ಜನ ವಿರೋಧಿ ಬಿಜೆಪಿ ಆಡಳಿತದಿಂದ  ಜನ ಸಾಮಾನ್ಯರು ಬೆಸತ್ತಿದ್ದು- ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವುದು ಖಚಿತ: ಡಿ.ಕೆ ಶಿವಕುಮಾರ್

JANANUDI.COM NETWORK

ಕುಂದಾಪುರ, ಮೇ. 20:  ಇಂದು ಬೆಳಿಗ್ಗೆ ‌ಯುವ ಮೇರಿಡಿಯನ್ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಕೆ.ಪಿ.ಸಿ.ಸಿ ಅಧ್ಯಕ್ಷ ಶ್ರೀ  ಡಿ.ಕೆ ಶಿವಕುಮಾರ್ ರವರು ಡಿಜಿಟಲ್ ಸದಸ್ಯತ್ವ, ಪ್ರತಿ ಬೂತ್ ನಲ್ಲಿ ಹೆಚ್ಚಿನ ನೊಂದಣಿಯನ್ನು ನೊಂದಾಯಿಸಿ ಬೂತ್ ಸಮಿತಿಯನ್ನು ರಚಿಸಬೇಕಾಗಿ ಕರೆಯನ್ನು ನೀಡಿದರು.

ಆಡಳಿತದಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳಿಂದ ಜನ ಸಾಮಾನ್ಯರು ಬೆಸತ್ತಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವುದು ಖಚಿತವೆಂದರು.   

  ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಜಿಲ್ಲಾಧ್ಯಕ್ಷ ಅಶೋಕ ಕೊಡವೂರು,ಯುವ ಮುಖಂಡರಾದ ಮಿಥುನ್ ರೈ, ಮಾಜಿ ಶಾಸಕರಾದ ಯು.ಆರ್ ಸಭಾಪತಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಬ್ಲಾಕ್ ಅಧ್ಯಕ್ಷರು ಭಾಗವಹಿಸಿದರು.