ಬೀಜಾಡಿ : ಕೆನರಾ ಬ್ಯಾಂಕ್ ಕೆನರಾ ಚಿನ್ನದ ಸಾಲ: ಪ್ರಚಾರಕ್ಕೆ ಚಾಲನೆ

JANANUDI.COM NETWORK


ಬೀಜಾಡಿ: ಕೆನರಾ ಬ್ಯಾಂಕ್ ಚಿನ್ನದ ಸಾಲದ ಪ್ರಚಾರಕ್ಕೆ ಭಾನುವಾರ ಬೀಜಾಡಿ ಕೆನರಾ ಬ್ಯಾಂಕ್ ವಠಾರದಲ್ಲಿ ಚಾಲನೆ ನೀಡಲಾಯಿತು. ಬೀಜಾಡಿ ಕೆನರಾ ಬ್ಯಾಂಕ್ ಶಾಖಾ ಪ್ರಬಂಧಕ ಪಿ.ರವಿತೇಜ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಕೆನರಾ ಬ್ಯಾಂಕ್‍ನಿಂದ ಕಡಿಮೆ ಬಡ್ಡಿ ದರದಲ್ಲಿ ತುರ್ತು ಹಣಕಾಸು ಆವಶ್ಯಕತೆಗಳನ್ನು ಚಿನ್ನದ ಸಾಲದೊಂದಿಗೆ ಪೂರೈಸಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಬೀಜಾಡಿ ಕೆನರಾ ಬ್ಯಾಂಕಿನ ಅಧಿಕಾರಿಗಳಾದ ಮಹೇಶ್ ಪಡಿಯಾರ್, ಕುನಾ ಸಾಯಿ ವಿನೋಧ್, ಪೆರಿಂiÀi ಸ್ವಾಮಿ, ಸ್ಥಳೀಯರಾದ ಚಂದ್ರಶೇಖರ ಬೀಜಾಡಿ, ಸುರೇಂದ್ರ ಗೋಪಾಡಿ ಮೊದಲಾದವರು ಉಪಸ್ಥಿತರಿದ್ದರು.