರ್ಯವೈಶ್ಯ ಮಂಡಲಿ ನಿರ್ದೇಶಕ ನಾಗೇಂದ್ರಪ್ರಕಾಶ್, ಸಮುದಾಯದ ಮುಖಂಡರಾದ ಹರಿ, ಗಿರೀಶ್ ಇದ್ದರು.
30, ಎಸ್ವಿಪುರ್ 3 : ವಾಸವಿ ಕಲ್ಯಾಣ ಮಂಟಪದಲ್ಲಿ ಸೇವಾ ಕೇಂದ್ರ ವಾಸವಿ ಆಕಾಡೆಮಿ ವತಿಯಿಂದ ಪತ್ರಿಕಾ ಗೋಷ್ಟಿ ನಡೆಸಿ ವಾಸವಿ ಆಕಾಡಮೆಯಿಂದ ನಡೆಸುವ ವಿವಿಧ ಕಾರ್ಯಾಗಾರದ ಬಗ್ಗೆ ಕೆ.ಆರ್.ಶಿವಕುಮಾರ್ ಮಾತನಾಡಿದರು.
