![](https://jananudi.com/wp-content/uploads/2024/02/Screenshot-946-9.png)
![](https://jananudi.com/wp-content/uploads/2024/02/28srinivaspur.jpg)
ಶ್ರೀನಿವಾಸಪುರ : ಯಾವುದೇ ಧಾರ್ಮಿಕ ಸ್ಥಳಗಳ , ಶಾಲೆಗಳ ಸಮೀಪ ಯಾವುದೇ ಕಾರಣಕ್ಕೂ ಬಾರ್ ಅಂಡ್ ರೆಸ್ಟೋರೆಂಟ್ಗಳನ್ನು ತೆರಯಲು ಅನುಮತಿ ನೀಡದಂತೆ ಇಲಾಖೆಯನ್ನು ಗ್ರಾ.ಪಂ.ಮಾಜಿ ಸದಸ್ಯ ರಮೇಶ್ಬಾಬು ಒತ್ತಾಯಿಸಿದರು.
ತಾಲೂಕಿನ ಗೌನಿಪಲ್ಲಿಯ ಧರ್ಗಾದ ಬಳಿ ವಿವಿಧ ಸಮುದಾಯಗಳ ಮುಖಂಡರ ಸಮ್ಮುಖದಲ್ಲಿ ಧರಣಿ ನಡೆಸಿ ಗ್ರಾ.ಪಂ.ಪಿಡಿಒ ನಾರಾಯಣಸ್ವಾಮಿ ರವರಿಗೆ ಮನವಿ ಪತ್ರ ನೀಡಿ ಮಾತನಾಡಿದರು.
ಸುಮಾರು ಒಂದು ವರ್ಷದಿಂದಲೂ ಸಹ ನಿರಂತರವಾಗಿ ತಳ ಮಟ್ಟದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದೇವೆ , ಆದರೂ ಸಹ ಸಾರ್ವಜನಿಕರ ಮನವಿಗೆ ಸ್ಪಂದಿಸದೆ ಇಲಾಖೆ ಅನುಮತಿ ನೀಡಲು ಮುಂದಾಗಿದೆ ಎಂದು ಆರೋಪಿಸಿದರು.
ಸ್ಥಳಕ್ಕೆ ಸಂಬಂದಪಟ್ಟ ಅಧಿಕಾರಿಗಳು ಬಂದು ಬಾರ್ ಅಂಡ್ ರೆಸ್ಟೋರೆಂಟ್ನ್ನು ಅನುಮತಿ ಹಿಂಪಡೆಯುವ ತನಕ ಪ್ರತಿಭಟನೆ ಹಿಂಪಡೆಯುವದಿಲ್ಲ ವೆಂದು ಆಗ್ರಹಿಸಿದರು.
ಗ್ರಾಮಸ್ಥ ಅಮ್ಮಜದ್ಖಾನ್ ಮಾತನಾಡಿ ಗ್ರಾಮದಲ್ಲಿ ಎಲ್ಲಾ ಸಮುದಾಯದವರೂ ಜಾತಿ ಮತ ಬೇದವಿಲ್ಲದೆ ಭಾತೃತ್ವದ ಬಾವದೊಂದಿಗೆ ಇದ್ದೇವೆ. ಆದರೆ ಇಂದು ಎಲ್ಲಾ ಸಮುದಾಯಕ್ಕೂ ಬೇಕಾಗಿರುವ ಧಾರ್ಮಿಕ ಕ್ಷೇತ್ರವಾದ ಧರ್ಗಾದ ಬಳಿ ಬಾರ್ ಅಂಡ್ ರೆಸ್ಟೋರೆಂಟ್ಗೆ ಅಧಿಕಾರಿಗಳು ಅನುಮತಿ ನೀಡಿರುವುದು ಖಂಡನೀಯ . ಇಲ್ಲಿ ಯಾವುದೇ ಕಾರಣಕ್ಕೂ ಗ್ರಾಮಸ್ಥರ ಸಹಯೋಗದೊಂದಿಗೆ ಇಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ಗೆ ಪ್ರಾರಂಭಿಸಲು ಬಿಡುವುದಿಲ್ಲ ಎಂದು ಹೇಳಿದರು.
ಗ್ರಾ.ಪಂ.ಮಾಜಿ ಸದಸ್ಯ ಎಚ್.ಆರ್.ಹರಮತ್ತುಲ್ಲಾ, ಮುಖಂಡರಾದ ಎ.ಅಮೀರ್ಜಾನ್, ಜಿ.ಕೆ.ಸುಬ್ರಮಣಿ, ಆರೀಪ್, ಬಾಬು, ಅಮೀರ್ಜಾನ್, ಶೌಕತ್ಪಾಷ, ಅಯಾಜ್, ನವೀದ್ಪಾಷ, ಮಾಲಿಕ್ಪಾಷ, ಜಿ.ಕೆ.ಮಹಮ್ಮದ್ ರಫಿ ಇದ್ದರು.
![](https://jananudi.com/wp-content/uploads/2024/02/IMG_20240228_171441.jpg)
![](https://jananudi.com/wp-content/uploads/2024/02/IMG_20240228_171429.jpg)