ಶೃಂಗೇರಿ ಶ್ರೀಗಳ ಆಗಮನದ ಹಿನ್ನಲೆ : ವಿವಿಧ ಸಂಘ/ಸಂಸ್ಥೆ ಮುಖಂಡರ ಸಭೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಶೃಂಗೇರಿ ಶ್ರೀಶಾರದ ಪೀಠದ ಜಗದ್ಗುರು ಶ್ರೀವಿಧುಶೇಖರ ಭಾರತೀ ಮಹಾಸ್ವಾಮಿಗಳ ವಿಜಯ ಯಾತ್ರೆ ಕೋಲಾರ ನಗರಕ್ಕೆ ಜೂ.10 ರ ಶುಕ್ರವಾರ ಆಗಮಿಸಲಿದ್ದು, ಪೂರ್ವ ಸಿದ್ದತೆಗಳ ಕುರಿತು ಚರ್ಚಿಸಲು ಎರಡನೇ ಸುತ್ತಿನ ವಿವಿಧ ಸಂಘ/ಸಂಸ್ಥೆಗಳ, ಮುಖಂಡರ ಸಭೆಯನ್ನು ಮೇ 29ರ ಭಾನುವಾರ ಬೆಳಗ್ಗೆ 11.00 ಗಂಟೆಗೆ ಏರ್ಪಡಿಸಲಾಗಿದೆ.
ತಾಲ್ಲೂಕಿನ ಎಲ್ಲಾ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ತಪ್ಪದೇ ಸಭೆಗೆ ಬಂದು ವಿಜಯಯಾತ್ರೆಯನ್ನು ಯಶಸ್ವಿಗೊಳಿಸಲು ಶ್ರೀಶಂಕರ ಸೇವಾ ಟ್ರಸ್ಟ್ ಅಧ್ಯಕ್ಷ ಕಾರ್ತಿಕ್ ಕೃಷ್ಣಮೂರ್ತಿ ಮತ್ತು ಕೋಲಾರ ಶೃಂಗೇರಿ ಶ್ರೀ ಶಂಕರ ಮಠದ ಧರ್ಮಾಧಿಕಾರಿ ಜೆ.ಎನ್.ರಾಮಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ಮಾಹಿತಿಗಾಗಿ 9731040800 ಸಂರ್ಪಕಿಸಲು ಕೋರಿದ್ದಾರೆ.