ಬಸ್ರೂರು- ಕಥೊಲಿಕ್ ಸಭಾ, ಐ.ಸಿ.ವೈ.ಮ್, ವೈ.ಸಿ.ಎಸ್. ಸಂಘಟನೇಗಳ ಸಹಯೋಗದಲ್ಲಿ ಕುಂದಾಪುರ ರೈಲ್ವೆ ಸ್ಟೇಷನಲ್ಲಿ “ನಿರ್ಮಲ ಪರಿಸರ ಅಭಿಯಾನ”

ಬಸ್ರೂರು; ಕಥೊಲಿಕ್ ಸಭಾ ಉಡುಪಿ ಪ್ರದೇಶ(ರಿ) ಬಸ್ರೂರು ಘಟಕ , ಐ.ಸಿ.ವೈ.ಮ್ ಮತ್ತು ವೈ.ಸಿ.ಎಸ್ ಬಸ್ರೂರ್ ಇವರ ಸಹಯೋಗದಲ್ಲಿ ಮತ್ತು ಕಥೊಲಿಕ್ ಸಭಾ ಕುಂದಾಪುರ ವಲಯ ಇವರ ಮಾರ್ಗದರ್ಶನದೊಂದಿಗೆ ಕುಂದಾಪುರ ರೈಲ್ವೆ ಸ್ಟೇಷನಲ್ಲಿ “ ನಿರ್ಮಲ ಪರಿಸರ ಅಭಿಯಾನ” ಕಾರ್ಯಕ್ರಮ ದಿನಾಂಕ 02/10/2022 ರಂದು ಹಮ್ಮಿಕೊಳ್ಳಲಾಗಿತ್ತು. ಗಿರೀಶ್ ರಾಹ್ಹಳ್ಕರ್( ಎಸಿಸ್ಟಂಟ್ ಸೆಫ್ಟೀ ಒಫೀಸರ್ ಮತ್ತು ಟೆಲಿಕಮ್ಯೂನಿಕೆಷನ್ ಹೆಡ್ ಕ್ವಾರ್ಟರ್ ಮಡ್ಗಾಂವ್) ಇವರು ಎಲ್ಲಾ ಸಂಘಟನೆಯ ಅಧ್ಯಕ್ಷರಿಗೆ ಹ್ಯಾಂಡ್ ಗ್ಲೌಸ್ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
“ ಇಂತಹ ಕಾರ್ಯಕ್ರಮಗಳಿಂದ ಸ್ವಚತೆ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ “ ಎಂದು ಹೇಳಿ ಚಾಲನೆ ನೀಡಿದರು. ಕಥೊಲಿಕ್ ಸಭಾ ಕುಂದಾಪುರ ವಲಯದ ಅಧ್ಯಕ್ಷರಾದ ಶ್ರೀಮತಿ ಶಾಂತಿ ಪಿರೇರಾ ಸ್ವಚತೆ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ 50 ಕ್ಕೂ ಅಧಿಕ ಮಂದಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಬಸ್ರೂರು ಘಟಕದ ಅಧ್ಯಕ್ಷರಾದ ವಿಕ್ರಮ್ ಡಿ’ ಸೋಜ, ಕಾರ್ಯದರ್ಶಿ ಮರಿಯ ಡಿ’ ಸಿಲ್ವಾ ಐ.ಸಿ.ವೈ.ಮ್ ಅಧ್ಯಕ್ಷರಾದ ಪ್ರಿನ್ಸನ್ ಬಸ್ರೂರ್ , ವೈ.ಸಿ.ಎಸ್ ಅಧ್ಯಕ್ಷರಾದ ಗ್ಲೆನಿಟಾ , ಐ.ಸಿ.ವೈ.ಮ್ ಮತ್ತು ವೈ.ಸಿ.ಎಸ್ ನ ಎನಿಮೇಟರ್ ಅನುಷಾ ಡಿ’ ಕೋಸ್ಟಾ, ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮೇಬಲ್ ಡಿ’ಸೋಜಾ ನಿರೂಪಿಸಿದರು. ಹ್ಯಾನ್ಸಿ ಡಿ’ ಮೆಲ್ಲೊ ವಂದಿಸಿದರು.