ಶ್ರೀನಿವಾಸಪುರ ತಾಲೂಕಿಗೆ ಹೊಸದಾಗಿ ನ್ಯಾಯಬೆಲೆ ಅಂಗಡಿಗಳ ಪ್ರಕಟಣೆ ಹೊರಡಿಸಲಾಗಿದೆ : ತಹಶೀಲ್ದಾರ್ ಶರೀನ್‍ತಾಜ್

ಶ್ರೀನಿವಾಸಪುರ : ಶ್ರೀನಿವಾಸಪುರ ತಾಲೂಕಿಗೆ ಸಂಬಂದಿಸಿದಂತೆ ಗ್ರಾಮಗಳಾದ ಆರ್.ತಿಮ್ಮಸಂದ್ರ, ನಾಗದೇನಹಳ್ಳಿ, ಯೆಚ್ಚನಹಳ್ಳಿ, ಮಟ್ಟಕನ್ನಸಂದ್ರ, ಯಲ್ದೂರು -2, ಶ್ಯಾಗತ್ತೂರು , ಯದರೂರು, ನೆಲವಂಕಿ, ಕಶೆಟ್ಟಿಹಳ್ಳಿ, ಕೂರಿಗೇಪಲ್ಲಿ , ಪಾತೂರುಗಡ್ಡ, ಅಡ್ಡಗಲ್-1, ಮರಸನಪಲ್ಲಿ , ಅಡ್ಡಗಲ್-2 ಒಟ್ಟು 14 ಗ್ರಾಮಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳಿಗೆ ಪ್ರಕಟಣೆಯನ್ನು ಹೊರಡಿಸಲಾಗಿದೆ ಎಂದು ತಹಶೀಲ್ದಾರ್ ಶರೀನ್‍ತಾಜ್ ಗುರುವಾರ ಪ್ರತಿಕಾ ಪ್ರಕಟಣೆಗೆ ತಿಳಿಸಿದರು.
ಖಾಸಗಿ ವ್ಯಕ್ತಿಗಳು, ವಿಕಲಚೇತನರು, ತೃತೀಯ ಲಿಂಗಿಗಳು ದಿನಾಂಕ 4-9-23 ರ ಸಂಜೆ 5;30 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು ಅಂದು ರಜಾ ದಿನವಾದಲ್ಲಿ ನಂತರದ ಕಛೇರಿ ಕರ್ತವ್ಯ ದಿನದ ಸಂಜೆ 5:30 ಗಂಟೆರೊಳಗೆ ಅರ್ಜಿ ಸಲ್ಲಿಸಬಹುದು. ನಿಗದಿಪಡಿಸಿದ ಅವಧಿಯ ನಂತರ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದರು.
ಅರ್ಜಿ ನಮೂನೆ ಹಾಗೂ ಇತರೆ ಮಾಹಿತಿಯನ್ನು ಸಂಬಂದಪಟ್ಟ ತಾಲೂಕು ಕಛೇರಿಯ ಆಹಾರ ಶಾಖೆಯಲ್ಲಿ ಅಥವಾ ಉಪನಿರ್ದೇಶಕರ ಕಛೇರಿ, ಆಹಾರ , ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಿಲ್ಲಾಡಳಿತ ಭವನ, ಕೋಲಾರ ಜಿಲ್ಲೆ ಇಲ್ಲಿ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.