

ಶ್ರೀನಿವಾಸಪುರ : ಪಟ್ಟಣದ ಪುರಸಭೆ ಕಛೇರಿ ಪಕ್ಕದ ಮಾರುಕಟ್ಟೆ ಸಂಕೀರ್ಣದಲ್ಲಿ ಮಂಗಳವಾರ ಇವಿಯಂ ಜಾಗೃತಿ ತರಬೇತಿ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಅಂಗಡಿ ವ್ಯಾಪಾರಿಗಳು ವಿವಿಪ್ಯಾಟ್ ನಲ್ಲಿ ತಾವು ದಾಖಲಿಸಿದ ಮತಗಳ ಬಗ್ಗೆ ಖಾತ್ರಿ ಪಡೆದರು. ಮತ್ತು ಇವಿಯಂ ಮತದಾನದ ಬಗ್ಗೆ ವಿಶ್ವಾಸವ್ಯಕ್ತಪಡಿಸಿದರು.
ತರಬೇತಿಯನ್ನು ಸೆಕ್ಟರ್ ಅಧಿಕಾರಿ ಜಿ.ಕೆ. ನಾರಾಯಣಸ್ವಾಮಿ ನಡೆಸಿಕೊಟ್ಟರು. ಮಾಸ್ಟರ್ ಟ್ರೈನರ್ ವಿ.ತಿಪ್ಪಣ್ಣ, ಪುರಸಭೆ ಮುಖ್ಯಾಧಿಕಾರಿ ವೈ,ಎನ್.ಸತ್ಯನಾರಾಯಣ್, ವ್ಯವಸ್ಥಾಪಕ ನವೀನ್ಚಂದ್ರ, ಪುರಸಭೆ ಹಿರಿಯ ಸದಸ್ಯ ಬಿ.ವೆಂಕಟರೆಡ್ಡಿ, ಕಛೇರಿ ಸಿಬ್ಬಂದಿ ಎನ್.ಶಂಕರ್, ನಾಗೇಶ್ ಇದ್ದರು